ಛತ್ತೀಸ್ಗಢ್: ರಾಜ್ಯದಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಹಿಂದುಳಿದ ವರ್ಗಗಳಿಗೆ (OBC) ಪ್ರತ್ಯೇಕ ಸಲಹಾ ಮಂಡಳಿಗಳನ್ನು ರಚಿಸುವುದಾಗಿ ಮುಖ್ಯಮಂತ್ರಿ ಭೋಪೇಶ್ ಬಾಘೇಲ್ರವರು ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ಈ ಕ್ರಮವು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದೂಳಿದ ವರ್ಗಕ್ಕೆ ಸೇರಿದ ಜನರನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿದೆ, ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಮತ್ತು ಅವರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲರನ್ನಾಗಿಸುತ್ತದೆ” ಎಂದು ಹೇಳಿದರು.
2001 ರಿಂದ ಬುಡಕಟ್ಟು ಸಲಹಾ ಮಂಡಳಿಯು ಅಸ್ತಿತ್ವದಲ್ಲಿತ್ತು. ಆದರೆ ರಾಜ್ಯದಲ್ಲಿ ಎಸ್ಸಿ ಮತ್ತು ಒಬಿಸಿಗಳಿಗೆ ಇಂತಹ ಮಂಡಳಿಗಳನ್ನು ರಚಿಸಿರುವುದು ಇದೇ ಮೊದಲು ಎಂದರು.