Home ರಾಜ್ಯ ಹಾಸನ ನಾವು ಬುಧ್ಧ ಹೇಳಿದಾಗೆ ಪೂರಕವಾಗಿಲ್ಲ, ಮಾರಕವಾಗಿದ್ಧೇವೆ – ಎಂ. ಚಂದ್ರೇಗೌಡ ಬೇಸರ

ನಾವು ಬುಧ್ಧ ಹೇಳಿದಾಗೆ ಪೂರಕವಾಗಿಲ್ಲ, ಮಾರಕವಾಗಿದ್ಧೇವೆ – ಎಂ. ಚಂದ್ರೇಗೌಡ ಬೇಸರ

ಹಾಸನ : ಎಲ್ಲಾರು ಒಳ್ಳೆ ಸಂಘದಲ್ಲಿ ಇರಬೇಕು. ನೀತಿವಂತರಾಗಿರಬೇಕು, ಅನ್ಯಾಯಕ್ಕೆ ಕೈ ಹಾಕಬಾರದು, ಸನ್ಮಾರ್ಗದಲ್ಲಿ ನಡೆಯಬೇಕೆಂದು ಇದನ್ನೆ ಭಗವಾನ್ ಬುದ್ಧ, ಕನಕ ದಾಸರು, ವಿವೇಕಾನಂದರು, ಗಾಂಧೀಜಿ ಹೇಳಿದ್ರೂ ಆದರೇ ನಾವು ಪೂರಕವಾಗಿ ನಡೆಯುತ್ತಿಲ್ಲ. ಮಾರಕವಾಗಿ ನಡೆಯುತ್ತಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಬೇಸರವ್ಯಕ್ತಪಡಿಸಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರದಂದು ಹಮ್ಮಿಕೊಳ್ಳಲಾಗಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ ಅವರು ಸಮಾಜಕ್ಕಾಗಿ ಸಲ್ಲಿಸಿದ ಸೇವೆ ಅವಿಸ್ಮರಣಿಯವಾಗಿದ್ದು, ಸುಮಾರು 6ನೇ ಶತಮಾನ ಎರಡು ಸಾವಿರ ವರ್ಷಗಳ ಹಿಂದೆ ವಾಸವಾಗಿದ್ದು, ಅಂದು ಅವರು ಆಡಿದ ಮಾತುಗಳು ಪ್ರಸ್ತೂತವು ಕೂಡ ಶಾಶ್ವತವಾಗಿದ್ದು, ಆ ರೀತಿಯಾಗಿ ನಾವುಗಳೆಲ್ಲಾ ಬದುಕು ಸಾಗಿಸಬೇಕಾಗಿದೆ. ಸತ್ಯದ ಅನ್ವೇಶನೆಗೆ ಹೊರಟ ಸಿದ್ಧಾರ್ಥನಿಗೆ ಜ್ಞಾನೋಧಯವಾಗಿದ್ದು ಸುಮಾರು 12 ವರ್ಷಗಳ ನಂತರ. ಬುದ್ಧ ಅವರು ಯಾವತ್ತು ದೈವದ ಬಗ್ಗೆ, ಆತ್ಮದ ಬಗ್ಗೆ ಚರ್ಚೆ ಮಾಡಲಿಲ್ಲ. ಅವರು ಚರ್ಚೆ ಮಾಡಿರುವುದು ಪ್ರಸ್ತೂತದ ಬಗ್ಗೆ ಮಾತ್ರ. ಭೂತ ಕಾಲದ ಬಗ್ಗೆ ಏನು ಹೇಳಲಿಲ್ಲ.

