Monday, February 10, 2025

ಸತ್ಯ | ನ್ಯಾಯ |ಧರ್ಮ

ಪ್ರಧಾನಿ ಸ್ಥಾನ ಬದಲಾಯಿಸಿ ಯುವಕರ ಭವಿಷ್ಯ ಉಳಿಸಲಿ – ಸಚಿವ ಸಂತೋಷ್ ಲಾಡ್ ಕಿಡಿ

ಹಾಸನ: ಪ್ರಧಾನಿ ಸ್ಥಾನಕ್ಕೆ ಬದಲಾವಣೆ ಅಗತ್ಯವಿದ್ದು, ಭಾರತವನ್ನು ಉಳಿಸಬೇಕಾದರೆ ಮೋದಿ ಅವರ ಜಾಗದಲ್ಲಿ ನಿತಿನ್ ಗಡ್ಕರ್ ಇಲ್ಲವೇ ಬೇರೆ ಯಾರಾದರೂ ಬರುವ ಮೂಲಕ ಯುವಕರ ಭವಿಷ್ಯ ಉಳಿಸಬೇಕಾಗಿದೆ ಎಂದು ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಟೀಕಿಸಿದರು.

  

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮೋದಿ ಸರ್ಕಾರದ ನಿರ್ಧಾರಗಳ ವಿರುದ್ಧ ಕಿಡಿಕಾರುತ್ತಾ, “ಅಮೆರಿಕಾದಿಂದ ಕಾಲಿಗೆ ಚೈನ್ ಹಾಕಿಕೊಂಡು ತಂದು ಬಿಸಾಕಿದ್ರಲ್ಲ, ಇದು ಇಡೀ ದೇಶಕ್ಕೆ ಅವಮಾನ,” ಎಂದು ಪ್ರಹಾರ ಮಾಡಿದರು. ಅವರು, ಕಳೆದ ಹತ್ತು ವರ್ಷದಲ್ಲಿ ದೇಶದ ಆರ್ಥಿಕತೆ ಕುಸಿದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ‘ಭಾರತದಲ್ಲಿ ೧೮ ಲಕ್ಷ ಜನ ಪಾಸ್‌ಪೋರ್ಟ್ ಸೇರೆಂಡರ್ ಮಾಡಿದ್ದಾರೆ, ಆದರೆ ಇದರ ಬಗ್ಗೆ ಯಾವುದೇ ಚರ್ಚೆಯಾಗುತ್ತಿಲ್ಲ.












ಮೋದಿ ಸರ್ಕಾರದ ದಶಕದ ಆಡಳಿತದ ಲೆಕ್ಕವೇ ಇಲ್ಲವೆ? ಬಿಜೆಪಿಯವರು ೧೧ ವರ್ಷದಿಂದ ಏನು ಮಾಡಿದ್ರು? ಅದಕ್ಕೆ ಲೆಕ್ಕ ಇಲ್ಲ, ಬುಕ್ ಇಲ್ಲ ಎಂದು ಪ್ರಶ್ನಿಸಿ ಪ್ರಧಾನಮಂತ್ರಿ ಮೋದಿಯವರ ಜೀವನಶೈಲಿ ಕುರಿತು ಕಿಡಿಕಾರಿದರು. ಸಾಹೇಬ್ರುದು ೧೬ ಗಂಟೆ ಕೆಲಸ ದಿನಕ್ಕೆ ಮೂರು ಬಾರಿ ಬಟ್ಟೆ ಬದಲಾಯಿಸುತ್ತಾರೆ. ೧೬ ಗಂಟೆ ಕೆಲಸ ಮಾಡ್ತಾರೆ ಅಂತಾರೆ, ಆದರೆ ಅವರ ಕಣ್ಣುಗಳು ಹೊಳೆಯುತ್ತಿವೆ. ಏನು ಕೆಲಸ ಮಾಡ್ತಾರೆ ಅನ್ನೋದು ಜನರಿಗೆ ಗೊತ್ತಾಗುತ್ತಿಲ್ಲ ಎಂದು ಟೀಕಿಸಿದರು. ಎಲ್ಲಾ ರಾಜ್ಯಗಳಿಗೆ ಹೋಗಿ ಮೋದಿ ಸಾಹೇಬ್ರು ಪ್ರೆಸ್ ಮೀಟ್ ಮಾಡಲಿ. ಎಂದಾದರೂ ಓಪನ್ ಡಿಸ್ಕಷನ್ ಮಾಡಿದ್ದಾರಾ ಎಂದು ಪ್ರಶ್ನಿಸಿದರು.












