Home ಬ್ರೇಕಿಂಗ್ ಸುದ್ದಿ ಹಾಸನ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ನಾಗರಿಕ ಸಮಿತಿ ಹಾಗೂ ವಿಶ್ವಪಥ ಬಳಗ

ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ನಾಗರಿಕ ಸಮಿತಿ ಹಾಗೂ ವಿಶ್ವಪಥ ಬಳಗ

ಹಾಸನ : 75 ವರ್ಷಗಳ ಇತಿಹಾಸವುಳ್ಳ ಹಾಸನ ನಗರದ ರವೀಂದ್ರ ನಗರ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಹಾಸನದ ಶಾಸಕರಾದ ಎಚ್ ಪಿ ಸ್ವರೂಪ್ ರವರು ಶಿಲಾವಿನ್ಯಾಸ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ನಾಗರಿಕ ಸಮಿತಿ ಹಾಗೂ ವಿಶ್ವಪಥ ಬಳಗ ಆರಂಭಿಸಿರುವ  ಸರ್ಕಾರಿ ಶಾಲೆಗಳ ಪುನರ್ಶ್ಚೇತನ ಅಭಿಯಾನಕ್ಕೆ ಡಾ. ಅಂಬೇಡ್ಕರ್ ಜನ್ಮದಿನಾಚರಣೆ ಪ್ರಯುಕ್ತ ಇಂದು ಚಾಲನೆ ನೀಡಲಾಯಿತು ಹನುಮಮ್ಮ ಶಾಲೆ ಎಂದೇ  ಖ್ಯಾತಿ ಹೊಂದಿರುವ ಈ ಶಾಲೆಯ ಕಟ್ಟಡವು ಶೀತಲವಾಗಿದ್ದ ಕಾರಣ ಒಂದು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 8 ಕೊಠಡಿಗಳ ನೂತನ ಕಟ್ಟಡವನ್ನು ಶಾಸಕ  ಹಾಗೂ ದಾನಿಗಳ ನೆರವಿನಿಂದ ನಿರ್ಮಿಸಲು ನಾಗರೀಕ ಸಮಿತಿಯು  ಉದ್ದೇಶಿಸಿದ್ದು ಮೂರು ಕೊಠಡಿಗಳನ್ನು ಕಟ್ಟಿಕೊಡಲು ಶಾಸಕ ಸ್ವರೂಪ ರವರು ಮುಂದೆ ಬಂದಿದ್ದಾರೆ ಒಂದು ಕೊಠಡಿ ನಾವು ನಿರ್ಮಿಸಿ ಕೊಡುವುದಾಗಿ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ಅವರು  ಭರವಸೆ ನೀಡಿದ್ದಾರೆ ಶಿಲಾವಿನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿಪಿ ಕೃಷ್ಣೇಗೌಡ  ತಮ್ಮ ಸಂಘದಿಂದ ಒಂದು ಕೊಠಡಿಯನ್ನು ಕಟ್ಟಿಸಿ ಕೊಡುವುದಾಗಿ ಘೋಷಿಸಿದರು ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಹಳೆ  ವಿದ್ಯಾರ್ಥಿಗಳು  ಹಾಗೂ  ಮಲ್ನಾಡ್ ತಾಂತ್ರಿಕ ಶಿಕ್ಷಣ ಸಮಿತಿಯಿಂದ   ಅಗತ್ಯ ಆರ್ಥಿಕ ನೆರವು ನೀಡುವುದಾಗಿ ಅಧ್ಯಕ್ಷ ಆರ್ ಟಿ ದೇವೇಗೌಡ ರವರು ಭರವಸೆ ನೀಡಿದರು ನಾವು ಹಲವು ವರ್ಷಗಳಿಂದ ರವೀಂದ್ರ ನಗರ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದು ಕಟ್ಟಡದ ಆರ್ ಟಿ ದೇವೇಗೌಡರು ಸ್ಮರಿಸಿಕೊಂಡರು ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡಿರುವ ವಿದ್ಯಾನಗರ, ಕುವೆಂಪು ಬಳಗದವರು ಒಂದು ಕೊಠಡಿಯನ್ನು ಕಟ್ಟಲು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ತಾವು ಈ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅನೇಕ ಬಂಧುಗಳ ರವೀಂದ್ರ ನಗರ ಬಡಾವಣೆಯ ವಾಸಿಗಳಾಗಿದ್ದು ತಾವು ಕೂಡ ಅಗತ್ಯ ಸಂಪನ್ಮೂವ ಸಂಗ್ರಹಿಸಲು ಪ್ರಯತ್ನಿಸುವುದಾಗಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಚೈತ್ರ ನಾಯಕರಹಳ್ಳಿ ಅವರು ತಿಳಿಸಿದರು ಮತ್ತೊಬ್ಬ ಮುಖ್ಯ ಅತಿಥಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಚ್ ಪಿ ಮೋಹನ್ ರವರು ಮಾತನಾಡುತ್ತಾ ಸರ್ಕಾರಿ ಶಾಲೆಗಳ ಪುನಶ್ಚೇತನ ಕಾರ್ಯವು ಡಾ. ಅಂಬೇಡ್ಕರ್ ರವರ ಜನ್ಮದಿನದ ಅರ್ಥಪೂರ್ಣ ಆಚರಣೆಯಾಗಿದೆ ಎಂದು ಭಾವಿಸಿದರು. ಜಿಲ್ಲೆ ಹಿರಿಯ ನಾಗರಿಕ ಸಮಿತಿಯ ಅಧ್ಯಕ್ಷ ಡಾ. ವೈಎಸ್ ವೀರಭದ್ರಪ್ಪ ರವರು ಶಾಲೆಯ  ನಿರ್ಮಾಣಕ್ಕೆ ಸ್ಥಳದಲ್ಲಿಯೇ ಐದು ಸಾವಿರದ ಒಂದು ರೂಗಳನ್ನು ನೀಡಿದರು ಶಾಲೆಗಳ ಅಭಿವೃದ್ಧಿ ಕಾರ್ಯವು ಒಂದು ಶ್ರೇಷ್ಠ ಕೆಲಸವಾಗಿದ್ದು ಈ ಕಾರ್ಯಕ್ಕೆ ತಮ್ಮ ಸಂಪರ್ಕದಲ್ಲಿ ಇರುವ ದಾನಿಗಳಿಂದ ಕೆಲವು ಸಹಾಯ ಮಾಡುವುದಾಗಿ ವಿಶ್ವಪಥ ಬಳಗ ರಾಯಭಾರಿ ಡಾಕ್ಟರ್ ಸಿಎನ್ ಜಗದೀಶ್ ತಿಳಿಸಿದರು.   ಪ್ರಾಸ್ತಾವಿಕ ಮಾತುಗಳನ್ನು ಆಡಿದ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ನಾಗರೀಕ ಸಮಿತಿಯ ಸಂಚಾಲಕಿ ರೂಪ ಹಾಸನ್ ರವರು ಸರ್ಕಾರಿ ಶಾಲೆಗಳಲ್ಲಿ ಸಮುದಾಯಗಳು ಹಾಗೂ ಬಡತನದಲ್ಲಿರುವ ಪೋಷಕರ ಮಕ್ಕಳು ಮಾತ್ರ ಓದುತ್ತಿದ್ದು ಈ ವಿದ್ಯಾರ್ಥಿಗಳ ದೃಷ್ಟಿಯಿಂದ ಸರ್ಕಾರಿ ಶಾಲೆಗಳನ್ನು  ಉಳಿಸಿ ಬೆಳೆಸುವುದು ಅಗತ್ಯ ಎಂದು ತಿಳಿಸಿದರು. ಹಾಸನ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾರವರು ಮಾತನಾಡುತ್ತಾ ಸರ್ಕಾರಿ ಶಾಲೆಗಳ ಸುಧಾರಣೆ ಸಾರ್ವಜನಿಕರು ಮುಂದೆ ಬರುತ್ತಿರುವುದು ಒಂದು ಅಪರೂಪದ ಬೆಳವಣಿಗೆ ಆಗಿದೆ ಹಾಸನ ಜಿಲ್ಲೆಯಲ್ಲಿ ಆರಂಭ ಆಗಿರುವ ಈ ಆಂದೋಲನ ರಾಜ್ಯಾದ್ಯಂತ ಹಬ್ಬಲಿ ಎಂದು ಆಶಿಸಿದರು. 

