2019 ರಲ್ಲಿ ದಾಖಲಾದ ಲೈಂಗಿಕ ಕಿರುಕುಳ ಪ್ರಕರಣದ (sexual harassment) ದೂರನ್ನು ನಿರಾಕರಿಸಿದ ಹಿನ್ನಲೆಯಲ್ಲಿ ಆಗಸ್ಟ್ 24 ರಂದು ಮಧ್ಯಪ್ರದೇಶದ (Madhya Pradesh) ಸಾಗರ್ ಜಿಲ್ಲೆಯಲ್ಲಿ ಜನರ ಗುಂಪೊಂದು ದಲಿತ ವ್ಯಕ್ತಿಯನ್ನು ಹೊಡೆದು ಸಾಯಿಸಿದೆ. ಅಲ್ಲದೇ, ಅವರ ತಾಯಿಯನ್ನು ನಗ್ನಗೊಳಿಸಿರುವ ಅಮಾನವೀಯ ಕೃತ್ಯ ವರದಿಯಾಗದೆ. .
ಕೊಲೆಯಾಗಿರುವ ನಿತಿನ್ ಅಹಿರ್ವಾರ್ ಎಂಬ ದಲಿತ (Dalit) ವ್ಯಕ್ತಿ ಮುಖ್ಯ ಆರೋಪಿ ವಿಕ್ರಮ್ ಸಿಂಗ್ ಠಾಕೂರ್ ಎಂಬಾತನ ಮೇಲೆ 2019 ರಲ್ಲಿ ತನ್ನ ಸಹೋದರಿಗೆ ಲೈಂಗಿಕ ಕಿರುಕುಳ ನೀಡಿದ ದೂರು ದಾಖಲಿಸಿದ್ದನ್ನು ಹಿಂದೂಸ್ತಾನ್ ಟೈಮ್ಸ್ಗೆ ಮಾಡಿತ್ತು.
ಆ ನಂತರ ಠಾಕೂರನ ಗೂಂಡಾ ಗುಂಪು ನಿತಿನ್ ಅಹಿರ್ವಾರ್ (Nitin Ahirwar) ಅವರ ಕುಟುಂಬದ ಮೇಲೆ ದೂರನ್ನು ಹಿಂಪಡೆಯುವಂತೆ ಒತ್ತಡ ಹೇರುತ್ತಿತ್ತು. ಅಗಸ್ಟ್ 24, ಗುರುವಾರದಂದು ಠಾಕೂರ್ ಗುಂಪು ನಿತಿನ್ ಅಹಿರ್ವಾರ್ ಮೇಲೆ ಹಲ್ಲೆ ನಡೆಸಿತ್ತು. ಅವರ ಸಹೋದರಿ ಹಾಗೂ ತಾಯಿಗೆ ಬೆದರಿಕೆ ಹಾಕಿತು.
ನಂತರ ಮೇಲು ಜಾತಿ (Upper Caste) ಎಂದು ಕರೆಸಿಕೊಳ್ಳುವ ಮಾಜೀ ಸರಪಂಚನ ಕುಟುಂಬಕ್ಕೆ ಸೇರಿದ ಠಾಕೂರನ ಗುಂಪು ನಿತಿನ್ ಅವರನ್ನು ಬಸ್ ನಿಲ್ದಾನದ ಬಳಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿತು. ಹಲ್ಲೆಯ ನಂತರ ಈ ಗೂಂಡಾಗಳ ಗುಂಪು ನಿತಿನ್ ಅವರ ಮನೆಯನ್ನು ಧ್ವಂಸಗೊಳಿಸಿತು. ಅಲ್ಲದೇ ಇನ್ನೂ ಇಬ್ಬರು ಸಹೋದರರನ್ನು ಹುಡುಕಿಕೊಂಡು ಮತ್ತೊಂದು ಮನೆಗೆ ಹೋಗಿದ್ದಾರೆ.
ಭಾರತೀಯ ದಂಡ ಸಂಹಿತೆಯ ( IPC) ಸೆಕ್ಷನ್ 302 (ಕೊಲೆ), 354 (ಲೈಂಗಿಕ ಕಿರುಕುಳ) ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಒಂಬತ್ತು ಜನರ ವಿರುದ್ಧ FIR ದಾಖಲಿಸಲಾಗಿದ್ದು ಶನಿವಾರ ಬಂಧಿಸಲಾಗಿದೆ.
ಅಹಿರ್ವಾರ್ ಹತ್ಯೆಗೆ ಆಡಳಿತಾರೂಢ BJPಯೇ ಕಾರಣ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಆರೋಪಿಸಿದ್ದು ಆಗಸ್ಟ್ 25 ರಂದು ನಿತಿನ್ ಅಹಿರ್ವಾರ್ ಅವರ ಸಹೋದರ ವಿಕ್ರಮ್ ಸಿಂಗ್ ಠಾಕೂರ್ ಮತ್ತು ಆಜಾದ್ ಸಿಂಗ್ ತನ್ನ ಸಹೋದರನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸುವ ವಿಡಿಯೋವನ್ನು ಟ್ವೀಟ್ ಮಾಡಿದೆ.
भाजपा नेताओं ने दलित युवक की हत्या की :
— MP Congress (@INCMP) August 25, 2023
खुरई विधानसभा के बरोदिया नौनागिर में भाजपा के दबंगों ने दलित युवक रघुवीर अहिरवार की लाठियां से पीट पीट कर हत्या कर दी।
बरौदिया के सरपंच विक्रम ठाकुर ने बरौदिया के मध्यांचल बैंक के पास युवक को घेरकर रॉड से नितिन पर हमला किया था।
शिवराज… pic.twitter.com/ILVO2KQvFi
ಬಂಧಿತ ವ್ಯಕ್ತಿಗಳಿಗೂ ರಾಜ್ಯ ಕ್ಯಾಬಿನೆಟ್ ಸಚಿವ ಭೂಪೇಂದ್ರ ಸಿಂಗ್ ಗೂ ಇರುಬ ಸಂಬಂಧವನ್ನು ಆರೋಪಿಸಿರುವ ಕಾಂಗ್ರೇಸ್ (Congress) ಅವರಿ ಜೊತೆಯಾಗಿ ಇರುವ ಫೋಟೋವನ್ನು ಹಂಚಿಕೊಂಡಿದೆ.
मध्यप्रदेश में फिर दलित की पीट-पीटकर हत्या कर दी गई।
— Congress Sevadal (@CongressSevadal) August 27, 2023
इस घटना का आरोपी मध्यप्रदेश के कैबिनेट मंत्री भूपेंद्र सिंह के साथ खड़ा है।
क्या दलितों-आदिवासियों पर सत्ता के संरक्षण में अपराध हो रहे हैं?
आखिर शिवराज दलितों-आदिवासियों से इतनी नफरत क्यों करते हैं? pic.twitter.com/fj7e44TrnV