ಬದ್ರೀನಾಥ್ ಕಾಣಿಕೆ ಕಳ್ಳತನದ ತನಿಖೆಗೆ ಸಮಿತಿ ರಚನೆ: ದೇವಾಲಯದ ಆಡಳಿತ ಸಮಿತಿ ನಿರ್ಧಾರ

ದೆಹಲಿ, ಜುಲೈ 5 : ಬದ್ರೀನಾಥ್ ದೇವಾಲಯಕ್ಕೆ ಭಕ್ತರು ಸಮರ್ಪಿಸಿದ ಕಾಣಿಕೆಗಳು ಮತ್ತು ದೇಣಿಗೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಲು ‘ಬದ್ರೀನಾಥ್-ಕೇದಾರನಾಥ್’ ದೇವಾಲಯ ಸಮಿತಿ (ಬಿಕೆಟಿಸಿ) ವಿಶೇಷ ಸಮಿತಿಯನ್ನು ರಚಿಸಿದೆ. ಸಿಸಿಟಿವಿ ದೃಶ್ಯಾವಳಿಗಳು, ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳು ಮತ್ತು ಇತರ ಪುರಾವೆಗಳ ಆಧಾರದ ಮೇಲೆ ಈ ಸಮಿತಿಯು ಸಮಗ್ರ ತನಿಖೆ ನಡೆಸಲಿದೆ.

ಬದ್ರೀನಾಥ್ ಧಾಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಆರೋಪಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಬಿಕೆಟಿಸಿ ತಿಳಿಸಿದೆ. ನಿಷ್ಪಕ್ಷಪಾತ ತನಿಖೆ ನಡೆಯುವಂತೆ ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ ಈ ಸಮಿತಿಯನ್ನು ರಚಿಸಿದ್ದಾರೆ ಮತ್ತು ಲಭ್ಯವಿರುವ ಎಲ್ಲಾ ಪುರಾವೆಗಳನ್ನು ಪರಿಶೀಲಿಸುವಂತೆ ಅವರು ಸಮಿತಿಯನ್ನು ಕೋರಿದ್ದಾರೆ ಎಂದು ಬಿಕೆಟಿಸಿ ಸಿಇಒ ಸೋಹನ್ ಸಿಂಗ್ ಹೇಳಿದ್ದಾರೆ.

ಅಯೋಧ್ಯೆ ರಾಮಮಂದಿರದ ಕಾಣಿಕೆ ಹಣದ ವಿಷಯದಲ್ಲಿ ಆರೋಪಗಳು ಕೇಳಿಬಂದ ಕೆಲವೇ ದಿನಗಳಲ್ಲಿ ‘ಬದ್ರೀನಾಥ್’ ದೇವಾಲಯದ ನಿರ್ವಹಣೆಯ ಮೇಲೆಯೂ ಆರೋಪಗಳು ಕೇಳಿಬಂದಿವೆ. ಈ ವಿವಾದವು ಉತ್ತರಾಖಂಡದಲ್ಲಿ ರಾಜಕೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ.

Related Articles

ಇತ್ತೀಚಿನ ಸುದ್ದಿಗಳು