  ರವೀಂದ್ರನಗರ ಶಾಲೆಗೆ ಮೂರು ಕೊಠಡಿಗಳನ್ನು ನಿರ್ಮಿಸಿಕೊಡಲು ಮುಂದೆ ಬಂದು  ಶಾಸಕ ಸ್ವರೂಪ ರವರಿಗೆ ಧನ್ಯವಾದ ಹೇಳಿದರು. ಜಿಲ್ಲಾಧಿಕಾರಿ ಶ್ರೀ ಸತ್ಯಭಾಮ ಅವರು ನೂರಾರು ಸರ್ಕಾರಿ ಶಾಲೆಗಳ ನವೀಕರಣವನ್ನು ದಾನಿಗಳಿಂದ ಮಾಡಿಸಿದ್ದಾರೆ  ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ರವರು ಮಾತನಾಡುತ್ತಾ ಸರ್ಕಾರಿ ಶಾಲೆಗಳ ಸುಧಾರಣೆಗೆ ಸಾರ್ವಜನಿಕರು ಮುಂದೆ ಬರುತ್ತಿರುವುದು ಒಂದು ಅಪರೂಪ ಬೆಳವಣಿಗೆಯಾಗಿದೆ ಹಾಸನ ಜಿಲ್ಲೆಯಲ್ಲಿ ಶಾಲೆಗಳ ಕಟ್ಟಡಗಳು ಮಾತ್ರ ಸುಧಾರಣೆಯಾದರೆ ಸಾಲದು ಇಲ್ಲಿನ ಶೈಕ್ಷಣಿಕ ವಾತಾವರಣವನ್ನು ಕೂಡ ಸುಧಾರಣೆ ಮಾಡಬೇಕಾದ ಅಗತ್ಯ ಇದೆ ಎಂದು ತಿಳಿಸಿದರು ಸರ್ಕಾರಿ ಶಾಲೆಗಳ ಹಲವು ಬಗೆಯ ತರಬೇತಿ ಪಡೆದ ಅತ್ಯುತ್ತಮ ಶಿಕ್ಷಕರಾದ ರೆಂದು ಹೇಳಿದರು.  ಬಿ ಆರ್ ಪೂರ್ಣಿಮಾ ರವರು ಸರ್ಕಾರಿ ಶಾಲೆಗಳ ಸುಧಾರಣೆ ಗಮನಹರಿಸಿದ್ದಾರೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳ ಪುನಶ್ಚೇತನ ಆಂದೋಲನ ಜಿಲ್ಲೆಯ ಜನತೆ ಸಹಕಾರ ನೀಡಬೇಕೆಂದು ವಿನಂತಿ ಮಾಡಿದರು ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ನಾಗರೀಕ ಸಮಿತಿಗೆ ಸಾಮಾಜಿಕ ಕಾಳಜಿ ಮತ್ತು ಬದ್ಧತೆಉಳ್ಳವರನ್ನು ಒಳಗೊಂಡ ತಂಡವನ್ನು ರಚಿಸುವುದಾಗಿ ಹೇಳಿದರು. ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತ ಕಲಾವತಿ ಮಧುಸೂದನ್ ರವರು ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದರು ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು.

