Thursday, June 19, 2025

ಸತ್ಯ | ನ್ಯಾಯ |ಧರ್ಮ

ಮೋದಿಯಂಥ ಪ್ರಬಲ ನಾಯಕನ ಅಗತ್ಯತೆ ನಮ್ಮ ದೇಶಕ್ಕೆ ಇದೆಯೇ?

  • ಎಂ ನಾಗರಾಜ ಶೆಟ್ಟಿ

ದೇಶಕ್ಕೆ ಪ್ರಬಲ ನಾಯಕ ಬೇಕು ಎನ್ನುವ ಅಭಿಪ್ರಾಯವನ್ನು ಜನ ಮಾನಸದಲ್ಲಿ ಬಿತ್ತಲಾಗಿದೆ. ಇದು ತಪ್ಪು. ಪ್ರಜಾಪ್ರಭುತ್ವದಲ್ಲಿ ಪ್ರಬಲ ನಾಯಕನ ಅವಶ್ಯಕತೆ ಇಲ್ಲ; ಇದು ಪ್ರಜಾಪ್ರಭುತ್ವದ ಅಶಯಕ್ಕೆ ವಿರುದ್ಧವಾದುದು.

ಚುನಾವಣೆಯ ನಂತರ ಶಾಸಕರು, ಸಂಸದರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ. ಆತ ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿ ಎನ್ನಿಸಿಕೊಳ್ಳುತ್ತಾನೆ; ಪ್ರಜಾಪ್ರಭುತ್ವದ ಪದ್ಧತಿ ಇದು. ಇದಕ್ಕೆ ಬದಲಾಗಿ ಇಂದು ನಾಯಕನೊಬ್ಬನ ಹೆಸರಲ್ಲಿ ವೋಟು ಕೇಳಲಾಗುತ್ತಿದೆ. ಅಭ್ಯರ್ಥಿ ಹೆಸರಿಗೆ ಮಾತ್ರ! ಹಲವಾರು ಅಭ್ಯರ್ಥಿಗಳು ನಾಚಿಕೆ ಇಲ್ಲದೆ ನಾನು ನಾಮ ಮಾತ್ರ ಎಂದು ಹೇಳಿಕೊಂಡು ಓಡಾಡುತ್ತಾರೆ. ಇಂಥವರು ಪಂಚಾಯತ್ ಸದಸ್ಯರಾಗಲೂ ಯೋಗ್ಯರಲ್ಲ!

ಚುನಾವಣೆಯಲ್ಲಿ ಆರಿಸಿದ ಬಂದ ಶಾಸಕರು, ಸಂಸತ್ಸದಸ್ಯರು ಬಹುಮತದಿಂದ ಆಯ್ಕೆ ಮಾಡಿದ ನಾಯಕ ದೇಶದ ಜನರ ಆಶೋತ್ತರಗಳ ಪ್ರತಿನಿಧಿ ಆಗುತ್ತಾನೆ. ಆತನಿಗೆ ಜನರ ಸುಖ- ಕಷ್ಟಗಳನ್ನು, ಸಮಸ್ಯೆಗಳನ್ನು, ಆಂತರಿಕ ಬಾಹ್ಯ ವಿಷಯಗಳನ್ನು ಅರಿತುಕೊಳ್ಳುವ ಶಕ್ತಿ, ಮಾನವೀಯತೆ, ಒತ್ತಡಗಳನ್ನು ನಿಭಾಯಿಸುವ ಚಾಕಚಕ್ಯತೆ ಇರಬೇಕು. ಆತ ದೇಹದಲ್ಲಾಗಲೀ, ಬುದ್ದಿವಂತಿಕೆಯಲ್ಲಾಗಲೀ, ಜನಪ್ರಿಯತೆಯಲ್ಲಾಗಲೀ ಪ್ರಬಲನಾಗಿರುವಅಗತ್ಯವಿಲ್ಲ.

