Saturday, June 21, 2025

ಸತ್ಯ | ನ್ಯಾಯ |ಧರ್ಮ

ದೇವಸ್ಥಾನದ ವಿಗ್ರಹಕ್ಕೆ ಹಾನಿ ; ಜಾಗೃತಗೊಂಡ ಪೊಲೀಸರಿಂದ ತಪ್ಪಿದ ಗುಂಪು ಘರ್ಷಣೆ

ರಾಜಸ್ಥಾನ : ರಾಜಸ್ಥಾನದ ಭರತ್‌ಪುರದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ದೇವಸ್ಥಾನದ ವಿಗ್ರಹಕ್ಕೆ ಹಾನಿಯಾದ ನಂತರ ಎರಡು ಪ್ರತ್ಯೇಕ ಸಮುದಾಯಗಳಿಗೆ ಸೇರಿದ ಜನರ ನಡುವೆ ತೀವ್ರ ಘರ್ಷಣೆ ನಡೆದಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗಿದೆ.

ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಜಸ್ಥಾನದ ಕಾಮನ್‌ನ ಭಾಗದ ಕಾರ್ಮುಕ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಇನ್ನೊಂದು ಸಮುದಾಯದ ಮಕ್ಕಳು ದೇವಸ್ಥಾನದ ಹತ್ತಿರದಲ್ಲಿ ಆಟವಾಡುತ್ತಿದ್ದಾಗ ದೇವಸ್ಥಾನದ ವಿಗ್ರಹಕ್ಕೆ ಹಾನಿಯಾಗಿದೆ. ಈ ಸಂಬಂಧ ನಡೆದ ಘರ್ಷಣೆಯಲ್ಲಿ ಎರಡೂ ಕಡೆಯ ಜನರು ಭಾಗಿಯಾಗಿರುವುದರಿಂದ ಪೊಲೀಸರು ಈ ವಿಷಯವನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಿಮ್ಮತ್ ಸಿಂಗ್ ಹೇಳಿದ್ದಾರೆ.

ಗುಂಪು ಘರ್ಷಣೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಜಮೀಲ್, ಫಕ್ರುದ್ದೀನ್ ಮತ್ತು ಅಮ್ಜಾದ್ ಎಂದು ಗುರುತಿಸಲಾದ ಮೂವರ ವಿರುದ್ಧ IPC ಸೆಕ್ಷನ್ 151 ಅಡಿಯಲ್ಲಿ ಆರೋಪ ಪಟ್ಟಿ ಹೊರಿಸಲಾಗಿದೆ.

‘ಮಕ್ಕಳು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ದೇವರ ವಿಗ್ರಹಕ್ಕೆ ಹಾನಿಯಾಗಿದೆ. ಆದರೆ ಅಲ್ಲಿನ ಜನರು ಇದನ್ನು ಹಿರಿಯರು ಮಾಡಿದ್ದಾರೆಂದು ಭಾವಿಸಿದ್ದಾರೆ. ಇದೊಂದು ತಪ್ಪು ಗ್ರಹಿಕೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಿಮ್ಮತ್ ಸಿಂಗ್ ಹೇಳಿದ್ದಾರೆ.

ಇನ್ನು ಗಾಯಗೊಂಡವರಲ್ಲಿ ರಾಮ್ ಭರೋಸಿ, ಮನೀಶ್ ಸೈನಿ, ರಾಮ್ ಚರಣ್ ಸೈನಿ, ಗೀತಾ ದೇವಿ, ರೋಹ್ತಾಶ್ ಸೈನಿ ಮತ್ತು ರೇಖಾ ದೇವಿ ಸೇರಿದ್ದಾರೆ. ಹಾಗೂ ಅವರು ಕಾಮನ್ ನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

“ಪೊಲೀಸರ ಸಮ್ಮುಖದಲ್ಲಿ, ಇತರ ಸಮುದಾಯದ ಹತ್ತಕ್ಕೂ ಹೆಚ್ಚು ಜನರು ನಮ್ಮ ಮೇಲೆ ಹಲ್ಲೆ ನಡೆಸಿದರು. ಅವರ ಮಕ್ಕಳು ನಮ್ಮ ವಿಗ್ರಹಕ್ಕೆ ಹಾನಿ ಮಾಡಿದ್ದಾರೆ. ಆ ಕಾರಣ ನಾವು ಅವರನ್ನು ಪ್ರಶ್ನಿಸಿದಾಗ ಘಟನೆ ನಡೆದಿದೆ” ಎಂದು ಗಾಯಗೊಂಡವರು ತಿಳಿಸಿದ್ದಾರೆ.
ಜಾಗೃತಗೊಂಡ ಪೊಲೀಸರು ತಕ್ಷಣವೇ ಸ್ಥಳಕ್ಕೆ ದಾವಿಸಿದ ಪರಿಣಾಮ ಅನ್ಯ ಕೋಮುಗಳ ನಡುವಿನ ಘರ್ಷಣೆ ದೊಡ್ಡ ಮಟ್ಟಕ್ಕೆ ತಿರುಗುವುದು ತಪ್ಪಿದೆ. ಸಧ್ಯಕ್ಕೆ ಕಾರ್ಮುಖ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page