ರವೀಂದ್ರನಗರ ಶಾಲೆಯ ಮುಖ್ಯೋಪಾಧ್ಯಾಯ ಕುಮಾರಸ್ವಾಮಿಯವರು ಮಾತನಾಡುತ್ತಾ ಶಾಲೆಗೆ ಒಂದು ಕೊಠಡಿಯನ್ನು ಕಟ್ಟಿಸುವುದೇ ಕಷ್ಟ ಇರುವಾಗ ಎಂಟು ಕೊಠಡಿಗಳ ಹೊಸ ಕಟ್ಟಡ ಆಗಿರುವುದು ಶಾಲೆಯ ಸಿಬ್ಬಂದಿಗೆ ಸ್ವರ್ಗವೇ ಸಿಕ್ಕಂತಾಗಿದೆ ಎಂದು ಹೇಳಿದರು. ರವೀಂದ್ರ ನಗರ ಶಾಲೆಯ ಅಭಿವೃದ್ಧಿಗಾಗಿ ನಾಗರೀಕ ಸಮಿತಿಯನ್ನು ರಚಿಸಿದ್ದು ರವೀಂದ್ರ ನಗರ ಹಾಗೂ ಸುತ್ತಮುತ್ತಲ ಬಡಾವಣೆಗಳ ನಾಗರಿಕರು ಎಚ್ ಪಿ ಮೋಹನ್ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಏಪ್ರಿಲ್ 19ರ ಶನಿವಾರ ಸಂಜೆ 5:00 ಗಂಟೆಗೆ ಶಾಲೆಯ ಆವರಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ನಗರಸಭೆಯ ಅಧ್ಯಕ್ಷರಾದ ಎಂ ಚಂದ್ರೇಗೌಡ ಕಾರ್ಯಕ್ರಮದಲ್ಲಿ ಇದ್ದರು. ಶಾಲಾ ಶಿಕ್ಷಣ ಮತ್ತು ಸಂರಕ್ಷಣೆ ಇಲಾಖೆಯ ಉಪನಿರ್ದೇಶಕರಾದ ಚಂದ್ರಶೇಖರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾಕ್ಟರ್ ಎಚ್ ಎಲ್ ಮಲ್ಲೇಶ್ ಗೌಡ, ನಾಗರೀಕ ಸಮಿತಿಯ ಸಂಚಾಲಕ ಧರ್ಮೇಶ್, ವಿಶ್ವ ಪಥ ಬಳಗದ ಆರ್ ಪಿ ವೆಂಕಟೇಶ್ ಮೂರ್ತಿ, ಪಿ ಪುರುಷೋತ್ತಮ್, ತಿರುಪತಿ ಹಳ್ಳಿ ಶಿವಶಂಕರ್,  ಎಸ್ ಎಸ್ ಪಾಶಾ ಅಹ್ಮದ್,  ಹಗರೇ ಕುವೆಂಪು ನಗರ ಬಳಗ ಗಿರೀಶ್, ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಸಿ ಬಿ ವೆಂಕಟೇಗೌಡ, ಸಮತಾ ಸಂಘಟನೆಯ ಮಮತಾ ಶಿವು,   ರೆಡ್ ಕ್ರಾಸ್ ಸಂಸ್ಥೆಯ ಜಯಪ್ರಕಾಶ್, ಬಡಾವಣೆಯ ನಿವಾಸಿ ಸರೋಜಾ ನಾರಾಯಣಗೌಡ, ಎಮ್  ಆರ್ ಚಂದ್ರಶೇಖರ್ ವಿಶ್ವಪಥ ಬಳಗದ ಸದಸ್ಯರು, ಮತ್ತು ಶಾಲೆಯ ಬೋಧಕೇತರರು ಪಾಲ್ಗೊಂಡಿದ್ದರು.

You cannot copy content of this page

Exit mobile version