ಬೆಂಗಳೂರು : ಸೆಪ್ಟಂಬರ್ 11 ರಂದು ಪ್ರಕಟವಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಬಾಂಬೆಯ ಜಂಟಿ ಪ್ರವೇಶ ಪರೀಕ್ಷೆಯಲ್ಲಿ(ಜೆಇಇ) ಪಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಬ್ಯಾಟರಾಯನಪುರದ ಆರ್ಕೆ ಶಿಶಿರ್ ಕುರಿತು ಸಿದ್ದರಾಮಯ್ಯನವರು ಸಂತಸ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ “ಐಐಟಿ ಜೆಇಇ ಪರೀಕ್ಷೆಗಳಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿರುವ ಬೆಂಗಳೂರಿನ ಬ್ಯಾಟರಾಯನಪುರದ ವಿದ್ಯಾರ್ಥಿ ಆರ್.ಕೆ ಶಿಶಿರ್ ಅವರು ಇಂದು ನನ್ನನ್ನು ಭೇಟಿಯಾದ ವೇಳೆ ಅಭಿನಂದಿಸಿ, ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದೆ. ಈ ಯುವಕನ ಸಾಧನೆ ನಾಡಿನ ಕೋಟ್ಯಂತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ.” ಎಂದು ಶುಭ ಹಾರೈಸಿದ್ದಾರೆ.