ಹಾಸನ : ಜಿಲ್ಲೆಯ ರೈತರ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿಕರ್ನಾಟಕ ಪ್ರಾಂತ ರೈತ ಸಂಘದ KPRS ಹಾಸನ ಜಿಲ್ಲಾ 3ನೇ ಸಮ್ಮೇಳನವು 28 ಫೆಬ್ರವರಿ 2026 ರಂದು ಶನಿವಾರ ಹಾಸನದ ಸ್ವಾಭಿಮಾನ ಭವನದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಹಾಸನದ ಹೇಮಾವತಿ ಪ್ರತಿಮೆ ಮುಂಬಾಗದಿಂದ (ಮಹಾರಾಜ ಪಾರ್ಕ್) ರೈತರ ಮೆರವಣಿಗೆ ಆರಂಭವಾಗಲಿದೆ.ಸಮ್ಮೇಳನದಲ್ಲಿ KPRS ರಾಜ್ಯಾಧ್ಯಕ್ಷರಾದ ಯು.ಬಸವರಾಜರವರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಸಾರ್ವಜನಿಕರಲ್ಲಿ ಸಂಘಟಕರು ಮನವಿ ಮಾಡಿದ್ದಾರೆ.
