ಜಿಲ್ಲೆಯಲ್ಲಿ ಕೋಮುಗಲಭೆ ವರದಿಯಾದ ಕೆಲವು ದಿನಗಳ ನಂತರ ಹರಿಯಾಣ ಸರ್ಕಾರವು ನುಹ್ನಲ್ಲಿ ಮನೆಗಳು ಹಾಗೂ ಕಟ್ಟಡಗಳನ್ನು ಧ್ವಂಸಗೊಳಿಸುವ ಕಾರ್ಯಾಚರಣೆಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೋಮವಾರ ಈ ಕ್ರಮಕ್ಕೆ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಮತ್ತು ನ್ಯಾಯಮೂರ್ತಿ ಹರ್ಪ್ರೀತ್ ಕೌರ್ ಜೀವನ್ ಅವರ ವಿಭಾಗೀಯ ಪೀಠವು ನುಹ್ನಲ್ಲಿನ ಡೆಮಾಲಿಶನ್ ಅಭಿಯಾನವನ್ನು ಗಮನಕ್ಕೆ ತೆಗೆದುಕೊಂಡು ಅದು ಹರಿಯಾಣ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ಉತ್ತರವನ್ನು ಕೇಳಿದೆ.
ಮಧ್ಯಾಹ್ನ 2 ಗಂಟೆಗೆ ಮತ್ತೆ ವಿಚಾರಣೆ ನಡೆಸಲಿರುವ ನ್ಯಾಯಾಲಯ ಇನ್ನೂ ವಿವರವಾದ ಆದೇಶ ಹೊರಡಿಸಿಲ್ಲ.
ಜುಲೈ 31ರಂದು, ನುಹ್ನಲ್ಲಿ ಕೋಮು ಹಿಂಸಾಚಾರ ಸ್ಫೋಟಗೊಂಡಿತು ಮತ್ತು ಹತ್ತಿರದ ಗುರ್ಗಾಂವ್ಗೂ ಹರಡಿತು. ಹಿಂಸಾಚಾರದ ನಂತರ ಇಬ್ಬರು ಹೋಮ್ ಗಾರ್ಡ್ಗಳು ಸೇರಿದಂತೆ ಆರು ಜನರು ಸಾವನ್ನಪ್ಪಿದರು ಮತ್ತು ಹಲವಾರು ಮಂದಿ ಗಾಯಗೊಂಡರು ಮತ್ತು ಸ್ಥಳಾಂತರಗೊಂಡರು.
ನುಹ್ ಜಿಲ್ಲೆಯಲ್ಲಿ ಹಿಂಸಾಚಾರದ ಕೆಲವು ದಿನಗಳ ನಂತರ, ಅಧಿಕಾರಿಗಳು ಟೌರು ಪಟ್ಟಣದಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಾರೆಂದು ಆರೋಪಿಸಿ 250 ಕ್ಕೂ ಹೆಚ್ಚು ಗುಡಿಸಲುಗಳನ್ನು ಬುಲ್ಡೋಜರ್ ಮಾಡಿದ್ದಾರೆ. ವರದಿಗಳ ಪ್ರಕಾರ, ಡೆಮಾಲಿಷನ್ ಡ್ರೈವ್ನ ಭಾಗವಾಗಿ ಅಧಿಕಾರಿಗಳು ಮೂರು ಅಂತಸ್ತಿನ ಹೋಟೆಲ್ ಒಂದನ್ನು ಸಹ ನೆಲಸಮಗೊಳಿಸಿದ್ದಾರೆ.
ನಿವಾಸಿಗಳ ಪ್ರಕಾರ, ಜುಲೈ 31ರಂದು ಘರ್ಷಣೆಯ ಸಮಯದಲ್ಲಿ ಜನರು ಹೋಟೆಲ್ನಲ್ಲಿ ಜಮಾಯಿಸಿದ್ದರು ಮತ್ತು ಪೊಲೀಸರ ಮೇಲೆ ಕಲ್ಲು ತೂರಿದ್ದರು.