ಜನವರಿ 14 ರಿಂದ ಈಶಾನ್ಯ ಭಾರತದಿಂದ ಪಶ್ಚಿಮ ತೀರಕ್ಕೆ ಪ್ರಾರಂಭವಾಗಲಿರುವ ತನ್ನ “ಭಾರತ್ ನ್ಯಾಯ ಯಾತ್ರೆ” ಹೆಸರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಗುರುವಾರ ಮರುನಾಮಕರಣ ಮಾಡಿದೆ. ಅದರಂತೆ ಈ ಜಾಥಾವನ್ನು ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಎಂದು ಕರೆಯಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಎಲ್ಲಾ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು, ಪಿಸಿಸಿ ಮುಖ್ಯಸ್ಥರು ಮತ್ತು ಸಿಎಲ್ಪಿ ನಾಯಕರ ಸಭೆಯಲ್ಲಿ, ‘ಭಾರತ್ ಜೋಡೋ ಯಾತ್ರೆ’ ಜನರ ಮನಸ್ಸಿನಲ್ಲಿ ಹುದುಗಿರುವ ಬ್ರ್ಯಾಂಡ್ ಆಗಿದೆ ಎಂದು ಭಾವಿಸಲಾಗಿದೆ. ನಾವು ಅದನ್ನು ಕಳೆದುಕೊಳ್ಳಬಾರದು” ಎಂದು ಜೈರಾಮ್ ರಮೇಶ್ ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುವ ಭಾರತ್ ಜೋಡೋ ನ್ಯಾಯ ಯಾತ್ರೆ ಜನವರಿ 14 ರಂದು ಮಣಿಪುರದಿಂದ ಪ್ರಾರಂಭವಾಗಲಿದ್ದು, ಮಣಿಪುರದ ಜನಾಂಗೀಯ ಹಿಂಸಾಚಾರದ ನಂತರ ಇನ್ನೂ ಸಹಜ ಸ್ಥಿತಿಗೆ ತಲುಪಲು ಹೆಣಗಾಡುತ್ತಿರುವ ಈಶಾನ್ಯ ರಾಜ್ಯಕ್ಕೆ ಈ ಯಾತ್ರೆಯನ್ನು ಸಮರ್ಪಿಸಲಿದೆ ಎಂದು ತಿಳಿಸಿದ್ದಾರೆ.
66 ದಿನಗಳ 6,700-ಕಿಮೀ ಪೂರೈಸುವ ಈ ಮೆರವಣಿಗೆ ಮಹಾತ್ಮ ಗಾಂಧಿಯವರ ಜನ್ಮಸ್ಥಳವಾದ ಗುಜರಾತ್ನ ಪೋರಬಂದರ್ನಲ್ಲಿ ಮುಕ್ತಾಯಗೊಳ್ಳುವ ಮೊದಲು 15 ರಾಜ್ಯಗಳು ಮತ್ತು 100 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ಭಾರತ್ ಜೋಡೋ ನ್ಯಾಯ್ ಯಾತ್ರೆಯು ಇಂಫಾಲ್ನಿಂದ ಮಧ್ಯಾಹ್ನ 12.30 ಕ್ಕೆ ಪ್ರಾರಂಭವಾಗಲಿದೆ. ಇದು ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಅರುಣಾಂಚಲ್ ಪ್ರದೇಶ, ಮೇಘಾಲಯ ಮೂಲಕ ಹಾದುಹೋಗುತ್ತದೆ ಮತ್ತು ಮಧ್ಯ ಭಾರತವನ್ನು ತಲುಪುವ ಮೊದಲು ಬಂಗಾಳವನ್ನು ತಲುಪುತ್ತದೆ.
ಕಳೆದ ಬಾರಿಯಂತೆ ಯಾತ್ರೆಯು ಸಂಪೂರ್ಣವಾಗಿ ಕಾಲ್ನಡಿಗೆಯಲ್ಲಿ ಇರುವುದಿಲ್ಲ. ಪ್ರಯಾಣದ ಭಾಗಗಳಿಗೆ, ಪಕ್ಷವು ಬಸ್ಗಳನ್ನು ಬಳಸುತ್ತದೆ ಎಂದು ಜೈರಾಮ್ ರಮೇಶ್ ಇಂದು ಮಧ್ಯಾಹ್ನ ಸುದ್ದಿಗಾರರಿಗೆ ತಿಳಿಸಿದರು.