ನಮ್ಮ ದೇಶ ಸಾವಿರಾರು ರ‍್ಷಗಳಿಂದ ರಾಜಾಳ್ವಿಕೆಗೆ ಒಳಗಾದುದರಿಂದ ವ್ಯಕ್ತಿಗಳನ್ನು ಆರಾಧಿಸುವ ಮನೋವೃತ್ತಿ ಬೆಳೆದುಕೊಂಡು ಬಂದಿದೆ. ಇಂದಿಗೂ ಜನರೊಡನೆ ಬೆರೆಯದ, ಸಾಮಾನ್ಯರ ಬವಣೆ ತಿಳಿಯದ ಅರಸು ಕುಲದ ವ್ಯಕ್ತಿಗಳಿಗೆ ಜನ ಮಣೆ ಹಾಕುತ್ತಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದೂ ತಿಳಿಯುವುದಿಲ್ಲ. ನೆಹರೂ, ಇಂದಿರಾ ಗಾಂಧಿಯವರನ್ನು ಕೂಡಾ ಜನರು ಅರಾಧಿಸಿದ್ದು ಈ ಭಾವದಿಂದಲೇ. ಇದೂ ತಪ್ಪೇ. ಆದರೆ ನೆಹರೂ, ಇಂದಿರಾ ಪ್ರಬಲ ನಾಯಕರಾಗಿದ್ದರು ಎನ್ನುವುದನ್ನು ಕೂಡಾ ಒಪ್ಪಿಕೊಳ್ಳಬೇಕು. ಆದರೆ ಈಗ ಪ್ರಬಲ ಅಂತ ಬಿಂಬಿಸಿಕೊಳ್ಳುವ ವ್ಯಕ್ತಿ ನಿಜವಾಗಿಯೂ ಪ್ರಬಲರೇ ಎನ್ನುವುದನ್ನು ಪರಿಶೀಲಿಸಿಬೇಕಾಗುತ್ತದೆ.

ಹತ್ತು ವರ್ಷಗಳ ಆಡಳಿತವನ್ನು ಅವಲೋಕಿಸಿದರೆ ಪ್ರಬಲ ನಾಯಕನೆಂದು ಬಿಂಬಿಸಿದವರನ್ನು ಸಮರ್ಥಿಸುವ ಕಾರಣಗಳು ದೊರಕುವುದಿಲ್ಲ. ಬಹಳ ಹಿಂದಕ್ಕೆ ಹೋಗುವ ಅಗತ್ಯವಿಲ್ಲ. ಇತ್ತೀಚಿನ ಕೆಲವು ದೃಷ್ಟಾಂತಗಳಿಂದಲೇ ಈ ಅಭಿಪ್ರಾಯ ಪೊಳ್ಳು ಎಂದು ತಿಳಿಯುತ್ತದೆ.

ಕುಸ್ತಿ ಫೆಡರೇಷನ್ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಅಂತಾರಾಷ್ಟ್ರೀಯ ಖ್ಯಾತಿಯ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದರು. ಲೈಂಗಿಕ ಅನಾಚಾರಗಳ ಕುರಿತ ಗುರುತರ ಅರೋಪ ಆತನ ಮೇಲಿತ್ತು. ನಿರಂತರವಾಗಿ ಐದು ತಿಂಗಳು ಪ್ರತಿಭಟನೆ ನಡೆಯಿತು. ಪ್ರಧಾನಿ ಮೋದಿಸಂತ್ರಸ್ತ ಮಹಿಳೆಯರಿಗೆ ನ್ಯಾಯ ಕೊಡಿಸಲಿಲ್ಲ. ಅವರ ಗೋಳು ಕೇಳುವವರಿರಲ್ಲ; ಜಗತ್ಪ್ರಸಿದ್ ಧಕ್ರೀಡಾ ಪಟುಗಳ ಮಾನ, ಮರ‍್ಯಾದೆ ಬೀದಿ ಪಾಲಾದವು. ಕೊನೆಗೆ ಬ್ರಿಜ್ ಭೂಷನ್ ಶರಣ್ ಸಿಂಗ್ಗೆ ಅಂಜಿ ಆತನ ಮಗನಿಗೆ ಲೋಕ ಸಭಾ ಚುನಾವಣೆಗೆ ಟಿಕೆಟ್‌ ಕೊಟ್ಟರು!

ಎರಡು ವರ್ಷಗಳಿಂದ ಮಣಿಪುರ ದಹಿಸುತ್ತಿದೆ. ಮಹಿಳೆಯರ ಮಾನಾಪಹಾರ ನಡೆಯುತ್ತಿದೆ. ನೂರಾರು ಮಂದಿ ಸತ್ತರು, ಸಾವಿರಾರು ಮಂದಿ ಗಾಯಾಳುಗಳಾದರು, ಲೆಕ್ಕವಿಲ್ಲದಷ್ಟು ಜನ ಪಲಾಯನ ಮಾಡಿದರು. ಈ ವರೆಗೂ ಪರಿಹಾರ ಕಂಡು ಕೊಳ್ಳಲಾಗಿಲ್ಲ. ಚುನಾವಣೆಯ ಪ್ರಚಾರಕ್ಕಾಗಿ ಸುತ್ತ, ಮುತ್ತ ಸುಳಿದಾಡುವ ಪ್ರಧಾನಿಗೆ ಮಣಿಪುರಕ್ಕೆ ಕಾಲಿಡುವ ಧರ‍್ಯವಿಲ್ಲ!

