Friday, May 9, 2025

ಸತ್ಯ | ನ್ಯಾಯ |ಧರ್ಮ

ಶಿಕ್ಷಣವನ್ನು ಕಲಿಯುವುದರ ಮೂಲಕ ಸ್ವತಂತ್ರವಾದ ಆಲೋಚನೆಯನ್ನು ಬೆಳೆಸಿಕೊಳ್ಳಿ – ಡಾ.ಸೀ.ಚ. ಯತೀಶ್ವರ್

ಹಾಸನ : ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಗುರುವಾರದಂದು ಕ್ರೀಡಾ, ಸಾಂಸ್ಕೃತಿಕ ಮತ್ತು ಪ್ರತಿಭಾ ಬಹುಮಾನಗಳ ವಿತರಣೆ ಹಾಗೂ ಸಾಂಪ್ರದಾಯಿಕ ದಿನವನ್ನು ಅರ್ಥಪೂರ್ಣವಾಗಿ ಆಚರಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸೀ.ಚ. ಯತೀಶ್ವರ್ ರವರು ಮಾತನಾಡುತ್ತಾ, ಮನುಷ್ಯ ಜೀವನದಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ಪವಿತ್ರವಾದುದು. ಶಿಕ್ಷಣವನ್ನು ಕಲಿಯುವುದರ ಮೂಲಕ ಸ್ವತಂತ್ರವಾದ ಆಲೋಚನೆಯನ್ನು ಬೆಳೆಸಿಕೊಂಡು ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲೆ ಅದರಲ್ಲಿಯೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಸಮರ್ಪಣಾ ಮನೋಧರ್ಮ ಅಗತ್ಯವಾದುದು, ಹೆಣ್ಣು ಮಕ್ಕಳು ತಂದೆ ತಾಯಂದಿರಿಗೆ ಒಳ್ಳೆಯ ಮಕ್ಕಳಾಗಿ ಕಾಲೇಜಿನಲ್ಲಿ ಒಳ್ಳೆಯ ವಿದ್ಯಾರ್ಥಿಗಳಾಗಿ, ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಜೀವನ ಮೌಲ್ಯವನ್ನು ಅಳವಡಿಸಿಕೊಳ್ಳುವುದು ಅಗತ್ಯವಾದುದು ಎಂದರು


ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಸಂಚಾಲಕರಾದ ಡಾ.ಎನ್.ಎಸ್. ಶಶಿಕಲಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯಾದ ಪ್ರೊ.ಎಸ್.ಆರ್.ತಮ್ಮಯ್ಯನವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಬಹುಮಾನಗಳನ್ನು ವಿತರಿಸುವ ಮೂಲಕ ವಿದ್ಯಾರ್ಥಿನಿಯರಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಪ್ರೊ.ಎಸ್.ಹೆಚ್. ವಾರಿಜ, ಕ್ರೀಡಾ ಖಜಾಂಚಿಗಳಾದ ಪ್ರೊ.ಎಸ್.ಆರ್.ಹೇಮಾವತಿ, ಪ್ರೊ. ತಮ್ಮಯ್ಯಶೆಟ್ಟಿ, ಕ್ರೀಡಾ ನಿರ್ದೇಶಕರಾದ ಡಾ. ಹೇಮಲತ.ಸಿ.ಎಸ್, ಶ್ರೀಮತಿ. ನಳಿನಾಕ್ಷಿ, ಶ್ರೀಮತಿ. ಹೇಮಲತ.ಹೆಚ್.ಕೆ ಹಾಗೂ ಎಲ್ಲಾ ಅಧ್ಯಾಪಕರು ಮತ್ತು ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು. ಶ್ರೀಮತಿ.ಪುನಿತ.ಕೆ.ಎಸ್ ನಿರೂಪಣೆ ಮಾಡಿದರು, ಶ್ರೀಮತಿ.ಶೀತಲ್ ಸ್ವಾಗತಿಸಿದರು, ಕು.ಪ್ರೇಕ್ಷಾ ವಂದನಾರ್ಪಣೆ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page