Wednesday, June 18, 2025

ಸತ್ಯ | ನ್ಯಾಯ |ಧರ್ಮ

ಉಪೇಂದ್ರ ವಿರುದ್ದ ‘ಅಟ್ರಾಸಿಟಿ ಕೇಸ್‌’ ದಾಖಲು,

ಕನ್ನಡ ಚಿತ್ರನಟ ಹಾಗೂ ನಿರ್ದೇಶಕ ಉಪೇಂದ್ರ ಅವರ ವಿರುದ್ಧ ʼಅಟ್ರಾಸಿಟಿ ಕಾನೂನಿನಡಿʼ ದೂರು ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ವಿಡಿಯೋ ಒಂದರಲ್ಲಿ ಮಾತನಾಡುತ್ತಾ ಕೆಳವರ್ಗವನ್ನು ನಿಂದಿಸುವ ಹಿನ್ನಲೆ ಹೊಂದಿರುವ ಗಾದೆಯೊಂದನ್ನು ಬಳಸಿದ್ದರು. ಈ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದ ನಂತರ ಅದನ್ನು ಡಿಲೀಟ್‌ ಮಾಡಿ ಕ್ಷಮೆ ಕೇಳಿದ್ದರು.

ಇದೀಗ ಉಪೇಂದ್ರ ವಿರುದ್ಧ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಧುಸೂಧನ್‌ ಎನ್ನುವವರು ದೂರು ನೀಡಿದ್ದಾರೆ. ಇದೇ ವೇಳೆ ನಟ ಉಪೇಂದ್ರ ಅವರ ವಿರುದ್ದ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಅಟ್ರಾಸಿಟಿ ಕೇಸ್‌ ದಾಖಲಾಗಿದ್ದು, ಅವರ ವಿರುದ್ದ ಕಠಿಣ ಕ್ರವನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಹಲಸೂರು ಗೇಟ್‌ ಠಾಣೆಯಲ್ಲೂ ದೂರು ದಾಖಲಾಗಿದ್ದು, ಈಗಾಗಲೇ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ FIR ದಾಖಲಾಗಿರುವ ಕಾರಣ ಹಲಸೂರು ಗೇಟ್‌ ದೂರಿನ ವಿಷಯದಲ್ಲಿ FIR ದಾಖಲಿಸಿಲ್ಲ ಎಂದು ದೂರುದಾರರು ಹೇಳಿದ್ದಾರೆ.

ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಬ್ರಾಹ್ಮಣ ಅಧಿಕಾರಿಯ ಮೂಲಕ ದೂರು ಕೊಡಿಸುವ ಮೂಲಕ ಪ್ರಕರವನ್ನು ಹ‍ಳ್ಳ ಹಿಡಿಸಲು ಪ್ರಯತ್ನಿಸಲಾಗುತ್ತಿದೆ, ಈ ಹಿಂದೆ ಜೈನ್‌ ಕಾಲೇಜ್‌ ಪ್ರಕರಣದಲ್ಲೂ ಹೀಗೇ ಮಾಡಲಾಗಿತ್ತು ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ನಾಳೆ ಈ ಕುರಿತು ಪೊಲೀಸ್‌ ಕಮಿಷರ್‌ ಅವರನ್ನು ಭೇಟಿಯಾಗುವುದಾಗಿ ಹೋರಾಟಗಾರರಾದ ಬಿ ಆರ್‌ ಭಾಸ್ಕರ್‌ ಪ್ರಸಾದ್‌, ಹ ರಾ ಮಹೇಶ್‌ ಮುಂತಾದವರು ತಿಳಿಸಿದ್ದಾರೆ.

ಇದೇ ವಿಷಯದ ಕುರಿತಾಗಿ ಆನೇಕಲ್‌ ತಾಲ್ಲೂಕಿನಲ್ಲಿಯೂ ದಲಿತ ಸಂಘರ್ಷ ಸಮಿತಿ ದೂರು ದಾಖಲಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page