Thursday, June 13, 2024

ಸತ್ಯ | ನ್ಯಾಯ |ಧರ್ಮ

ಪ್ರತಿಭಟನೆಗಳನ್ನು ವರದಿ ಮಾಡುವುದು ಅಪರಾಧವಲ್ಲ: ಪಿಣರಾಯಿ ಸರ್ಕಾರಕ್ಕೆ ಎಡಿಟರ್ಸ್ ಗಿಲ್ಡ್

ವಿದ್ಯಾರ್ಥಿಗಳ ಪ್ರತಿಭಟನೆಯನ್ನು ವರದಿ ಮಾಡಿದ್ದಕ್ಕಾಗಿ ಕೇರಳದ ಪತ್ರಕರ್ತರೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು “ತೀವ್ರ ನೋವುಂಟು ಮಾಡಿದೆ” ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ.

ಸುದ್ದಿ ವಾಹಿನಿ 24 ನ್ಯೂಸ್‌ನ ಪತ್ರಕರ್ತೆ ವಿಜಿ ವಿನೀತಾ ಅವರು ಡಿಸೆಂಬರ್ 10 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ನಡೆದ ಪ್ರತಿಭಟನೆಯ ಬಗ್ಗೆ ವರದಿ ಮಾಡುತ್ತಿದ್ದರು. ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಕೇರಳ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಿಣರಾಯಿ ವಾಹನದ ಮೇಲೆ ಶೂಗಳನ್ನು ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಂಘಟನೆಯ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕುರುಪ್ಪಂಪಾಡಿ ಪೊಲೀಸರು, ಪತ್ರಕರ್ತೆ ವಿನೀತಾ ಅವರನ್ನು ಐದನೇ ಆರೋಪಿ ಎಂದು ಕರೆದಿದ್ದಾರೆ. ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.  “ವಿನೀತಾ ಕೆಲವು ಕೆಎಸ್‌ಯು ಕಾರ್ಯಕರ್ತರೊಂದಿಗೆ ನಿರಂತರ ಸಂವಹನ ನಡೆಸುತ್ತಿದ್ದರು,” ಪೊಲೀಸ್ ಮೂಲಗಳು ಆರೋಪಿಸಿ, ಈ ಯೋಜಿತ ಪ್ರತಿಭಟನೆಯ ಬಗ್ಗೆ ಅವರಿಗೆ ತಿಳಿದಿತ್ತು ಎಂದು ಹೇಳಿವೆ.  ಅವರ ಮೇಲೆ ಕ್ರಿಮಿನಲ್ ಪಿತೂರಿಯ ಆರೋಪ ಹೊರಿಸಲಾಗಿದೆ.

ಈ ಪಿತೂರಿ ಏನೂ ಇಲ್ಲ ಎಂಬುದನ್ನು ಸಾಬೀತು ಪಡಿಸುವಂತೆ ವಿಜಯನ್‌ ಮಾಧ್ಯಮಕ್ಕೆ ತಿಳಿಸಿರುವುದಾಗಿ ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.

ಕೇರಳ ಸರ್ಕಾರ ನಡೆಯನ್ನು ಖಂಡಿಸಿ ಎಡಿಟರ್ಸ್‌ ಗಿಲ್ಡ್ “ಪ್ರತಿಭಟನೆಗಳನ್ನು ವರದಿ ಮಾಡುವುದು ಮಾಧ್ಯಮದ ಜವಾಬ್ದಾರಿ, ಅದು ಅಪರಾಧವಲ್ಲ. ಪ್ರತಿಭಟನಾ ಸ್ಥಳದಲ್ಲಿ ವರದಿಗಾರನ ಉಪಸ್ಥಿತಿಯು ನಡೆಯಬಹುದಾದ ಯಾವುದೇ ಅಹಿತಕರ ಘಟನೆಗೆ ಅವನು/ಅವಳಿಗೆ ಸಂಬಂಧ ಇರುವುದಿಲ್ಲ,” ಅವನು ಅಥವಾ ಅವಳ ಸಹಭಾಗಿಯಾಗುವುದಿಲ್ಲ.” ಎಂದು ಹೇಳಿಕೆ ನೀಡಿದೆ.

ಪೀಪಲ್ ಮೀಡಿಯಾ ವಾಟ್ಸಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್‌ ಮಾಡಿ: ಪೀಪಲ್‌ ಮೀಡಿಯಾ

ತನ್ನ ಪ್ರಕಟಣೆಯಲ್ಲಿ ಎಡಿಟರ್ಸ್‌ ಗಿಲ್ಡ್‌  “ವರದಿಗಾರನನ್ನು ಶಿಕ್ಷಿಸುವುದನ್ನು ನಿಲ್ಲಿಸಬೇಕು” ಎಂದು ಕೇರಳ ಸರ್ಕಾರವನ್ನು ಒತ್ತಾಯಿಸಿದೆ. ವರದಿಗಾರನ ವಿರುದ್ಧ ಇರುವ ಆರೋಪಗಳನ್ನು ಹಿಂಪಡೆದು, ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಪೊಲೀಸರಿಗೆ ಸೂಚನೆ ನೀಡಿದೆ.

ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟವೂ ಪೊಲೀಸರು ಈ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದು, ಇದು “ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಆಕ್ರಮಣ ಮತ್ತು ನ್ಯಾಚುರಲ್ ಜಸ್ಟೀಸ್‌ಗೆ ವಿರುದ್ಧ” ಎಂದು ಕರೆದಿದೆ.

Related Articles

ಇತ್ತೀಚಿನ ಸುದ್ದಿಗಳು