Thursday, June 19, 2025

ಸತ್ಯ | ನ್ಯಾಯ |ಧರ್ಮ

ಬಳ್ಳಾರಿ ಗಣಿ ಕಾರ್ಮಿಕರ ಪಾದಯಾತ್ರೆ : ಮೂರನೇ ದಿನಕ್ಕೆ

ಬಳ್ಳಾರಿ : ಬಳ್ಳಾರಿ ಗಣಿ ಕಾರ್ಮಿಕರ ಪುನರ್ವಸತಿಗಾಗಿ ಒತ್ತಾಯಿಸಿ ಮಾಡುತ್ತಿದ ಪಾದಯಾತ್ರೆಯು ಇಂದು ಮೂರನೇ ದಿವಸಕ್ಕೆ ಕಾಲಿಟ್ಟಿದ್ದು, ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.

ಬಳ್ಳಾರಿ ಗಣಿ ಕಾರ್ಮಿಕರ ಪುನರ್ವಸತಿಗಾಗಿ ಒತ್ತಾಯಿಸಿ ದಿನಾಂಕ 11.10.2022ರಂದು ಬೆಳೆಗ್ಗೆ 10 ಗಂಟೆಯಿಂಧ ಸಂಡೂರಿನಿಂದ ಬಳ್ಳಾರಿ ವರೆಗೆ 70 ಕಿಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಪಾದಯಾತ್ರೆಗೆ ಹೋರಾಟಗಾರರಾದ ಮೇಧಪಾಟ್ಕರ್ ಮತ್ತು ನಟ ಚೇತನ್‌ರವರು ಬಳ್ಳಾರಿ ಗಣಿ ಕಾರ್ಮಿಕರ ಪರವಾಗಿ ಚಾಲನೆ ನೀಡಿದ್ದರು.  ಸಂಡೂರಿನ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಪ್ರಾರಂಭವಾದ ಬಳ್ಳಾರಿ ಗಣಿ ಕಾರ್ಮಿಕರ ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೇರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ.

ಪಾದಯಾತ್ರೆಯನ್ನು ಶುರು ಮಾಡಿದ್ದ ಬಳ್ಳಾರಿ ಗಣಿ ಕಾರ್ಮಿಕರ ಸಂಘವು ತೋರಣಗಲ್ಲು, ಕುಡಿತಿನಿ, ವಣಿವಿರಪುರ, ವಡ್ಡು, ಅಲ್ಲಿಪುರ, ಮತ್ತು ಇತರೆ ಪ್ರದೇಶಗಳ ಮೂಲಕ ತೆರಳಿತ್ತು. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ನೂರಾರು ಕಾರ್ಮಿಕರು ಕಾಲ್ನಡಿಗೆ ಜಾಥಾದಿಂದ ಬಳ್ಳಾರಿ ಜಿಲ್ಲಾಧಿಕಾರಿಯವರ ಕಚೇರಿ ಸೇರಿದ್ದಾರೆ. ಹಳ್ಳಿ-ಹಳ್ಳಿಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಮಿಕರ ಸಮಸ್ಯೆಗಳು ಮತ್ತು ಅವರ ಜೀವನ-ಜೀವನೋಪಾಯದ ಪರಿಸ್ಥಿತಿ ಕುರಿತು ಸಾಮಾನ್ಯ ಜನರಲ್ಲಿ ಅರಿವು ಮೂಡಿಸಿದ್ದರು. ಗಣಿ ಕಾರ್ಮಿಕರು ಕಳೆದ ಹತ್ತು ವರ್ಷಗಳಿಂದ ಎದುರಿಸುತ್ತಿರುವ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಅವರುಗಳಿಗೆ ದೊರಕಬೇಕಾದ ಪರಿಹಾರ ಮತ್ತು ಹಕ್ಕುಗಳನ್ನು ಕೇಳುತ್ತಾ, ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಪಾದಯಾತ್ರೆಯು ಬಳ್ಳಾರಿ ಜಿಲ್ಲಾಧಿಕಾರಿಯವರ ಕಚೇರಿಯನ್ನು ತಲುಪಿ, ಈ ಕೆಳಕಂಡ ಹಕ್ಕೋತ್ತಾಯಗಳನ್ನು ಈಡೇರಿಸಲು ಹೋರಾಟವನ್ನು ನಡೆಸಿದ್ದಾರೆ.

ಕರ್ನಾಟಕ ಸರ್ಕಾರದ ಸಚಿವರುಗಳು ಮತ್ತು ಸರ್ಕಾರಿ ಅಧಿಕಾರಿಗಳಲ್ಲಿ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಈಡೇರಿಸಲು ಮುಂದಿಡಲಾಗಿದೆ :

1. 2011 ರಲ್ಲಿ ಉದ್ಯೋಗ ಕಳೆದುಕೊಂಡ ಗಣಿ ಕಾರ್ಮಿಕರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ನೀಡಬೇಕು.

2. ಗಣಿ ಕಾರ್ಮಿಕರ ಕುಟುಂಬಕ್ಕೆ ನೀರಾವರಿ ಸೌಲಭ್ಯದೊಂದಿಗೆ 5 ಎಕರೆ ಭೂಮಿ ದೊರಕಬೇಕು.

