ಬೆಂಗಳೂರು: ಅಕ್ಟೋಬರ್ 10 ರಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಕ್ಯಾಂಪಸ್ನಲ್ಲಿ ಬಸ್ ಹತ್ತುತ್ತಿದ್ದ ವೇಳೆ ವಿದ್ಯಾರ್ಥಿನಿಯೊಬ್ಬರು ಕಾಲು ಜಾರಿ ಬಿದ್ದು ಅಪಘಾತವಾಗಿತ್ತು. ಆ ದುರ್ಘಟನೆಯಲ್ಲಿ ಬಿದ್ದ ವಿಧ್ಯಾರ್ಥಿನಿ ಇಂದು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇಂದು ವಿಧ್ಯಾರ್ಥಿನಿಯ ದೇಹವನ್ನು ಪೋಷಕರಿಗೆ ಹಸ್ತಾಂತರಿಸಿದ ವೈದ್ಯರು ಮೃತಪಟ್ಟ ಸುದ್ದಿಯನ್ನು ತಿಳಿಸಿದ್ದಾರೆ. ಆದರೆ ಮೃತದೇಹ ಗಮನಿಸಿದರೆ ಹಲವಷ್ಟು ಅನುಮಾನ ಸೃಷ್ಟಿಯಾಗಿದೆ. ವಿಧ್ಯಾರ್ಥಿನಿ ನೆನ್ನೆ ಅಥವಾ ಇವತ್ತು ಸಾವನ್ನಪ್ಪಿರುವ ರೀತಿ ಭಾಸವಾಗುತ್ತಿಲ್ಲ.

ಮೃತದೇಹ ಗಮನಿಸಿದರೆ ವಿಧ್ಯಾರ್ಥಿನಿ ಮೃತಪಟ್ಟು ಕೆಲವು ದಿನಗಳೇ ಕಳೆದಿದ್ದು, ಬೇಕಂತಲೇ ತಡವಾಗಿ ವಿಷಯ ತಿಳಿಸಿದಂತೆ ಅನುಮಾನ ವ್ಯಕ್ತವಾಗಿದೆ. ಹಬ್ಬದ ಸಮಯ ನೋಡಿ, ಪರಿಸ್ಥಿತಿ ಸುಧಾರಿಸಿದ ಮೇಲೆ ತಿಳಿಸಬೇಕು ಅಂತ ಡಾಕ್ಟರ್ ಗಳು ಸುಮ್ಮನಿದ್ದು ಈಗ ತಿಳಿಸಿರಬಹುದು ಎಂದೂ ಸಹ ವಿಧ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅನುಮಾನ ವ್ಯಕ್ತವಾಗಿದೆ.
ಇಂದು ಭಾನುವಾರ. ಯೂನಿವರ್ಸಿಟಿಯಲ್ಲಿನ ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಬ್ಬಕ್ಕೆಂದು ಊರಿಗೆ ಹೋಗಿರುತ್ತಾರೆ. ಇದರ ನಡುವೆ ಸುಧೀರ್ಘ ರಜೆ ಬೇರೆ ಇರುವುದರಿಂದ ಪ್ರತಿಭಟನೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಮೃತದೇಹವನ್ನು ತಡವಾಗಿ ಹಸ್ತಾಂತರಿಸಿರಬಹುದು ಎಂದೂ ಅಂದಾಜಿಸಲಾಗಿದೆ.
ಅಪಘಾತದ ದುರ್ಘಟನೆಯ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಜ್ಞಾನ ಭಾರತಿ ಕ್ಯಾಂಪಸ್ನಲ್ಲಿ ಸಾರ್ವಜನಿಕ ಬಸ್ಗಳ ಸಂಚಾರವನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಎರಡೂ ಗೇಟ್ಗಳನ್ನು ಬಂದ್ ಮಾಡಿದ್ದರು. ಈ ವೇಳೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಿರುದ್ಧವೂ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದರು.