ಹಾಸನ : ಜಿಲ್ಲಾಡಳಿತದಿಂದ 2569ನೇ ಪವಿತ್ರ ವೈಶಾಖ ಬುದ್ಧ ಪೂರ್ಣಿಮೆ ಬುದ್ಧ ಜಯಂತಿಯನ್ನು ಮೇ.12ರ ಸೋಮವಾರ ಬೆಳಿಗ್ಗೆ ಆಚರಿಸಲಾಗುತ್ತಿದ್ದು, ಇದಕ್ಕೆ ಮೊದಲು ಡಿಸಿ ಕಛೇರಿಯಿಂದ ಕಲಾಭವನದವರೆಗೂ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಕೃಷ್ಣದಾಸ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮವನ್ನು ಮಾಜಿ ಪ್ರಧಾನ ಮಂತ್ರಿಗಳು ಹಾಗೂ ರಾಜ್ಯ ಸಭಾ ಸದಸ್ಯ ಹೆಚ್.ಡಿ. ದೇವೆಗೌಡರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಸಚಿವರು ಆದ ಕೆ.ಎನ್. ರಾಜಣ್ಣ ಉದ್ಘಾಟಿಸುವರು. ಶಾಸಕ ಸ್ವರೂಪ ಪ್ರಕಾಶ್ ಅಧ್ಯಕ್ಷತೆ ವಹಿಸಲ್ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಶೇಯಸ್ ಎಂ. ಪಟೇಲ್, ಶಾಸಕರಾದ ಕೆ. ಎಂ. ಶಿವಲಿಂಗೇಗೌಡ, ಹೆಚ್.ಡಿ. ರೇವಣ್ಣ, ಸಿ.ಎನ್. ಬಾಲಕೃಷ್ಣ, ಎ. ಮಂಜು, ಹೆಚ್.ಕೆ. ಸುರೇಶ್, ಸಿಮೆಂಟ್ ಮಂಜು, ವಿಧಾನ ಪರಿಷತ್ ಸದಸ್ಯರಾದ ಮಧು ಜಿ. ಮಾದೇಗೌಡ, ಕೆ. ವಿವೇಕಾನಂದ, ಡಾ.ಸುರಜ್ ರೇವಣ್ಣ, ನಗರ ಸಭೆ ಅದ್ಯಕ್ಷ ಚಂದ್ರೇಗೌಡ ಎಂ. ಭಾಗವಹಿಸಲಿದ್ದಾರೆ. ಅಕ್ಕ ಐ.ಎ.ಎಸ್. ಅಕಾಡಮಿಯ ಮುಖ್ಯಸ್ಥ ಡಾ. ಶಿವಕುಮಾರ್ ಬುದ್ಧರ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದರು.
ಬುದ್ಧ ಎಂದರೆ ಬೆಳಕು ಅಥವಾ ಜ್ಞಾನ, ಗೌತಮ ಬುದ್ಧ ಭಾರತದ ನೆಲದಲ್ಲಿ ಜನ್ಮತಾಳಿದ ಮಾನವೀಯತೆಯ ಮೂಲ ಜೀವಧಾತು. ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧ. ಕ್ರಿ.ಪೂ. 623ನೇ ವೈಶಾಖ ಹುಣ್ಣಿಮೆ ದಿನದಂದು ಜನಿಸುತ್ತಾರೆ. ತಮ್ಮ 29ನೇ ವಯಸ್ಸಿನಲ್ಲಿ ಸಾಂಸಾರಿಕ ಜೀವನ, ಸಂಪತ್ತು ರಾಜ್ಯಾಧಿಕಾರ ತೊರೆದು ತಮ್ಮ 35ನೇ ವಯಸ್ಸಿನಲ್ಲಿ ಜ್ಞಾನೋದಯ ಪಡೆಯುತ್ತಾರೆ. ತಮ್ಮ 80ನೇ ವಯಸ್ಸಿನಲ್ಲಿ ಪರಿನಿಬ್ಬಾಣ ಹೊಂದುತ್ತಾರೆ. ಕಾಕತಾಳೀಯ ಎಂಬAತೆ ಈ ಮೂರು ಘಟನೆಗಳು ಪವಿತ್ರ ವೈಶಾಖ ಹುಣ್ಣಿಮೆ ದಿನದಂದೆ ಘಟಿಸುತ್ತವೆ. ಈ ದಿನವನ್ನು ಪ್ರಪಂಚದಾದ್ಯAತ ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತದೆ. ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಬುದ್ಧ ಜಯಂತಿಯನ್ನು ಆಚರಿಸಲು ತೀರ್ಮಾನ ತೆಗೆದುಕೊಂಡಿರುವುದನ್ನು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಜಿಲ್ಲಾ ಶಾಖೆ ಸ್ವಾಗತಿಸುತ್ತದೆ. ಅದರಂತೆ ಹಾಸನ ಜಿಲ್ಲಾಡಳಿತವು 2025 ಮೇ.12 ರಂದು ಹಾಸನದ ಕಲಾಭವನದಲ್ಲಿ ಬುದ್ಧ ಜಯಂತಿ ಆಚರಿಸುತ್ತಿದೆ. ಈ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಬುದ್ಧ ಅನುಯಾಯಿಗಳು, ಅಭಿಮಾನಿಗಳು ಶೋಷಿತ ಸಮುದಾಯಗಳು ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜು ಹೆತ್ತೂರ್, ಉಪಾಧ್ಯಕ್ಷ ಅಂಬೂಗ ಮಲ್ಲೇಶ್, ಖಜಾಂಚಿ ರಮೇಶ್ ಸಾತೇನಹಳ್ಳಿ, ಜಂಟಿ ಕಾರ್ಯದರ್ಶಿ ಸಂಡೋರ ಕುಮಾರಸ್ವಾಮಿ, ಸದಸ್ಯ ಹೇಮಂತ್ ಭೀಮ್ ಆರ್ಮಿ ಇತರರು ಉಪಸ್ಥಿತರಿದ್ದರು.