ಬಿಜೆಪಿ ಪಕ್ಷದ ಸದಸ್ಯ, ರಾಜ್ಯ ಸಭೆಯ ಸದಸ್ಯ ಸುಬ್ರಮಣ್ಯ ಸ್ವಾಮಿಚೀನಾ ನಾಲ್ಕು ಲಕ್ಷ ಚದರಡಿ ಜಾಗವನ್ನು ಆಕ್ರಮಿಸಿಕೊಂಡಿದೆ ಎಂದು ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಚೀನಾ ಕುರಿತುಸೊಲ್ಲೆತ್ತಲು ಅಂಜುತ್ತಾರೆ. ತಮ್ಮದೇ ಪಕ್ಷದ ಹಿರಿಯ ಸದಸ್ಯನ ಹೇಳಿಕೆ ತಪ್ಪೆಂದು ಸಿದ್ಧ ಮಾಡಲು, ತಪ್ಪಾದರೆ ಕ್ರಮ ಕೈಗೊಳ್ಳಲುತ್ರಾಣವಿಲ್ಲದೆ ಮೌನಕ್ಕೆ ಶರಣಾಗಿದ್ದಾರೆ!

ಇಂತಹ ಹಲವು ಉದಾಹರಣೆಗಳನ್ನು ಕೊಡಬಹುದು. ಚಿತ್ರ ನಟ ಪ್ರಕಾಶ್ ರೈ ಇತ್ತೀಚೆಗೆ ಸುಳ್ಳಿಲ್ಲದ ಮೋದಿಯ ಭಾಷಣವೇ ಇಲ್ಲ ಎಂದಿದ್ದರು. ಇದರಲ್ಲಿ ಉತ್ಪ್ರೇಕ್ಷೆ ಇರಬಹುದು. ಆದರೆ, ಮೋದಿ ಎಗ್ಗಿಲ್ಲದೆ ಸುಳ್ಳು ಹೇಳುತ್ತಾರೆಂದು ಎಲ್ಲರಿಗೂ ತಿಳಿದಿದೆ.

ನಾಯಕನಾದವನು ಪ್ರಬಲ ಎನ್ನಿಸಿಕೊಳ್ಳಲು ಕೆಲವು ಗುಣಗಳಿರಬೇಕು. ಚಾರಿತ್ರ‍್ಯ , ಕಠಿಣ ನರ‍್ಧಾರ ತೆಗೆದುಕೊಳ್ಳುವ ಶಕ್ತಿ ಮತ್ತು ಒಳಗೊಳ್ಳುವಿಕೆ ಪ್ರಬಲ ನಾಯಕನಲ್ಲಿರಬೇಕಾದ ಗುಣಗಳು. ಸುಳ್ಳು ಹೇಳುವ, ದರ‍್ಭರ ಸಂರ‍್ಭಗಳಲ್ಲಿ ನುಣುಚಿಕೊಳ್ಳುವ, ಒಡೆದು ಆಳುವ ನೀತಿಯ ನಾಯಕ ಪ್ರಬಲ ಎಂದೆನಿಸಿಕೊಳ್ಳಲಾರ. ಅಂತವರು ಸಂರ‍್ಭದ ಲಾಭ ಪಡೆದು, ಜನರನ್ನು ವಂಚಿಸಿ ಕೆಲ ಸಮಯ ಮೆರೆಯಬಹುದು. ಕಾಲ ಕಳೆದಂತೆ ಹುಳುಕುಗಳು ಬಯಲಾಗುತ್ತವೆ. ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಮರ‍್ಖರಾಗಿಸಲು ಸಾಧ್ಯವಿಲ್ಲ.

ಭಾರತದಲ್ಲಿ ಪ್ರಬಲ ನಾಯಕರೆನ್ನಿಸಿಕೊಂಡವರು ಇದ್ದರು. ಇತ್ತೀಚಿನ ಉದಾಹರಣೆ ಎಂದರೆ ಮನಮೋಹನ್ ಸಿಂಗ್. ತಮ್ಮ ಸರಕಾರದ ಅಸ್ತಿತ್ವಕ್ಕೆ ಕುತ್ತು ಬರುವ ಸಮಯದಲ್ಲು ಅಣುಶಕ್ತಿಯ ವಿಷಯದಲ್ಲಿ ಅವರು ರಾಜಿ ಮಾಡಿಕೊಳ್ಳಲಿಲ್ಲ. ಜೊತೆಗಾರ ಪಕ್ಷಗಳ ತೀವ್ರ ವಿರೋಧದ ನಡುವೆಯೂ ದೇಶಕ್ಕೆ ಹಿತವೆನ್ನಿಸಿದ್ದನ್ನು ಸಾಧಿಸಿ ತೋರಿಸಿದರು.

