ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿನೀಡಿದ್ದಾಗ ಬೆಂಗಳೂರಿನಲ್ಲಿ ರಸ್ತೆಗೆ ಹಾಕಿದ್ದ ಡಂಬಾರು 2 ದಿನದಲ್ಲಿ ಕಿತ್ತುಹೋಗಿತ್ತು. ಮಂಗಳೂರಿನಲ್ಲಿ ಹಾಕಿದ್ದ ಡಂಬಾರು 10 ದಿನದಲ್ಲಿ ಕಿತ್ತುಹೋಗಿದೆ! ಎಂದು ರಾಜ್ಯ ಸರ್ಕಾರ ನಿರ್ಮಾಣ ಮಾಡಿರುವ ಕಳಪೆ ಗುಣಮಟ್ಟದ ರಸ್ತೆಗಳ ಕುರಿತು ರಾಜ್ಯ ಕಾಂಗ್ರೆಸ್ ಘಟಕ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ , ನರೇಂದ್ರ ಮೋದಿ ಅವರೇ, ನಿಮ್ಮ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ನೋಡಿ ಕಣ್ತುಂಬಿಕೊಳ್ಳಿ! ಬಿಜೆಪಿ ಹಾಕುವ ರಸ್ತೆ ಡಾಂಬರ್ ಕಲಾವಿದರ ಮೇಕಪ್ಗಿಂತಲೂ ವೇಗವಾಗಿ ಕರಗುತ್ತಿದೆ! ಎಂದು ವ್ಯಂಗ್ಯವಾಡಿದೆ.