Thursday, June 19, 2025

ಸತ್ಯ | ನ್ಯಾಯ |ಧರ್ಮ

ಡಬಲ್‌ ರೈಡಿಂಗ್‌ ನಿರ್ಬಂಧ: ಆದೇಶ ವಾಪಾಸ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ ವಿಧಿಸಿದ್ದ ದ್ವಿಚಕ್ರ ವಾಹನದ ಹೊಸ ನಿಯಮವನ್ನು ಸಾರ್ವಜನಿಕರ ಒತ್ತಡಕ್ಕೆ ಮಣಿದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್‌ ಶಶಿಕುಮಾರ್‌ ಹಿಂತೆಗೆದು ಕೊಂಡಿರುವುದಾಗಿ ಅಧಿಕೃತ ಸೂಚನೆ ನೀಡಿದ್ದಾರೆ. ಬೈಕ್‌ ಹಿಂಬದಿ ಪುರುಷ ಸವಾರನ ಸಂಚಾರ ನಿರ್ಬಂಧಿಸಿ ಎಡಿಜಿಪಿ ಅಲೋಕ್‌ ಕುಮಾರ್‌ ಹೊಸ ನಿಯಮವೊಂದನ್ನು ಕೆಲವು ಘಂಟೆಗಳ ಹಿಂದೆ ಸೂಚಿಸಿದ್ದರು.‌

ಇತ್ತೀಚೆಗೆ ನಡೆದ ಸರಣಿ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಹೇರಲಾಗಿದ್ದ ಸಂಜೆ 6 ಘಂಟೆಯಿಂದ ಬೆಳಿಗ್ಗೆ 9 ಘಂಟೆವರೆಗಿನ ನಿರ್ಬಂಧವನ್ನು ಸಡಿಲಿಸಲಾಗಿದೆ. ರಾತ್ರಿ ಒಂಭತ್ತು ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್‌ 5 ರಿಂದ ಸಂಜೆ 6 ಘಂಟೆಯವರೆಗೆ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಉಳಿದಂತೆ ಸೆ. 144 ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page