ಬೆಂಗಳೂರು: ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ದ ನಡಿಸುತ್ತಿರುವ ಭ್ರಷ್ಟಾಚಾರದ ಅಭಿಯಾನದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದು ‘ಭ್ರಷ್ಟರೇ ಈಗ ಭ್ರಷ್ಟಾಚಾರದ ವಿರುದ್ಧ ಅಭಿಯಾನ ಮಾಡುತ್ತಾರಂತೆ ಮಾಡಲಿ, ಕೊನೆಗೆ ಸತ್ಯಕ್ಕೇ ಜಯ ಸಿಗುತ್ತದೆ’ ಎಂದು ಹೇಳಿದರು.
ಕಾಂಗ್ರೆಸ್ನ ಹಳೆಯ ಹಗರಣ ಕೆದಕುತ್ತೇವೆ ಎನ್ನುವ ಬಿಜೆಪಿಯ ಪ್ರಯತ್ನವು ನೀರಿಲ್ಲದ ಬಾವಿಗೆ ಕೊಡ ಇಳಿಸಿದಂತೆಯೇ ಸರಿ! ಆದರೆ ಈಗ ಹಳೆಯ ಹಗರಣಗಳ ಭೂತ ಮೇಲೆದ್ದು ಬಂದು ಕಾಡ್ತಿರೋದು ಕಾಂಗ್ರೆಸ್ಗಲ್ಲ ಸ್ವತಃ ಬಿಜೆಪಿಗೆ. ಮಾಜಿ ಸಿಎಂ ಬಿಎಸ್ಐ @BSYBJP & ಕಟುಂಬದ ಅಕ್ರಮದ ತನಿಖೆ ಬಗ್ಗೆ ಹಾಲಿ #PayCM ಮೌನವ್ರತ ಮಾಡ್ತಿರೋದೇಕೆ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಕಾಂಗ್ರೇಸ್ ಟ್ವೀಟ್ ಮಾಡುವುದರ ಮೂಲಕ ಪ್ರಶ್ನೆ ಮಾಡಿದೆ