Friday, April 26, 2024

ಸತ್ಯ | ನ್ಯಾಯ |ಧರ್ಮ

ಸಿಎಂ ಸರ್.. ನಮ್ಮವರ ಮೃತ ದೇಹಗಳನ್ನು ಅಮೇರಿಕಾದಿಂದ ತರಿಸಿಕೊಡಿ!

ಬೆಂಗಳೂರು: ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಕನ್ನಡಿಗರ ಕುಟುಂಬವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿತ್ತು. ಸಾವಿನಿಂದಾಗಿ ಮೃತರ ಊರು ದುಃಖದ ಕಡಲಿನಲ್ಲಿ ಮುಳುಗಿದ್ದು, ಪ್ರಸ್ತುತ ಮೃತ ದೇಹಗಳಿಗಾಗಿ ಎದುರು ನೋಡುತ್ತಿದೆ.

ಈ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಸ್ಥರು ಸೋಮವಾರ ಸಿಎಂ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಅಮೆರಿಕದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಅವರವರ ಊರಿಗೆ ತರಲು ನೆರವು ನೀಡುವಂತೆ ಸಿಎಂಗೆ ಅವರು ಮನವಿ ಮಾಡಿದರು.

ಯೋಗೇಶ್ ಎಚ್.ನಾಗರಾಜಪ್ಪ (37), ಪ್ರತಿಭಾ ವೈ.ಅಮರನಾಥ್ (37) ಮತ್ತು ಯಶ್ ಹೊನ್ನಾಳಿ (6) ಅವರು ಗುಂಡೇಟಿನಿಂದ ಗಾಯಗೊಂಡು ಅಮೇರಿಕದ ಬಾಲ್ಟಿಮೋರ್ ಕೌಂಟಿಯಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು.

ಮೃತರ ಮೃತದೇಹಗಳನ್ನು ಸ್ವಗ್ರಾಮಕ್ಕೆ ತರಲು ಸಹಕರಿಸುವಂತೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಸಿಎಂ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಚೇರಿ ತಿಳಿಸಿದೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹಾಲೇಕಲ್ಲು ಮೂಲದ ಯೋಗೇಶ್ ಒಂಬತ್ತು ವರ್ಷಗಳ ಹಿಂದೆ ಬೆಂಗಳೂರಿನ ಪ್ರತಿಭಾ ಅವರನ್ನು ವಿವಾಹವಾಗಿದ್ದು, ಅಂದಿನಿಂದ ಅಮೆರಿಕದಲ್ಲಿ ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗಳಿಗೆ ಅಮೆರಿಕದಲ್ಲಿ ಸ್ವಂತ ಮನೆಯಿತ್ತು.

ಯೋಗೇಶ್ ತನ್ನ ಮಗ ಮತ್ತು ಹೆಂಡತಿಯ ಮೇಲೆ ಮಾರಣಾಂತಿಕವಾಗಿ ಗುಂಡು ಹಾರಿಸಿದ್ದಾರೆಎಂದು ಶಂಕಿಸಲಾಗಿದೆ ಬಾಲ್ಟಿಮೋರ್ ಕೌಂಟಿ ಪೊಲೀಸ್ ವಕ್ತಾರ ಆಂಥೋನಿ ಶೆಲ್ಟನ್ ಹೇಳಿದ್ದಾರೆ.

ಮಂಗಳವಾರ ಸಂಜೆಯ ನಂತರ ಮೂವರೂ ಸುತ್ತಮುತ್ತಲಿನವರಿಗೆ ಕಾಣಿಸಿರಲಿಲ್ಲ. ಸಹೋದ್ಯೋಗಿಗಳು ಕೆಲಸಕ್ಕೆ ಹಾಜರಾಗದ ಕಾರಣ ಮತ್ತು ಫೋನ್ ಕರೆಗಳಿಗೆ ಸ್ಪಂದಿಸದ ಕಾರಣ ಅವರ ಮನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು