Thursday, June 26, 2025

ಸತ್ಯ | ನ್ಯಾಯ |ಧರ್ಮ

ನಾವು ಅಲ್ಲಿಗೆ ಹೋದ್ರೆ ಈಗ ಹೊಡೀತಾರೆ: ದಲಿತ ಯುವಕನ ಅಳಲು

ಚಿಕ್ಕಮಗಳೂರು: “ನಮ್ಮ 13 ಕುಟುಂಬಗಳ ಆಧಾರ್‌ ಕಾರ್ಡ್‌ ಅವರೇ ಇಟ್ಕೊಂಡಿದ್ದಾರೆ. ಇಂದು ಬೆಳಿಗ್ಗೆ ನಮ್ಮ ಮಕ್ಕಳು ಹೆಂಡತಿ ಎಲ್ಲರನ್ನೂ ಒಂದು ರೂಮಿಗೆ ಹಾಕಿ ಕೂಡಿ ಹಾಕಿದ್ದಾರೆ. ಅರ್ಪಿತಾ, ರೂಪಾ ಮತ್ತು ಇಂದ್ರ ಎಂಬ ಮೂರು ಜನ ಮಹಿಳೆಯರ ಮೇಲೆ ಜಗದೀಶ್‌ ಎಸ್ಟೇಟ್‌ ಮಾಲೀಕ ಗೌಡ್ರು ಹಲ್ಲೆ ಮಾಡಿದ್ದಾರೆ” ಎಂದು ದಲಿತ ಕುಟುಂಬದ ಯುವಕ ಆರೋಪಿಸಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ಜೇನುಗುಡ್ಡೆಯಲ್ಲಿ ಎಸ್ಟೇಟ್‌ ಮಾಲೀಕ ಹಾಗೂ ಬಿಜೆಪಿಯ ಮುಖಂಡ ಜಗದೀಶ್‌ ಗೌಡ ಎಂಬುವವರು 14 ಮಂದಿ ದಲಿತ ಮಹಿಳಾ ಕಾರ್ಮಿಕರನ್ನು ಕೂಡಿ ಹಾಕಿ ಹಲ್ಲೆ ನಡೆಸಿದ್ದ ಕುರಿತು ಪೀಪಲ್‌ ಮೀಡಿಯಾ ವರದಿ ಮಾಡಿತ್ತು.

ಇದೀಗ ಚಿಕ್ಕಮಗಳೂರು ಪೊಲೀಸರು ತಡವಾಗಿ ಎಚ್ಚೆತ್ತುಕೊಂಡು, ಹಲ್ಲೆ ಮಾಡಿರುವ ಎಸ್ಟೇಟ್‌ ಮಾಲೀಕರ ಮೇಲೆ ಎಫ್‌ ಐ ಆರ್‌ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿ ಮಾದ್ಯಮದವರೊಂದಿಗೆ ಮಾತನಾಡಿರುವ ಕುಟುಂಬದ ಯುವಕರು “ನಾವೀಗ ಅಲ್ಲಿಗೆ ಹೋದ್ರೆ ಹೊಡೀತಾರೆ, ನಮಗೆ ಹೆದ್ರಿಕೆ ಆಗ್ತಾ ಇದೆ. ನಮ್ಮ ಕುಟುಂಬದವರು ಕೂಡಲೇ ಬಿಡುಗಡೆಯಾಗಬೇಕು” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page