ಹೊಸದೆಹಲಿ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಳಸಿಕೊಂಡು ಬಿಜೆಪಿ ಸರ್ವಾಧಿಕಾರದತ್ತ ಸಾಗುತ್ತಿದೆ ಎಂದು ದೆಹಲಿ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಪಿ ಶಾ ಟೀಕಿಸಿದ್ದಾರೆ.
ನ್ಯಾಯಾಲಯಗಳು ಮತ್ತು ಮಾಧ್ಯಮಗಳನ್ನು ದುರ್ಬಲಗೊಳಿಸುವುದು ಮತ್ತು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದು ಆ ಪ್ರವೃತ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಅಲ್ಪಸಂಖ್ಯಾತರು ಭಯದಲ್ಲಿ ಬದುಕುತ್ತಿದ್ದರೆ ನ್ಯಾಯಾಲಯಗಳು ಸುಮ್ಮನೆ ನೋಡುತ್ತಿವೆ ಎಂದರು. ಮನುಸ್ಮೃತಿಯನ್ನು ಬೆಂಬಲಿಸಿ ವಾದಿಸುವ ನ್ಯಾಯಮರ್ತಿಗಳು ಬಹುಸಂಖ್ಯಾತರ ಭಾಷೆಯಲ್ಲಿ ಮಾತನಾಡುತ್ತಾರೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯನ್ನು ‘ಚುನಾಯಿತ ಸರ್ವಾಧಿಕಾರ’ ಎಂದು ಬಣ್ಣಿಸಿದ ಅವರು, ವಿಡಿ ಸಾವರ್ಕರ್ ಪ್ರೇರಿತವಾದ ಹಳೆಯ ಹಿಂದುತ್ವದ ಮಹತ್ವಾಕಾಂಕ್ಷೆಗಳನ್ನು ಜಾರಿಗೆ ತರಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನೂಹ್ ಮತ್ತು ದೆಹಲಿ ಗಲಭೆ ಸೇರಿದಂತೆ ಹಲವೆಡೆ ನಡೆಯುತ್ತಿರುವ ನ್ಯಾಯಾಂಗಕ್ಕೆ ಸವಾಲು ಹಾಕುವ ಬುಲ್ಡೋಜರ್ ರಾಜಕೀಯವನ್ನು ಅವರು ಟೀಕಿಸಿದರು. ತುಳಿತಕ್ಕೊಳಗಾದ ಜನರ ಜೀವನವನ್ನು ಪುನರ್ನಿರ್ಮಿಸಲು ಯಾರು ಸಹಾಯ ಮಾಡುತ್ತಾರೆ ಎಂದು ಅವರು ಕೇಳಿದರು. ಇದನ್ನು ಪ್ರಶ್ನಿಸಿದ ಪಂಜಾಬ್-ಹರಿಯಾಣ ಹೈಕೋರ್ಟ್ ಪೀಠದಿಂದ ಪ್ರಕರಣವನ್ನು ವರ್ಗಾಯಿಸಿದ್ದನ್ನೂ ನೆನಪಿಸಿಕೊಂಡರು.
ಮಾನವ ಹಕ್ಕುಗಳ ಕಾರ್ಯಕರ್ತರನ್ನು ಬೇಟೆಯಾಡುವ ಆಡಳಿತವನ್ನು ಬೆಂಬಲಿಸುವ ಸುಪ್ರೀಕೋರ್ಟ್ ಚರ್ಯೆಗಳನ್ನು ಟೀಕಿಸಿದ ಅವರು ಇದಕ್ಕೆ ತೀಸ್ತಾ ಸೆಟಲ್ವಾಡ್ ಪ್ರಕರಣ ಇತ್ತೀಚಿನ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.