3. ಕೆಲಸ ಪುನರಾರಂಭಗೊಂಡಿರುವ “ಎ” ಮತ್ತು “ಬಿ” ವರ್ಗದ ಗಣಿಗಳಲ್ಲಿ ಕೆಲಸ ಕಳೆದುಕೊಂಡ ಕಾರ್ಮಿರಿಗೆ ಮರು ಉದ್ಯೋಗ ಕಲ್ಪಿಸಿಕೊಡಬೇಕು.

4. ನಿವೃತ್ತಿ ವಯಸ್ಸನ್ನು ತಲುಪಿರುವ ಗಣಿ ಕಾರ್ಮಿಕರಿಗೆ ಮಾಸಿಕ ರೂ. 5,000/- ಪಿಂಚಣಿ ನೀಡಬೇಕು. 

5. ಗಣಿ ಕಾರ್ಮಿಕರಿಗೆ ನಿವೇಶನ ಮತ್ತು ವಸತಿ ವ್ಯವಸ್ಥೆ ಮಾಡಬೇಕು.

6. ಸಮುದಾಯ ಸೌಲಭ್ಯಗಳಾದ ಅಂಗನವಾಡಿ, ಸಮುದಾಯ ಭವನಗಳು, ಗ್ರಂಥಾಲಯ, ಕಾರ್ಮಿಕರ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಮಾಡಬೇಕು.

7. ಗಣಿ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಸೇವೆ ಕಲ್ಪಿಸಬೇಕು.

8. ಗಣಿ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಬೇಕು.

ಮೂರು ದಿನದ ಹಕ್ಕೊತ್ತಾಯದ ಪಾದಯಾತ್ರೆಯನ್ನು ಹೋರಾಟಗಾರರಾದ ಮೇಧಪಾಟ್ಕರ್‌ ಮತ್ತು ನಟ ಚೇತನ್‌ ಚಾಲನೆ ನೀಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 2000ಕ್ಕೂ ಅಧಿಕ ಗಣಿ ಸಂತ್ರಸ್ಥರನ್ನು ಕುರಿತು ಮಾತನಾಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೇಧಪಾಟ್ಕರ್‌ “ ಪಾದಯಾತ್ರೆಯು ಇಂದು ಜೀವನೋಪಾಯಕ್ಕಾಗಿ, ಸಮಾನ ಪಾಲು ಹಾಗೂ ಜೀವನಕ್ಕಾಗಿ ಮತ್ತು ಬದಲಾವಣೆಗೋಸ್ಕರವಾಗಿದೆ. ಗಣಿ ಮಾಫಿಯಾ ಮಾಡಿದ ಅನ್ಯಾಯ ನಮಗೆ ತಿಳಿದಿದೆ. ಇಂದು ದೇಶದ ಜಲ, ಅರಣ್ಯ ಮತ್ತು ಜಮೀನು ಎಲ್ಲವೂ ಖಾಸಗೀಕರಣವಾಗಿ ಮಾರ್ಪಟ್ಟಿವೆ. ಸರ್ಕಾರ ಕನಿಷ್ಠ ವೇತನ, ಕನಿಷ್ಠ ಬೆಂಬಲ ಬೆಲೆ ನೀಡಲು ಬಯಸುತ್ತಾರೆ. ಆದರೆ ನಮಗೆ ನಮ್ಮ ಸಮಾನ ಪಾಲು ಬೇಕು…ಕನಿಷ್ಠ ಅಲ್ಲ. ಖಾಯಂ ಆಗಿದ್ದ ಅನೇಕ ಕಾರ್ಮಿಕರು ಈಗ ಗುತ್ತಿಗೆ ಕಾರ್ಮಿಕರಾಗಿದ್ದಾರೆ. ಇದು ಕಾರ್ಮಿಕರ ಮೇಲೆ ನಡೆಯುತ್ತಿರುವ ಹಿಂಸಾಚಾರ ಎಂದು ಹೇಳಿ ಸಂತೋಷ್‌ ಹೆಗ್ಡೆ ಅವರ ವರದಿಗಳನ್ನು ಪ್ರಸ್ಥಾಪಿಸಿದ್ದರು.

“ಪಾದಯಾತ್ರೆಯಲ್ಲಿರುವ ಕಾಂಗ್ರೆಸ್‌ ಈ ಪಾದಯಾತ್ರೆಗೆ ಸಂಬಂಧಿಸಿದಂತೆ ಏನು ಮಾಡುತ್ತಿದೆ ಎಂಬುದಕ್ಕೆ ಉತ್ತರಿಸಬೇಕು. ಅಧಿಕಾರದಲ್ಲಿರುವ ಸರ್ಕಾರಕ್ಕೆ ಇದೇ ಪ್ರಶ್ನೆ ಕೇಳಬೇಕು. ಸರ್ಕಾರ ಈ ಕಾರ್ಮಿಕರಿಗೆ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದ್ದರು. ಅಂಬೇಡ್ಕರ್‌ ಕಾರ್ಮಿಕ ಮಂತ್ರಿಯಾಗಿ ತಂದ ಕಾನೂನುಗಳು ಇಂದಿಗೂ ಸಹ ಕಾರ್ಮಿಕರನ್ನು ರಕ್ಷಿಸುತ್ತಿವೆ. ಅವುಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಯತ್ನಿಸುತ್ತಿದೆ ಎಂದು ಶೋಷಿತರು ಒಗ್ಗೂಡುವ ಅಗತ್ಯತೆಯ ಬಗ್ಗೆ ನಟ ಚೇತನ್‌ ಅಹಿಂಸರವರು ಮಾತನಾಡಿದ್ದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page