Home ರಾಜಕೀಯ ಜಾತಿಗಣತಿ ಒಪ್ಪುವ ಮೂಲಕ ಡಿಕೆಶಿ ಒಕ್ಕಲಿಗ ಜನಾಂಗದ ಡೆತ್‌ ವಾರೆಂಟಿಗೆ ಸಹಿ ಹಾಕಿದ್ದಾರೆ: ಕುಮಾರಸ್ವಾಮಿ

ಜಾತಿಗಣತಿ ಒಪ್ಪುವ ಮೂಲಕ ಡಿಕೆಶಿ ಒಕ್ಕಲಿಗ ಜನಾಂಗದ ಡೆತ್‌ ವಾರೆಂಟಿಗೆ ಸಹಿ ಹಾಕಿದ್ದಾರೆ: ಕುಮಾರಸ್ವಾಮಿ

0

ಸಾಮಾಜಿಕ, ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರದೊಳಗಿನ ‘ಅಗೋಚರ’ ಕೈಗಳು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಿವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಆರೋಪಿಸಿದ್ದಾರೆ.

ಸಚಿವ ಸಂಪುಟದಲ್ಲಿ ಮಾತ್ರ ಮಂಡಿಸಲಾಗಿದ್ದ ವರದಿಯ ಮಾಹಿತಿ ಈಗ ಸಾರ್ವಜನಿಕ ವಲಯದಲ್ಲಿ ಹೇಗೆ ಲಭ್ಯವಾಗುತ್ತಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

“ಕೆಲವು ಅಪರಿಚಿತ ಕೈಗಳು ವ್ಯವಸ್ಥಿತವಾಗಿ ಮಾಹಿತಿ ಸಾರ್ವಜನಿಕವಾಗಿ ಸಿಗುವಂತೆ ಸೋರಿಕೆ ಮಾಡಿವೆ” ಎಂದು ಅವರು ಹೇಳಿದರು.

ಇದೇ ವೇಳೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ವಿರುದ್ಧ ದಾಳಿ ಮಾಡಿದ ಕುಮಾರಸ್ವಾಮಿ, “ಜಾತಿಗಣತಿ ವರದಿಯನ್ನು ಬೆಂಬಲಿಸುವ ಮೂಲಕ ಡಿಕೆ ಶಿವಕುಮಾರ್‌ ಒಕ್ಕಲಿಗ ಸಮುದಾಯದ ಡೆತ್‌ ವಾರೆಂಟಿಗೆ ಸಹಿ ಹಾಕುತ್ತಿದ್ದಾರೆ. ಅವರು ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯಕ್ಕೆ ತಮ್ಮ ನಿಷ್ಟೆ ಯಾವ ಮಟ್ಟದ್ದು ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಟೀಕಿಸಿದರು.

ಕರ್ನಾಟಕದಲ್ಲಿರುವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ನಿಖರವಾದ ಜನಸಂಖ್ಯೆಯನ್ನು ಸ್ಪಷ್ಟಪಡಿಸುವಂತೆ ಸರ್ಕಾರಕ್ಕೆ ಕರೆ ನೀಡಿದ ಅವರು, “ಹಳೆಯ ಮೈಸೂರು ಪ್ರದೇಶದಲ್ಲಿ ಒಕ್ಕಲಿಗ ಸಮುದಾಯದ ಜನಸಂಖ್ಯೆ ಎಷ್ಟು? ವರದಿಯಲ್ಲಿ ಅಂದಾಜಿಸಲಾದ ವೀರಶೈವ-ಲಿಂಗಾಯತ ಸಮುದಾಯದ ಜನಸಂಖ್ಯೆ ಆಘಾತಕಾರಿಯಾಗಿದೆ.

ಜಾತಿ ಗಣತಿ ಕರ್ನಾಟಕದಲ್ಲಿ ಅಶಾಂತಿ ಸೃಷ್ಟಿಸುವ ಪಿತೂರಿಯ ಭಾಗವಾಗಿದೆ ಅಥವಾ ದಿಕ್ಕು ತಪ್ಪಿಸುವ ಪ್ರಯತ್ನವಾಗಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

You cannot copy content of this page

Exit mobile version