ಕಳೆದ ಲೋಕಸಭಾ ಚುನಾವಣೆ ವೇಳೆ ಮೋದಿಯವರ ಮಂಗಳಸೂತ್ರ, ಪಾಕಿಸ್ತಾನ ಎರಡೇ ಮಾತನಾಡಿದ್ದು, ಪ್ರಧಾನಿ ಮೋದಿಯವರ ಹತ್ತು ವರ್ಷದ ಆಡಳಿತಕ್ಕೆ ತೀಕ್ಷ್ಯ ಟೀಕೆ ಮಾಡುತ್ತಾ, ಮೋದಿ ಇಲ್ಲದೆ ಬಿಜೆಪಿಗೆ ಯಾರೂ ಇಲ್ಲವೆ? ಕಳೆದ ಹತ್ತು ವರ್ಷಗಳ ನೋವು ಮುಂದುವರಿಯಲಿದೆ ಎಂದರು. ಪ್ರಧಾನಿ ಸ್ಥಾನಕ್ಕೆ ಬದಲಾವಣೆ ಅಗತ್ಯವಿದೆ. ಭಾರತ ಉಳಿಸಬೇಕಾದರೆ ಮೋದಿ ಅವರ ಜಾಗದಲ್ಲಿ ಕಾರ್ಯಕ್ಷಮತೆಯುಳ್ಳ ವ್ಯಕ್ತಿಯನ್ನು ನೇಮಕ ಮಾಡಬೇಕು. ಗಡ್ಕರಿ ಅಥವಾ ಬೇರೆ ಯಾರೆ ಆದರೂ ಬರಲಿ, ಯುವಕರ ಭವಿಷ್ಯ ಉಳಿಯಲಿ ಎಂದು ಸಲಹೆ ನೀಡಿದರು. ಮೋದಿ ಅವರ ಬೃಹತ್ ಪ್ರಚಾರ ತಂತ್ರವನ್ನೂ ಟೀಕಿಸಿ, ಪ್ರಧಾನಿ ಅವರ ಪಬ್ಲಿಸಿಟಿಗೆ ೬ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದು, ಖೇಲೋ ಇಂಡಿಯಾಗೂ ಅಷ್ಟು ಹಣ ಕೊಡಲ್ಲ ಎಂದು ಆರೋಪಿಸಿದರು. ಬಿಜೆಪಿಯವರಿಗೆ ಕೈಮುಗಿದು ಕೇಳ್ತಿನಿ ಪ್ರಧಾನಮಂತ್ರಿ ಬದಲಾಗಲಿ, ದೇಶ ಉಳಿಯಲಿ ಎಂದು ಕರೆ ನೀಡಿದರು.












ರಾಜ್ಯದಲ್ಲಿ ೨೦ ಲಕ್ಷ ನಕಲಿ ಕಾರ್ಡ್ ರದ್ದು ಮಾಡಲಾಗಿದ್ದು, ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಜಾಸ್ತಿ ಆಗುತ್ತಲೇ ನಕಲಿ ಕಾರ್ಡ್ ಕೂಡ ಜಾಸ್ತಿ ಆಗಿತ್ತು. ನಾವು ಒಂದು ವರ್ಷದಲ್ಲಿ ೨೦ ಲಕ್ಷ ನಕಲಿ ಕಾರ್ಡ್ ರದ್ದು ಮಾಡಿದ್ದೇವೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಜಿಲ್ಲೆಯಲ್ಲಿ ಹಾಸ್ಟೆಲ್ ಮಾಡಲು ಪ್ರಸ್ತಾಪ ಮಾಡಲಾಗಿದೆ ಎಂದರು. ಇನ್ನು ಅಸ್ಸಾಂ, ಇತರೆ ಭಾಗಗಳಿಂದ ಕೆಲಸಕ್ಕೆ ಅಕ್ರಮವಾಗಿ ಬರುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಮಾತನಾಡಿ, ಇದನ್ನು ಯಾರು ತಡೆಯಬೇಕು? ಕೇಂದ್ರ ಸರಕಾರ ಏನು ಮಾಡುತ್ತಿದೆ ಎಂದು ಉತ್ತರಿಸಿದರು.ಇದೆ ವೇಳೆ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ, ರಾಮಚಂದ್ರು, ಅಶೋಕ್ ಇದರರು ಉಪಸ್ಥಿತರಿದ್ದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page