Home ಬ್ರೇಕಿಂಗ್ ಸುದ್ದಿ ಹಾಸನ ಹಾಸನ ವಕ್ಪ್ ಬೋರ್ಡ್ ಕಛೇರಿಯಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೂ ಜಾಗೃತಿಗಾಗಿ – ಅಕ್ಮಲ್...

ಹಾಸನ ವಕ್ಪ್ ಬೋರ್ಡ್ ಕಛೇರಿಯಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೂ ಜಾಗೃತಿಗಾಗಿ – ಅಕ್ಮಲ್ ಜಾವೀದ್

ಹಾಸನ : ಏಪ್ರಿಲ್ 23ರ ಬೆಳಗ್ಗೆ 10.30ಕ್ಕೆ ಹಾಸನದ ವಕ್ಪ್ ಬೋರ್ಡ್ ಕಛೇರಿಯಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೂ ಜಾಗೃತಿಗಾಗಿ ಜಾಥ ಹೊರಡುವುದಾಗಿ ವೀರ ಕನ್ನಡಿಗ ಟಿಪ್ಪು ಸೇನೆ ಸಂಸ್ಥಾಪಕ ಅಧ್ಯಕ್ಷ ಅಕ್ಮಲ್ ಜಾವೀದ್ ಮತ್ತು ಸಮಾಜ ಸೇವಕ ಅಜಮ್ ಖಾನ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ವಕ್ಸ್ ಕಾಯ್ದೆ 2025 ಈ ವಕ್ಪ್ ಕಾಯ್ದೆ ಜಾರಿ ಮಾಡಿರುವ ಮತ್ತು ತಿದ್ದುಪಡಿ ಮಾಡಿರುವ ನಮ್ಮ ಕೇಂದ್ರ ಸರ್ಕಾರದಲ್ಲಿ ನಾವು ಮುಸ್ಲಿಂ ಸಮುದಾಯದ ನಾಯಕರಲ್ಲಿ ಹಾಗೂ ಮುಸ್ಲಿಂ ಸಮುದಾಯಗಳ ಧಾರ್ಮಿಕ ಮುಖಂಡರುಗಳಲ್ಲಿ ಮುಸ್ಲಿಂ ಸಮುದಾಯದ ಗ್ರಂಥಗಳನ್ನು ಅಧ್ಯಯನ ಮಾಡದೆ, ನಮ್ಮ ರಾಷ್ಟçದ ಗೌರವಾನ್ವಿತ ಪ್ರಧಾನಮಂತ್ರಿಗಳು ಮತ್ತು ರಾಷ್ಟçಪತಿಯಿಂದ ತುರ್ತಾಗಿ ಅನುಮತಿ ಪಡೆದಿರುವ ಕರಡು ಬಿಲ್ಲನ್ನು ರಾಷ್ಟಾçಧ್ಯಂತ ಮುಸ್ಲಿಂ ಸಮುದಾಯ ಒಪ್ಪಲು ಅಸಾಧ್ಯ, ಈ ಬಿಲ್ಲಿನಲ್ಲಿ ಬಹಳಷ್ಟು ಲೋಪ ದೋಷಗಳಿದ್ದು, ಹಾಗೂ ಸದರಿ 10 ವರ್ಷಕ್ಕೂ ಅಧಿಕಾರದಲ್ಲಿದ್ದು, ಸಹ ಭ್ರಷ್ಟಾಚಾರ ಮಾಡಿರುವ ವಕ್ಸ್ ಆಸ್ತಿಗಳು ಲೂಟಿ ಮಾಡಿರುವ ಪ್ರಭಾವಿಗಳ ಮೇಲೆ ಕ್ರಮಗಳು ಏನು? ಇದನ್ನು ತಿಳಿದುಕೊಳ್ಳಲು ನಾವುಗಳು ಸರ್ವಾನುಮತದಿಂದ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿಯವರಿಗೆ ಪ್ರಶ್ನಿಸಿದ್ದು, ಇದಕ್ಕೆ ಮುಸ್ಲಿಂ ಸಮುದಾಯದವರು ಕೇಳುತ್ತಿರುವ ಪ್ರಶ್ನೆಗಳಿಗೆ ಪೂರ್ಣ ಪ್ರಮಾಣದ ಉತ್ತರ ನೀಡಬೇಕೆಂದು ವಿನಂತಿಸುತ್ತೇವೆ ಎಂದರು.

