Home ರಾಜ್ಯ ದಾವಣಗೆರೆ ಗೌಡರು ಇಲ್ಲಿಗೆ ಬಂದಿದ್ದು ಬಿಜೆಪಿ ಪರ ಪ್ರಚಾರಕ್ಕೋ ಅಥವಾ ನಮ್ಮ ನಾಯಕರ ಸೂಟ್‌ಕೇಸ್ ಲೆಕ್ಕ ಮಾಡುವುದಕ್ಕೋ?:...

ಗೌಡರು ಇಲ್ಲಿಗೆ ಬಂದಿದ್ದು ಬಿಜೆಪಿ ಪರ ಪ್ರಚಾರಕ್ಕೋ ಅಥವಾ ನಮ್ಮ ನಾಯಕರ ಸೂಟ್‌ಕೇಸ್ ಲೆಕ್ಕ ಮಾಡುವುದಕ್ಕೋ?: ಡಿ.ಕೆ. ಶಿವಕುಮಾರ್ ವ್ಯಂಗ್ಯ

0

ದಾವಣಗೆರೆ: ಕಾಂಗ್ರೆಸ್ ನಾಯಕರು ಹಣದ ಚೀಲಗಳೊಂದಿಗೆ ಇಲ್ಲಿಗೆ ಬಂದಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, “ಬಿಜೆಪಿ ನಾಯಕ ಸದಾನಂದ ಗೌಡರು ಈ ಬಗ್ಗೆ ಇದುವರೆಗೆ ಯಾಕೆ ದೂರು ದಾಖಲಿಸಿಲ್ಲ?” ಎಂದು ಪ್ರಶ್ನಿಸಿದ್ದಾರೆ.

ಗುರುವಾರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಸದಾನಂದ ಗೌಡರು ಇಲ್ಲಿಗೆ ಬಂದಿರುವುದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲೋ ಅಥವಾ ನಮ್ಮ ನಾಯಕರ ಸೂಟ್‌ಕೇಸ್‌ಗಳು ಎಷ್ಟು ದಪ್ಪ ಇವೆ, ಎಷ್ಟು ದೊಡ್ಡದಾಗಿವೆ ಎಂದು ವಿಶ್ಲೇಷಣೆ ಮಾಡಲೋ ಎಂಬುದು ನನಗೆ ಆಶ್ಚರ್ಯ ತರುತ್ತಿದೆ,” ಎಂದು ವ್ಯಂಗ್ಯವಾಡಿದರು.

ಈ ಬಾರಿ ಬಿಜೆಪಿಗೆ ಶೇ. 45 ಕ್ಕಿಂತ ಹೆಚ್ಚು ಅಲ್ಪಸಂಖ್ಯಾತರ ಮತಗಳು ಲಭಿಸಲಿವೆ ಎಂಬ ಸದಾನಂದ ಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ತುಂಬಾ ಸಂತೋಷ, ಅವರು ಎಲ್ಲರನ್ನೂ ಕರೆಯಲಿ. 2.30 ಲಕ್ಷ ಮತದಾರರಿಗೂ ಬಿಜೆಪಿಗೆ ಮತ ಹಾಕುವಂತೆ ಕೇಳಲಿ,” ಎಂದರು.

ಬಿಜೆಪಿ ಗೆದ್ದರೆ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂಬ ವದಂತಿಗಳ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಚುನಾವಣೆ ಸಮಯದಲ್ಲಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಅವರಿಗೆ ಮಾಮೂಲಿ,” ಎಂದು ಹೇಳಿದರು.

You cannot copy content of this page

Exit mobile version