ಬೆಂಗಳೂರು : ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ ಬಂದ ಸಾರ್ವಜನಿಕರನ್ನು ನೋಡಿದ ಸಿಎಂ ಬಸವರಾಜ ಬೊಮ್ಮಾಯಿ ಜನರ ಅಹವಾಲು ಪತ್ರಗಳನ್ನು ಸ್ವೀಕರಿಸಿದ್ದಾರೆ.
ಬೆಂಗಳೂರಿನಲ್ಲಿರುವ ಸಿಎಂ ಬೊಮ್ಮಾಯಿಯವರ ಮನೆ ಮುಂದೆ ಇಂದು ಬೆಳಗ್ಗೆ ಸಾರ್ವಜನಿಕರ ಗುಂಪೊಂದು ಆಗಮಿಸಿತ್ತು. ಇದನ್ನು ನೋಡಿದ ಸಿಎಂ ಹೊರಬಂದು ಸಾರ್ವಜನಿಕರ ಕುಂದು ಕೊರತೆಗಳನ್ನು ವಿಚಾರಿಸಿದ್ದು , ತಂದಿದ್ದ ಅಹವಾಲು ಪತ್ರಗಳನ್ನುತೆಗೆದುಕೊಂಡಿದ್ದಾರೆ.