ನಮ್ಮ ಪೂರ್ವಿಕರು ಮುಸ್ಲಿಂ ಸಮಾಜದ ಏಳಿಗೆಗಾಗಿ ದಾನದ ರೂಪದಲ್ಲಿ ನೀಡಿರುವ ಆಸ್ತಿ ಆಗಿದ್ದು, ಈ ಆಸ್ತಿಗಳನ್ನು ಸಂರಕ್ಷಿಸಿಕೊಳ್ಳಲು ಹಾಗೂ ಇದರ ನಿರ್ವಹಣೆಗಾಗಿ ರೂಪಿಸಿರುವ ಅಂಗವೇ ‘ವಕ್ಸ್ ಬೋರ್ಡ್’. ಇದಕ್ಕೆ ಯಾವುದೇ ಸರ್ಕಾರ ಯಾವುದೇ ರೀತಿಯ ಆಸ್ತಿಯನ್ನು ನೀಡಿರುವುದಿಲ್ಲ. ಮುಸ್ಲಿಮರಿಂದ ಮುಸ್ಲಿಮರಿಗೆ ದಾನದ ರೂಪದಲ್ಲಿ ಬಂದಿರುವ ಆಸ್ತಿಯನ್ನು ಸಂರಕ್ಷಿಸಿ ನಿರ್ವಹಿಸಲು ಇದರ ಪ್ರತಿಫಲವನ್ನು ಸಮಾಜದ ಫಲಾನುಭವಿಗಳಿಗೆ ನ್ಯಾಯೋಚಿತವಾಗಿ ವಿತರಿಸಲು ಸರ್ಕಾರದ ಅಡಿಯಲ್ಲಿ ರೂಪಿಸಲಾಗಿರುವ ಘನ ಉದ್ದೇಶದ ಸಂಸ್ಥೆ ಅಷ್ಟೇ. ಇದರಲ್ಲಿ ನಮ್ಮ ರಾಷ್ಟçದ ಪ್ರಧಾನಿಗಳು ಮುಸ್ಲಿಂ ಸಮುದಾಯದ ಏಳಿಗೆಗಾಗಿ ವಕ್ಸ್ ಮಂಡಳಿಗೆ ನೀಡಿರುವ ಸ್ಥಿರಾಸ್ತಿ ಮತ್ತು ದಾನದ ರೂಪದಲ್ಲಿ ನೀಡಿರುವ ಆಸ್ತಿಗಳ ವಿವರಗಳ ಬಗ್ಗೆ ಸ್ವವಿಮರ್ಶೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.


ಮುಸ್ಲಿಂ ಸಮುದಾಯದ ವಕ್ಸ್ ಬಿಲ್ಲು ತಿದ್ದುಪಡಿಗಾಗಿ ‘ವಿಧಾನಸೌಧ ಚಲೋ ಮತ್ತು ಮಾನ್ಯ ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಗಳು ವಕ್ಸ್ ಸಚಿವರು, ವಕ್ಸ್ ಮಂಡಳಿಯ ರಾಜ್ಯಾಧ್ಯಕ್ಷರು ನಮ್ಮಗಳ ಮನವಿಯನ್ನು ಸಲ್ಲಿಸಲು ಹೊರಟಿರುವ ಕರ್ನಾಟಕದ ಸಹಸ್ರಾರು ಮುಸ್ಲಿಂ ಬಾಂಧವರು ಹಾಗೂ ಹಿತೈಷಿಗಳು, ಈ ಜಾಗೃತಿ ಜಾಥ ದಲ್ಲಿ ಸ್ವಯಂ ಪ್ರೇರಿತರಾಗಿ ಸ್ವಂತ ಖರ್ಚಿನಿಂದ ಬನ್ನಿ ಸಮಾಜಕ್ಕಾಗಿ ಶ್ರಮಿಸೋಣ ಹಾಗೂ ಮುಸ್ಲಿಂ ಏಳಿಗೆಗಾಗಿ ಐಕ್ಯತೆಯಿಂದ ಒಂದುಗೂಡೋಣ ನಮ್ಮ ಆಸ್ತಿ ನಮಗೆ ಇರಲಿ, ಇನ್ನೊಬ್ಬರ ಆಸ್ತಿ ನಮಗೆ ಬೇಡ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇವಕ ಅಜಮ್ ಖಾನ್, ವೀರ ಕನ್ನಡಿಗ ಟಿಪ್ಪು ಸೇನೆ ತಾಲೂಕು ಅಧ್ಯಕ್ಷ ಮುಶೀರ ಅಹಮದ್, ಅರಕಲಗೂಡು ತಾಲೂಕು ಅಧ್ಯಕ್ಷ ಜಮೀರ್ ಅಹಮದ್, ಸಕಲೇಶಪುರ ತಾಲೂಕು ಅಧ್ಯಕ್ಷ ಕಫೀಲ್ ಪಾಶ, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಫಾರೂಕ್ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version