ಇಂದಿರಾ ಗಾಂಧಿ ಪ್ರಬಲ ನಾಯಕಿ ಎನ್ನುವುದರಲ್ಲಿ ಎರಡು ಅಭಿಪ್ರಾಯ ಇರಲಾರದು. ಆ ಕಾಲದಲ್ಲಿ ಇಂದಿರಾ ಜನಪ್ರಿಯತೆ ಎಷ್ಟಿತ್ತೆಂದರೆ ʼ ಲೈಟ್ ಕಂಬ ವೋಟಿಗೆ ನಿಂತರೂ ಇಂದಿರಾ ಹೆಸರಲ್ಲಿ ಗೆಲ್ಲುತ್ತೆ” ಎಂದು ಜನರಾಡಿಕೊಳ್ಳುವ ಮಟ್ಟಿಗಿತ್ತು. ಇಂದಿರಾ ಜಾತಿ, ಧರ್ಮ, ಪರರಾಷ್ಟ್ರಗಳ ಹೆಸರಲ್ಲಿ ಎಂದೂ ಮತ ಕೇಳಿದವರಲ್ಲ. ಪಕ್ಷದ ಅಭ್ಯರ್ಥಿಗಳನ್ನುತನ್ನ ಜನಪ್ರಿಯತೆಯಿಂದಲೇ ಗೆಲ್ಲಿಸುತ್ತಿದ್ದರು.

ಇಂದು ಪ್ರಬಲ ನಾಯಕನೆಂದು ಬಿಂಬಿಸುತ್ತಿರುವ ವ್ಯಕ್ತಿಯ ಊರುಗೋಲೇ ಧರ್ಮ. ಜನರನ್ನು ರ‍್ಮದ ಆಧಾರದಲ್ಲಿ ಒಡೆದು, ದ್ವೇಷ ಭಾವನೆಯನ್ನು ಹುಟ್ಟು ಹಾಕಿ, ಕಲ್ಪಿತ ಶತ್ರುವಿನ ಹೆಸರಲ್ಲಿಗೆಲ್ಲುವ ತಂತ್ರ. ನಾನು ಯಾವ ರ‍್ಮಕ್ಕೂ ಸೇರಿದವನಲ್ಲ, ದೇಶದ ಪ್ರಜೆಗಳೆಲ್ಲ ಸಹೋದರ, ಸಹೋದರಿಯರು, ಗುಡಿ, ಚರ್ಚ್‌, ಮಸೀದಿಗಳು ಸಮಾನ, ಅವುಗಳ ರಕ್ಷಣೆಗೆ ನಾನು ಬದ್ಧ ಎಂದು ಘೋಷಿಸಿದರೆ, ಆ ಕ್ಷಣದಲ್ಲೆ ಜನಪ್ರಿಯತೆ ಸೋರಿ ಹೋಗುತ್ತದೆ. ಬಹುಶಃ ತನ್ನ ಕ್ಷೇತ್ರದಲ್ಲೇ ಇಡುಗಂಟು ಸಿಗಲಿಕ್ಕಿಲ್ಲ!

ನಾಯಕನಾದವನ್ನು ಆತನ ವ್ಯಕ್ತಿತ್ವದಿಂದ, ವಿಧಾಯಕ ಕೆಲಸಗಳಿಂದ ಜನರು ಗುರುತಿಸಬೇಕು. ಆತ ಸೋತರೂ, ಇಲ್ಲವಾದರೂ ಜನ ನೆನಪಿಸಿಕೊಳ್ಳಬೇಕು. ಆತ ನಿಜವಾದ ನಾಯಕ. ಐಐಟಿ, ಐಎಎಂಗಳನ್ನು ಕೊಟ್ಟ ನೆಹರು, ʼ ಜೈ ಜವಾನ್, ಜೈ ಕಿಸಾನ್ ʼ ಘೋಷಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ನಾಯಕರೆನ್ನಿಸಿದ್ದು ಹೀಗೆ.


Related Articles

ಇತ್ತೀಚಿನ ಸುದ್ದಿಗಳು

You cannot copy content of this page