ಬೆಂಗಳೂರು: ನವೆಂಬರ್ 1 ರಂದುʼಬಾರಿಸು ಕನ್ನಡ ಡಿಂಡಿಮವ ಹಾರಿಸು ಕನ್ನಡ ಬಾವುಟವʼ ಅಭಿಯಾನವನ್ನು ಜಾತ್ಯತೀತ ಜನತಾದಳ ಪಕ್ಷವು ಕೈಗೊಂಡಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಜೆಡಿಎಸ್ ಘಟಕ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ೧ರಂದು ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವುದರ ಮೂಲಕ ʼಬಾರಿಸು ಕನ್ನಡ ಡಿಂಡಿಮವ ಹಾರಿಸು ಕನ್ನಡ ಬಾವುಟವʼ ಅಭಿಯಾನವನ್ನು ಹಮ್ಮಿಕೊಂಡಿದ್ದು, ರಾಜ್ಯದ ಜನರು ಈ ಅಭಿಯಾನಕ್ಕೆ ಸಹಕರಿಸಬೇಕಾಗಿ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ವಿನಂತಿ ಎಂದು ತಿಳಿಸಿದೆ.