ಬೆಂಗಳೂರು: ಹೊಸದಾಗಿ ಬಿಜೆಪಿ ಅಧ್ಯಕ್ಷರಾಗಿ ನಿಯೋಜಿತಗೊಂಡಿರು ಬಿವೈ ವಿಜಯೇಂದ್ರ ಹಲವು ದಿನಗಳ ದೇವಸ್ಥಾನಗಳ ಭೇಟಿ ಮತ್ತು ಹಿರಿಯ ನಾಯಕರುಗಳ ಭೇಟಿಯ ನಂತರ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಇಂದು ಬೆಳಗ್ಗೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥದಲ್ಲಿ ಹೋಮ ಹವನಗಳ ಜೊತೆಗೆ ಬಿಜೆಪಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮ ನೆರವೇರಲಿದೆ.
ಈ ಕಾರ್ಯಕ್ರಮದ ಅಂಗವಾಗಿ ಇಂದು ಬೆಳಗ್ಗೆ 9.45ಕ್ಕೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ವಿಜಯೇಂದ್ರರಿಗೆ ಪೂರ್ಣಕುಂಭ ಸ್ವಾಗತ ಕೋರಲಾಗುತ್ತದೆ. ಬಳಿಕ ಗೋಪೂಜೆ ನೆರವೇರಿಸಲಿದ್ದಾರೆ. ಬೆಳಗ್ಗೆ ಪೂರ್ಣಾಹುತಿಯಲ್ಲಿ ನಿಯೋಜಿತ ಅಧ್ಯಕ್ಷ ವಿಜಯೇಂದ್ರ ಭಾಗಿಯಾಗಲಿದ್ದಾರೆ. ಗಣಪತಿ ಹೋಮದ ಪೂರ್ಣಾಹುತಿ ನಂತರ ವಿಜಯೇಂದ್ರಗೆ ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಿನ್ನೆ ರಾತ್ರಿಯಿಂದಲೇ ಪೂಜೆ, ಹೋಮ ಹವನಗಳು ನೆರವೇರುತ್ತಿದೆ.
ಆತ್ಮೀಯ ಆಹ್ವಾನ. pic.twitter.com/HYtla2CarP
— Vijayendra Yediyurappa (Modi Ka Parivar) (@BYVijayendra) November 14, 2023
ಇಂದು ಬೆಳಗ್ಗೆ ತಮ್ಮ ತಂದೆ ಯಡಿಯೂರಪ್ಪನವರ ಆಶೀರ್ವಾದ ಪಡೆಯಲು ಅವರ ಮನೆ ಧವಳಗಿರಿಗೂ ತೆರಳಿದ್ದರು.
ಬಿಜೆಪಿಯಲ್ಲಿ ಇಷ್ಟು ದಿನ ಹೊಸ ಅಧ್ಯಕ್ಷರ ನೇಮಕಾತಿಯಾಗಿಲ್ಲ ಎನ್ನುವ ಬೇಸರವನ್ನು ಕಾರ್ಯಕರ್ತರನ್ನು ಕಾಡುತ್ತಿದ್ದರೆ ಈಗ ವಂಶ ರಾಜಕಾರಣಕ್ಕೆ ಬಿಜೆಪಿ ಕೂಡಾ ಅಡಿಯಿಟ್ಟಿದ್ದು ಅವರಲ್ಲಿ ಬೇಸರ ಮೂಡಿಸಿದೆ
ಈ ಕುರಿತು ಪಕ್ಷದ ಹಲವು ನಾಯಕರು ಹಲವು ಬಗೆಯ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಸಂಸದ ರಮೇಶ್ ಜಿಗಜಿಣಗಿ ಮಾತನಾಡಿ “ಎಪ್ಪತೈದು ವರ್ಷಗಳಿಂದ ಬರೀ ಫ್ಯೂಡಲ್ ಜಾತಿಗಳಿಗಾಗಿ ಕೆಲಸ ಮಾಡುವುದೇ ದಲಿತ ರಾಜಕಾರಣಿಗಳ ಕೆಲಸವಾಗಿದೆ. ಬಿಜೆಪಿಯಲ್ಲೂ ಈ ವಿಷಯದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ನಾನು ನನ್ನನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುತ್ತಿಲ್ಲ. ಪಕ್ಷದರಲ್ಲಿ ಹಲವು ದಲಿತ ನಾಯಕರೂ ಇದ್ದಾರೆ ಅವರನ್ನು ಪರಿಗಣಿಸಬಹುದಿತ್ತು” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
◆ವಿಜಯೇಂದ್ರ ಒಬ್ಬನೇ ಎಲ್ಲವೂ ಅಲ್ಲ – ಈಶ್ವರಪ್ಪ
— Karnataka Congress (@INCKarnataka) November 14, 2023
◆ವಿಜಯೇಂದ್ರ 3 ವರ್ಷ ಮಾತ್ರ ಅಧ್ಯಕ್ಷ – ಪೇಶ್ವೆ ಜೋಷಿಗಳು (ಕುಮಾರಸ್ವಾಮಿಯವರು ಕೊಟ್ಟ ಹೆಸರು!)
◆ವಿಜಯೇಂದ್ರರ ಪದಗ್ರಹಣಕ್ಕೆ ನಾನು ಹೋಗುವುದಿಲ್ಲ – ಸಿ. ಟಿ ರವಿ
◆………………. – ವಿ. ಸೋಮಣ್ಣ
◆ವಿಜಯೇಂದ್ರ ಬಗ್ಗೆ ನೋ ಕಾಮೆಂಟ್ಸ್ – ಬೆಲ್ಲದ್
◆ @blsanthosh ,…