Friday, June 20, 2025

ಸತ್ಯ | ನ್ಯಾಯ |ಧರ್ಮ

ಜಾನುವಾರ ಹಗರಣಕ್ಕೆ ಸಂಬಂಧಿಸಿ  ಟಿಎಂಸಿ ನಾಯಕನ ಮಗಳಿಗೆ ಸಿಬಿಐ ಪ್ರಶ್ನೆ

ಕೋಲ್ಕತ್ತಾ: ಜಾನುವಾರ ಕಳ್ಳ ಸಾಗಾಟಣೆ ಆರೋಪದ ಅಡಿಯಲ್ಲಿ ಬಂಧಿತವಾಗಿರುವ ಟಿಎಂಸಿ ನಾಯಕ ಅನುಬ್ರತಾ ಮೊಂಡಾಲ್‌ ಅವರ ಮನೆಗೆ ಸಿಬಿಐ ತಂಡವು ಭೇಟಿ ನೀಡಿದ್ದು ಪ್ರಕರಣಕ್ಕೆ ಸಂಬಂಧಿಸಿ ಅವರ ಮಗಳನ್ನು ವಿಚಾರಣೆ ಕೈಗೊಂಡಿದೆ.

ಮೂವರು ಮಹಿಳಾ ಅಧಿಕಾರಿಗಳನ್ನು ಒಳಗೊಂಡ ಕೇಂದ್ರಿಯಾ ತನಿಖಾ ದಳ (ಸಿಬಿಐ) ತಂಡವು, ಸುಕನ್ಯಾ ಮೊಂಡಾಲ್‌ ಅವರಿಗೆ ಪ್ರಕರಣಕ್ಕೆ ಸಬಂಧಿಸಿ ಪ್ರೆಶ್ನೆಗಳನ್ನು ಕೇಳಲಾಯಿತಿ ಎಂದು ಮೂಲಗಳು ತಿಳಿಸಿವೆ.

ಸುಮಾರು ಒಂದು ಗಂಟೆಗಳ ಕಾಲ ಟಿಎಂಸಿ ಬಿರ್ಭೂಮ್‌ ಜಿಲ್ಲಾಧ್ಯಕ್ಷರ ನಿಚುಪಟ್ಟಿ ನಿವಾಸದಲ್ಲಿ ಇದ್ದ ಸಿಬಿಐ ತಂಡವು, ಹೆಚ್ಚಿನ ತನಿಖೆಗೆ ಸಂಬಂಧಿಸಿ ಸಮೀಪದ ಅಂಚೆ ಕಛೇರಿಗೆ ತೆರಳಿದೆ. ನಂತರ ಸುಕನ್ಯಾ ಮೊಂಡಾಲ್‌ ತನ್ನ ತಂದೆಗೆ ಸಂಬಂಧಿಸಿದ ಅಕ್ಕಿ ಗಿರಾಣಿಯಲ್ಲಿ ಷೇರುಧಾರರಾಗಿದ್ದರು ಎಂದು ತಿಳಿದ ಸಿಬಿಐ ತಂಡವು, ರೈಸ್‌ ಮಿಲ್‌ಗೆ ಭೇಟಿ ನೀಡಿದ್ದು, ಕೆಲವು ವಾಹನಗಳನ್ನು ವಶಪಡಿಸಿಕೊಂಡಿದೆ. ಮಾಹಿತಿ ಪ್ರಕಾರ ವಾಹನಗಳು ಬೇರೆಯವರ ಒಡೆತನದಲ್ಲಿದ್ದವು ಮತ್ತು ಅವುಗಳನ್ನು ಟಿಎಂಸಿ ನಾಯಕರು ಬಳಸುತ್ತಿದ್ದರು ಎಂದು ಸಿಬಿಐ ಅಧಿಕಾರಿಗಳು ತಿಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page