ಬೆಂಗಳೂರು: ಕಾಂತಾರಾ ಸಿನಿಮಾದಲ್ಲಿ ತೋರಿಸಲಾಗಿರುವ ಬೂತಾರಾದನೆ ಹತ್ತು ಹಲವು ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಖ್ಯಾತ ಚಿತ್ರನಿಟ ಚೇತನ್ ಅಹಿಂಸಾ ಅವರು ʼಭೂತಾರಾಧನೆ ಹಿಂದೂ ಸಂಸ್ಕೃತಿಯ ಭಾಗವಲ್ಲ ಅದು ಮೂಲನಿವಾಸಿ ಸಮುದಾಯಗಳ ಸಂಸ್ಕೃತಿʼ ಎಂದು ಟ್ವೀಟ್ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಚೇತನ್ ಅವರ ಹೇಳಿಕೆ ಬಲಪಂಥೀಯರಿಂದ ಸಾಕಷ್ಟು ಟ್ರೋಲ್ಗೆ ಒಳಗಾಗುತ್ತಿರುವಾಗಲೇ ಬಾರ್ಕೂರು ಸಂಸ್ಥಾನದಲ್ಲಿ ಆಶ್ರಮ ಹೊಂದಿರುವ ಸಂತೋಷ್ ಗುರೂಜಿ ಚೇತನ್ ಮಾತುಗಳಿಗೆ ಪೂರಕವೆಂಬಂತೆ ಹೇಳಿಕೆ ನೀಡಿದ್ದಾರೆ. ಅವರು ತುಳುನಾಡಿನ ಬೂತಾರಾಧನೆ ಕುರಿತು ಮಾತನಾಡುತ್ತಾ, ಬೂತಾರಾಧನೆ ಕರಾವಳಿಯ ಮೂಲನಿವಾಸಿ ಬುಡಕಟ್ಟುಗಳದ್ದೇ ಹೊರತು ಗುಡಿಗಳಲ್ಲಿ ದೇವರುಗಳನ್ನು ಪೂಜೆ ಮಾಡುವವರದ್ದಲ್ಲ ಎಂದಿದ್ದಾರೆ. ʼಕರಾವಳಿಯಲ್ಲಿ ಮೂಲನಿವಾಸಿಗಳು ಬುಡಕಟ್ಟು ಜನಾಂಗ ಮತ್ತು ಆದಿಜನಾಂಗದವರು ಅವರನ್ನು ನಾವು ಶೂದ್ರರು ಎಂದು ದೇವರಿಂದ ದೂರ ಮಾಡಿದಾಗ ಅವರು ಈ ದೈವಶಕ್ತಿಯ ಅನುಭವದಿಂದ ಆರಾಧನೆ ಮಾಡಲು ಶುರುಮಾಡಿದ್ದರು. ಬೂತಾರಾಧನೆ ಅವರ ಸಂಪತ್ತಾಗಿತ್ತು. ಅದು ಅವರ ಆರಾಧನಾ ಪದ್ದತಿಯಾಗಿತ್ತು. ಯಾಕೆಂದರೆ ದೇವರನ್ನುಮುಟ್ಲಿಕ್ಕಿಲ್ಲ, ದೇವರ ಪ್ರಸಾದವನ್ನು ಮುಟ್ಲಿಕ್ಕಿಲ್ಲ, ತೀರ್ಥವನ್ನೂ ಸಹ ಸರಿಯಾಗಿ ಮುಟ್ಲಿಕ್ಕಿಲ್ಲ ಎಂದಾಗ ನಮಗೆ ಇವೇನೂ ಬೇಕಾಗಿಲ್ಲ ಬೂತಗಳನ್ನೇ ನಾವು ಪೂಜೆ ಮಾಡ್ತೀವಿ ಎಂದು ಹೇಳಿ ಬೂತಾರಾದನೆ ಮಾಡಿದ್ರು. ಈ ಆದಿ ಸಮುದಾಯ ಏನಿತ್ತು ಇವರೇ ತನಗೆ ಇಷ್ಟವಾದ ರೀತಿಯಲ್ಲಿ ಆರಾಧನೆ ಮಾಡಿಕೊಂಡಿದ್ದರು. ಅಡಿಕೆ ಹಾಳೆಯಲ್ಲಿ ಹಂದಿ ಮುಖವಾಡಿ ಹಾಕಿಕೊಂಡು ಆರಾಧನೆ ಮಾಡ್ತಾ ಇದ್ರು. ಈ ಬುಡಕಟ್ಟು ಜನಾಂಗದವರು ಮಾಡುತ್ತಿದ್ದ ದೈವಾರಾಧನೆಗೆ ರಾಜಾಶ್ರಯ ನೀಡಿದವರು ಅಲುಪ ಅರಸರು. ಆಮೇಲೆ ಬೂತಗಳಿಗೆ ರಾಜನ್ ದೈವಗಳ ಸ್ಥಾನಮಾನ ಅವರು ಕೊಟ್ಟರುʼ ” ಎಂದು ಸಂತೋಷ್ ಗುರೂಜಿ ತಮ್ಮ ಅಬಿಪ್ರಾಯ ಹೇಳಿದ್ದಾರೆ. ಈಗ ಬಲಪಂಥೀಯ್ ಟ್ರೋಲ್ಗಳು ಏನು ಹೇಳುತ್ತಾರೆ ಎಂಬ ಪ್ರಶ್ನೆ ಜನಸಾಮಾನ್ಯರದ್ದಾಗಿದೆ.