Home ಅಪರಾಧ ಬಿಜಾಪುರ ರಾಷ್ಟ್ರೀಯ ಉದ್ಯಾನದಲ್ಲಿ ಗುಂಡಿನ ಚಕಮಕಿ: ಇಬ್ಬರು ಪ್ರಮುಖ ಮಾವೋವಾದಿ ನಾಯಕರ ಹತ್ಯೆ

ಬಿಜಾಪುರ ರಾಷ್ಟ್ರೀಯ ಉದ್ಯಾನದಲ್ಲಿ ಗುಂಡಿನ ಚಕಮಕಿ: ಇಬ್ಬರು ಪ್ರಮುಖ ಮಾವೋವಾದಿ ನಾಯಕರ ಹತ್ಯೆ

0

ಬಿಜಾಪುರ(ಛತ್ತೀಸಗಢ): ಆಪರೇಷನ್‌ ಕಾಗರ್‌ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಉನ್ನತ ಮಟ್ಟದ ಮಾವೋವಾದಿ ನಾಯಕರನ್ನು ಗುರಿಯಾಗಿಸಿಕೊಂಡು ಮುನ್ನುಗ್ಗುತ್ತಿವೆ. ಈ ಕಾರ್ಯಾಚರಣೆಯಲ್ಲಿ ನಕ್ಸಲ್‌ ಪಡೆ ಇದೀಗ ತನ್ನ ಇನ್ನಿಬ್ಬರು ನಾಯಕರನ್ನು ಕಳೆದುಕೊಂಡಿದೆ.

ಮಾವೋವಾದಿ ನಾಯಕ ನಾಯ್ಡು ಸುಧಾಕರ್ ಸಾವಿಗೀಡಾದ 24 ಗಂಟೆಗಳ ನಂತರ ಇದೀಗ ಪ್ರಮುಖ ನಾಯಕ ಮೈಲಾರಪು ಅಡೆಲ್ಲು ಅಲಿಯಾಸ್ ಭಾಸ್ಕರ್ ಶುಕ್ರವಾರ ಹತರಾಗಿರುವುದಾಗಿ ವರದಿಯಾಗಿದೆ. ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶದಲ್ಲಿ ನಡೆದ ಎನ್ಕೌಂಟರ್‌ನಲ್ಲಿ ಇನ್ನೂ ಇಬ್ಬರು ಉನ್ನತ ಮಾವೋವಾದಿ ಕಮಾಂಡರ್‌ಗಳು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಿಂದ ಹೆಚ್ಚಿನ ಸಂಖ್ಯೆಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಬಿಜಾಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಮೂರು ದಿನಗಳಿಂದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದವು.

ಗುರುವಾರ ಮತ್ತು ಶುಕ್ರವಾರ ನಡೆದ ಎನ್ಕೌಂಟರ್‌ಗಳಲ್ಲಿ ಸುಧಾಕರ್ ಮತ್ತು ಭಾಸ್ಕರ್ ಹತರಾಗಿದ್ದಾರೆ. ತೆಲಂಗಾಣ ರಾಜ್ಯ ಸರ್ಕಾರವು ಭಾಸ್ಕರ್‌ ಅವರನ್ನು ಹಿಡಿದುಕೊಟ್ಟವರಿಗೆ 20 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರೆ, ಛತ್ತೀಸಗಢ ಸರ್ಕಾರವು ಇವರ ತಲೆಗೆ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಇನ್ನು ಸುಧಾಕರ್‌ ತಲೆಗೆ 40 ಲಕ್ಷ ರೂಪಾಯಿ ಮೊತ್ತದ ಬಹುಮಾನ ಘೋಷಿಸಲಾಗಿತ್ತು.

You cannot copy content of this page

Exit mobile version