ಮಾಲೂರು: ಮಾಲೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಮತ್ತು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಹಾಲು
ಒಕ್ಕೂಟದ (ಕೋಚಿಮುಲ್) ಅಧ್ಯಕ್ಷರು ಸಹಾ ಆಗಿರುವ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸೋಮವಾರ ಮುಂಜಾನೆ 5:00 ಗಂಟಗೆ ಸರಿಯಾಗಿ ದಾಳಿ ನಡೆಸಿದ್ದಾರೆ.
ಶಾಸಕರ ಮಾಲೂರು ತಾಲ್ಲೂಕಿನ ಕೊಮ್ಮನಹಳ್ಳಿಯಲ್ಲಿನ ತಮ್ಮ ನಿವಾಸ, ಶಾಸಕರ ಆಪ್ತ ಸಹಾಯಕನಾದ ಹರೀಶ್ ನಿವಾಸ, ಶಾಸರ ಮಾಲೀಕತ್ವದ ಕೊಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್, ಕೋಲಾರದಲ್ಲಿನ ಕೋಚಿಮುಲ್ ಕಚೇರಿ, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕರಾದಂತಹ ಗೋಪಾಲಮೂರ್ತಿ ನಿವಾಸ, ಹಾಗೂ ಆಡಳಿತಾತ್ಮಕ ನಿರ್ದೇಶಕರಾದ ನಾಗೇಶ್ ಅವರ ನಿವಾಸ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಶೋಧಕಾರ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಕೋಚಿಮುಲ್ ನೇಮಕಾತಿ ವಿಚಾರದಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. ಘೋಷಣೆಗೆ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಪಟ್ಟಿ ಹರಿದಾಡಿತ್ತು. ಇದರ ಅರೋಪ ಶಾಸಕರ ಮೇಲೆ ಇತ್ತು. ಇದೇ ವಿಚಾರವಾಗಿ ಸಂಸದರಾದ ಮುನಿಸ್ವಾಮಿ ಅವರು ಶಾಸಕ ನಂಜೇಗೌಡರ ಮೇಲೆ ತೀವ್ರ ವಾಗ್ದಾಳಿಯನ್ನು ನಡೆಸಿದ್ದರು.
ಸಧ್ಯಕ್ಕೆ ಇ,ಡಿ ಅವರು ಶೋಧಕಾರ್ಯ ಮುಂದುವರೆಸಿದ್ದಾರೆ ಎನ್ನಲಾಗಿದ್ದು. ಶಾಸಕರ ಮನೆಯಲ್ಲಿ ನಂಜೇಗೌಡ ಅವರು ಮತ್ತು ಅವರ ತಮ್ಮ ಇರುವುದಾಗಿ ತಿಳಿದು ಬಂದಿದೆ. ಶೋಧಕಾರ್ಯ ಮುಗಿದ ನಂತರ ಮತ್ತಷ್ಟು ವಿಚಾರಗಳು ತಿಳಿಯಲಿವೆ.