ಮಾಲೂರು,ಮೇ 05 :ಬುದ್ಧ ಪೂರ್ಣಿಮೆಯ ಅಂಗವಾಗಿ ನಗರವಾಸಿಗಳಾದ ಆಯುಷ್ಮತಿ ಗುಟ್ಟಮ್ಮ ಮತ್ತು ಆಯುಷ್ಮಾನ್ ಮುನಿಯಲ್ಲಪ್ಲ ನವರ ಕುಟುಂಬದ ವತಿಯಿಂದ 2587ನೇ ಬುದ್ಧ ಪೂರ್ಣಿಮೆಯನ್ನು ಅರ್ಥ ಪೂರ್ಣವಾಗಿ ಈ ಬಾರಿ ಆಯುಷ್ಮತಿ ಭಾರತಿ ಮತ್ತು ಶ್ರೀನಿವಾಸ್ ರವರ ಮನೆಯಲ್ಲಿ ತಮ್ಮ ಸಂಬಂಧಿಕರನ್ನು ಮತ್ತು ಸ್ನೇಹಿತರನ್ನು ಆಹ್ವಾನಿಸಿ ಬುದ್ಧ ಪ್ರಾರ್ಥನೆ ಮತ್ತು ಪ್ರವಚನ ಮೂಲಕ ನೆರವೆರಿಸಿದರು.
ಈ ಕಾರ್ಯಕ್ರಮದಲ್ಲಿ ಬೌದ್ಧ ಧಮ್ಮ ಪ್ರಚರಾಕರಾದ ಎಂ ಪಾಪಣ್ಣನವರು ಪ್ರಾರ್ಥನೆಯನ್ನು ಮಾಡಿಸಿದರು ಹಾಗೆಯೇ ಊರುಗೋಲು ವೈಚಾರಿಕ ಸಂಘದ ಅಧ್ಯಕ್ಷರಾದ ಎಸ್ ನಾರಾಯಣಸ್ವಾಮಿಯವರು ಬುದ್ಧ ಮತ್ತು ಅಂಬೇಡ್ಕರ್ ರವರ ಬಗ್ಗೆ ಪ್ರವಚನವನ್ನು ನೀಡಿ ಅರಿವು ಮೂಡಿಸಿದರು.
ಜೈ ಶ್ರೀನಿ ನಾಗಸ್ ರವರು ಈ ಬುದ್ಧ ಪೂರ್ಣಮೆಯನ್ನು ಸತತವಾಗಿ 8 ವರ್ಷಗಳಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದು ಇದರ ಜೊತೆಗೆ ತಮ್ಮ ಹಳ್ಳಿಯ ತನ್ನ ಸಮುದಾಯದವರಿಗೆ ಬುದ್ಧ, ಅಶೋಕ, ಅಂಬೇಡ್ಕರ್, ಪುಲೆ, ಪೆರಿಯರ್ ಕುವೆಂಪು ಬಗ್ಗೆ ಅರಿವು ಮುಗಿಸಿಕೊಂಡು ಯುವ ಸಮುದಾಯದಲ್ಲಿ ಹೊಸ ಚೈತನ್ಯವನ್ನು ತುಂಬುವ ಕೆಲಸವನ್ನು ಮಾಡಿಕೊಂಡು ಬಂದಿದಾರೆ.
ಬುದ್ಧ ಪೂರ್ಣಿಮೆಯನ್ನು ಶ್ರದ್ಧೆ ಮತ್ತು ಅರ್ಥ ಪೂರ್ಣವಾಗಿ ಆಚರಿಸಿದ್ದಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸ್ನೇಹಿತರು ಅಭಿನಂದನೆಗಳನ್ನು ತಿಳಿಸಿದರು.