ಭವಿಷ್ಯ ಕಾಲದ ಬಗ್ಗೆ ಚಿಂತನೆ ನಡೆಸಲಿಲ್ಲ. ಅವರ ವಿಚಾರ ಇರುವುದು ಕೇವಲ ವರ್ತಮಾನ ಕಾಲಕ್ಕೆ. ಇತ ಮಹಾನ್ ಮೇದಾವಿ ಎಂದರು. ಈ ಜಗತ್ತಿನಲ್ಲಿ ಎಲ್ಲಾರೂ ದುಃಖದಲ್ಲೆ ಇರುತ್ತಾರೆ. ಆಸೆಯೇ ದುಃಖಕ್ಕೆ ಮೂಲ ಕಾರಣ. ದುಃಖ ತ್ಯಜಿಸಿ ಹೇಗೆ ಹೊರಬರುವುದು, ಅದಕ್ಕೆ ಮಾರ್ಗಗಳು ಯಾವುದು? ಎಂದರೇ ಅಷ್ಟ ಮಾರ್ಗಗಳನ್ನು ಕಂಡು ಹಿಡಿದಿದ್ದಾರೆ. ಸರಿಯಾದ ಕ್ರಿಯೆ, ಸರಿಯಾದ ಆಲೋಚನೆ, ಸರಿಯಾದ ದೃಷ್ಠಿ, ಸವಿಸ್ತಾರವಾದ ಚಿಂತನೆ, ಏಕಾಗ್ರತೆ, ಸರಿಯಾದ ಜೀವನ ಉಪಾಯ ಇಂತಹ ಅಷ್ಟ ಮಾರ್ಗಗಳನ್ನು ಹಾಕಿಕೊಟ್ಟಿದ್ದಾರೆ ಎಂದು ಕಿವಿಮಾತು ಹೇಳಿದರು. ಇಂತಹ ಮಾರ್ಗಗಳನ್ನು ನಾವು ಅನುಸರಿಸಿಕೊಂಡು ಸಮದಾನದಿಂದ ಹೋಗಬೇಕು. ಇದನ್ನ ಇವತ್ತು ಒಂದು ದಿನ ಮಾತ್ರ ಕೇಳಿಕೊಂಡು ಹೋದರೇ ಸಾಧ್ಯವಾಗುವುದಿಲ್ಲ. ಇದನ್ನ ನಮ್ಮ ಮಕ್ಕಳಲ್ಲಿ, ನಮ್ಮ ಮನೆಗಳಲ್ಲಿ ಮಾತನಾಡಿ ಶಾಂತಿ, ಸಂಯಮದಿAದ ಜೀವನ ನಡೆಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ಎರಡು ಸಾವಿರ ವರ್ಷಗಳ ಹಿಂದೆ ಹೇಳಿದ ಮಾತುಗಳು ಇಂದಿಗೂ ಕೂಡ ಅನುಷ್ಠಾನಕ್ಕೆ ತರಲು ಆಗುತ್ತಿಲ್ಲ. ಈ ವಿಚಾರದಲ್ಲಿ ಎಡವುತ್ತಿದ್ದೇವೆ ಎಂದು ಬೇಸರವ್ಯಕ್ತಪಡಿಸಿದರು. ಎಲ್ಲಾರು ಒಳ್ಳೆ ಸಂಘದಲ್ಲಿ ಇರಬೇಕು. ನೀತಿವಂತರಾಗಿರಬೇಕು, ಅನ್ಯಾಯಕ್ಕೆ ಕೈ ಹಾಕಬಾರದು, ಸನ್ಮಾರ್ಗದಲ್ಲಿ ನಡೆಯಬೇಕೆಂದು ಇದನ್ನೆ ಕನಕ ದಾಸರು, ಬುಧ್ಧ, ವಿವೇಕಾನಂದರು, ಗಾಂಧೀಜಿ ಹೇಳಿದ್ದರು. ಆದರೇ ನಾವು ಪೂರಕವಾಗಿ ನಡೆಯುತ್ತಿಲ್ಲ. ಮಾರಕವಾಗಿ ನಡೆಯುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕವಾದರೂ ಪ್ರತಿಯೊಬ್ಬರೂ ಶಾಂತಿ, ಸಮಧಾನ, ಒಳ್ಳೆಯದನ್ನು ಬೆಳೆಸಿಕೊಂಡು ಒಳ್ಳೆಯರಾಗಿ ಒಳ್ಳೆಯ ಸಮಾಜ ಕಟ್ಟಿ ಸಾಮರಸ್ಯದಿಂದ ಬದುಕೋಣ ಎಂದು ಕರೆ ನೀಡಿದರು.


ಹೆಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ಬುದ್ಧ ತನ್ನ ಕಾಲಮಾನದಲ್ಲಿ ಜಗತ್ತು ಎಂತಹ ಸತ್ಯಗಳಿಂದ ದೂರವಾಗಿದೆ ಎಂದು ಮತ್ತೊಮ್ಮೆ ನೆನಪಿಸಿಕೊಟ್ಟಿದ್ದಾರೆ. ಬುದ್ಧ ಬಂದು ಅದನ್ನೆ ವಚನದಲ್ಲಿ ಹೇಳಿದ್ದಾರೆ. 750 ವರ್ಷಗಳ ನಂತರ ಗಾಂಧಿ ಬಂದು ಇದನ್ನೆ ಪ್ರಸ್ತಾಪ ಮಾಡುತ್ತಾರೆ. ಬ್ರಹ್ಮ, ವಿಷ್ಣು, ಮಹೇಶ್ವರ ಇದ್ದಾಗೆ ಬುದ್ಧ, ಬಸವ ಹಾಗೂ ಗಾಂಧೀಜಿ ನಮ್ಮ ಪರಂಪರೆಯ ತ್ರೀಮೂರ್ತಿಗಳು. ಇವರು ಹೇಳಿದನ್ನು ಎಲ್ಲಾ ಹರಗಿಸಿಕೊಂಡ ಮಹಾನ್ ಬಾವರು ಎಂದು ಹೇಳಿದರು.ಬೆಂಗಳೂರಿನ ಅಕ್ಕ ಐ.ಎ.ಎಸ್. ಅಕಾಡೆಮಿ ಮುಖ್ಯಸ್ಥ ಡಾ. ಶಿವಕುಮಾರ್ ಉಪನ್ಯಾಸದಲ್ಲಿ ಮಾತನಾಡಿ, ಬುದ್ಧ ಪೂರ್ಣಿಮೆಯನ್ನು ಭಗವಾನ್ ಬುದ್ಧನ ಜನ್ಮ, ಸತ್ಯದ ಜ್ಞಾನ ಮತ್ತು ಮಹಾಪರಿನಿರ್ವಾಣ ಎಂದು ಪರಿಗಣಿಸಲಾಗಿದೆ. ಬುದ್ಧ ಪೂರ್ಣಿಮೆಯು ಬುದ್ಧನ ಜೀವನಕ್ಕೆ ಸಂಬAಧಿಸಿಲ್ಲ. ಆದರೆ ಈ ಪೂರ್ಣಿಮಾ ದಿನಾಂಕದAದು, ಕಾಡಿನಲ್ಲಿ ಅಲೆದಾಡುವ ಮತ್ತು ಕಠಿಣ ತಪಸ್ಸು ಮಾಡಿದ ನಂತರ, ಬುದ್ಧನು ಬೋಧಗಯಾದಲ್ಲಿನ ಬೋಧಿ ವೃಕ್ಷದ ಕೆಳಗೆ ಸತ್ಯದ ಜ್ಞಾನವನ್ನು ಪಡೆದನು ಎನ್ನುವ ಕಾರಣಕ್ಕಾಗಿ ಆಚರಿಸಲಾಗುತ್ತದೆ. ಗೌತಮ ಬುದ್ಧರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಲು ಜನರನ್ನು ಪ್ರೇರೇಪಿಸಿದವರು. ಬುದ್ಧ ಪೂರ್ಣಿಮೆಯಂದು, ಭಗವಾನ್ ಬುದ್ಧನ ಅನುಯಾಯಿಗಳು ಅವರ ಬೋಧನೆಗಳನ್ನು ಆಲಿಸುತ್ತಾರೆ ಮತ್ತು ಅವರು ತೋರಿಸಿದ ಮಾರ್ಗವನ್ನು ಅನುಸರಿಸುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ ಎಂದರು.


ಭಗವಾನ್ ಬುದ್ಧ ಜಯಂತಿಯ ಅಂಗವಾಗಿ ಕಲಾಭವನದ ಆವರಣದಲ್ಲಿ ಹೊಯ್ಸಳ ಚಿತ್ರಕಲಾ ಪರಿಷತ್ತುನ ಚಿತ್ರಕಲಾ ಪ್ರದರ್ಶನವನ್ನು ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಜಿಲ್ಲಾ ಪಂಚಾಯತ್ ಉಪನಿರ್ದೇಶಕ ಚಂದ್ರಶೇಖರ್, ದಮ್ಮಾಚಾರಿ, ಭಾರತಿಯ ಬೌದ್ಧ ಮಹಾಸಭಾ ಅಧ್ಯಕ್ಷ ಬಸವರಾಜು, ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಮಲ್ಲಯ್ಯ ಬೌದ್ಧ, ಎನ್.ಬಿ. ವೀರಭದ್ರಯ್ಯ, ಅನಂತಸ್ವಾಮಿ, ತೋಟೇ±, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕದೂದ್ ಫೀರ್, ಜಿಲ್ಲಾ ಸರಕಾರಿ ನೌಕರರ ಸಂಘದ ಖಜಾಂಚಿ ಕೆ.ಆರ್. ಹೇಮಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಹೆಚ್.ಪಿ. ತಾರನಾಥ್ ಇತರರು ಉಪಸ್ಥಿತರಿದ್ದರು. ಯದೀಶ್ ಅವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.

You cannot copy content of this page

Exit mobile version