ಮಾಲೂರಿನ ಹುಳೇರಹಳ್ಳಿಯ ಗ್ರಾಮದಲ್ಲಿ ಗ್ರಾಮ ದೇವತೆಯನ್ನು ಮುಟ್ಟಿದ ಕಾರಣಕ್ಕಾಗಿ ದಲಿತ ಬಾಲಕ ಹಾಗೂ ಕುಟುಂಬವನ್ನು ಗ್ರಾಮದಿಂದ ಬಹಿಷ್ಕಾರಿಸಿರುವ ಅಮಾನುಷ ಘಟನೆ ನಡೆದಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾತ್ರೋ ರಾತ್ರಿ ಅಂಬೇಡ್ಕರ್ ಸೇವಾ ಸಮಿತಿ ಭೇಟಿ ನೀಡಿ ಬಾಲಕನಿಗೆ ಸಾಂತ್ವಾನಿಸಲಾಯಿತು.
ನಾವು ದೇವರನ್ನ ಮುಟ್ಟಿ ಮೈಲಿಗೆಯಾಗಿದೆ. ನಾವು ಕೈ ಮುಟ್ಟಿ ಕೊಡುವ ಹಣ ಕೂಡಾ ಮೈಲಿಗೆಯಾಗಿಯೇ ಇರುತ್ತದೆ. ಮೈಲಿಗೆಯಾದ ಹಣದಲ್ಲಿ ದೇವರನ್ನ ಮಾಡಿಸುವುದು ಮಹಾಪರಾದ . ಹಾಗಾಗಿ ಹಣ ಕೊಡುವುದು ದೇವರಿಗೆ ಮಾಡಿದ ಅಪಮಾನ. ಎಂದು ಹರೀಶ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