Home ಬ್ರೇಕಿಂಗ್ ಸುದ್ದಿ “ದೇವರು ರಾಜಕೀಯದಲ್ಲಿ ಇರಬಾರದು” ; ಮೋದಿ ಹೇಳಿಕೆ ಲೇವಡಿ ಮಾಡಿದ ಮಮತಾ ಬ್ಯಾನರ್ಜಿ

“ದೇವರು ರಾಜಕೀಯದಲ್ಲಿ ಇರಬಾರದು” ; ಮೋದಿ ಹೇಳಿಕೆ ಲೇವಡಿ ಮಾಡಿದ ಮಮತಾ ಬ್ಯಾನರ್ಜಿ

0

ದೇವರು ರಾಜಕೀಯದಲ್ಲಿ ಇರಬಾರದು ಅಥವಾ ಗಲಭೆಗಳಿಗೆ ಪ್ರಚೋದನೆ ನೀಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲೇವಡಿ ಮಾಡಿದ್ದಾರೆ. ಇತ್ತೀಚೆಗೆ ನರೇಂದ್ರ ಮೋದಿಯವರ  “ದೇವದೂತ” ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಮೋದಿಯವರಿಗೆ ದೇವಾಲಯವನ್ನು ನಿರ್ಮಿಸಿ ಸಾಂಪ್ರದಾಯಿಕ ಕೊಡುಗೆಗಳನ್ನು ನೀಡಬಹುದು ಎಂದು ಸಲಹೆ ನೀಡಿದರು.

“ಅವರು (ಪಿಎಂ ಮೋದಿ) ದೇವರುಗಳ ದೇವರು ಎಂದು ಒಬ್ಬ ಬಿಜೆಪಿ ನಾಯಕ ಹೇಳುತ್ತಾರೆ. ಭಗವಾನ್ ಜಗನ್ನಾಥನೇ ಮೋದಿಯ ಭಕ್ತ ಅಂತ ಇನ್ನೊಬ್ಬ ನಾಯಕ ಹೇಳುತ್ತಾರೆ, ಇದೆಲ್ಲಾ ಏನು ಸೂಚಿಸುತ್ತಿದೆ” ಎಂದು ಮಮತಾ ಬ್ಯಾನರ್ಜಿ ಬರಾಸತ್‌ನಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದಾರೆ.

“ದೇವರು ಎನ್ನುವ ವ್ಯಕ್ತಿ ರಾಜಕೀಯದಲ್ಲಿ ಇರಬಾರದು. ದೇವರು ಗಲಭೆ ಎಬ್ಬಿಸಬಾರದು. ಆತನಿಗೆ ದೇವಸ್ಥಾನ ನಿರ್ಮಿಸಿ ಪ್ರಸಾದ, ಹೂವು, ಸಿಹಿತಿಂಡಿ ನೀಡುತ್ತೇವೆ, ಬಯಸಿದಲ್ಲಿ ಧೋಕ್ಲಾ ಕೂಡ ನೀಡುತ್ತೇವೆ” ಎಂದು ನರೇಂದ್ರ ಮೋದಿಯ ಹೇಳಿಕೆಗೆ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿಯವರ ಹೇಳಿಕೆ ಬಂದಿದೆ. “ನನ್ನ ತಾಯಿ ಜೀವಂತವಾಗಿರುವವರೆಗೆ, ನಾನು ಜೈವಿಕವಾಗಿ ಹುಟ್ಟಿದ್ದೇನೆ ಎಂದು ನಾನು ಭಾವಿಸುತ್ತಿದ್ದೆ. ಆಕೆಯ ನಿಧನದ ನಂತರ, ನನ್ನ ಅನುಭವಗಳನ್ನು ನೋಡಿದಾಗ, ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ. ಈ ಶಕ್ತಿ ನನ್ನ ದೇಹದಿಂದಲ್ಲ. ಅದನ್ನು ದೇವರು ನನಗೆ ಕೊಟ್ಟಿದ್ದಾನೆ. ನಾನು ದೇವರು ಕಳುಹಿಸಿದ ಸಾಧನವಲ್ಲದೆ ಬೇರೇನೂ ಅಲ್ಲ.” ಎಂಬ ಹೇಳಿಕೆ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗುತ್ತಿದೆ.

ಇಷ್ಟೇ ಅಲ್ಲದೇ ಬಿಜೆಪಿಯ ಪುರಿ ಲೋಕಸಭಾ ಅಭ್ಯರ್ಥಿ ಸಂಬಿತ್ ಪಾತ್ರ ಕೂಡ ಒಡಿಶಾದ ಅತ್ಯಂತ ಪೂಜ್ಯ ದೇವರು “ಭಗವಾನ್ ಜಗನ್ನಾಥ ಪ್ರಧಾನಿ ನರೇಂದ್ರ ಮೋದಿಯ ಭಕ್ತ” ಎಂದು ಹೇಳುವ ಮೂಲಕ ಕಳೆದ ವಾರ ವಿವಾದವನ್ನು ಹುಟ್ಟುಹಾಕಿದ್ದರು.

“ಎಲ್ಲರೂ ಜೈವಿಕವಾಗಿ ಹುಟ್ಟಿದ್ದರೆ, ನರೇಂದ್ರ ಮೋದಿ ಜಿ ಜೈವಿಕ ಅಲ್ಲ. ಮೋದಿಜೀ ಉಪರ್ ಸೆ ತಪಕ್ ಕ್ರ ಆಯ್ ಹೈ. ಉಂಕೋ ಪರಮಾತ್ಮ ನೇ ಹಿಂದೂಸ್ತಾನ್ ಕೇ ಭೇಜಾ ಹೈ. ಅವರನ್ನು ಅಂಬಾನಿ ಮತ್ತು ಅದಾನಿಗೆ ಸಹಾಯ ಮಾಡಲು ಅವರ ‘ಪರಮಾತ್ಮ’ ಕಳುಹಿಸಿದ್ದಾರೆ. ಈ ಪರಮಾತ್ಮ ರೈತರು, ಕಾರ್ಮಿಕರು ಮತ್ತು ಬಡವರಿಗೆ ಸಹಾಯ ಮಾಡಲು ಬಂದವರಲ್ಲ. ಇದು ಯಾವ ರೀತಿಯ ದೇವರು, ಇದು ಪ್ರಧಾನಿ ಮೋದಿಯ ದೇವರು” ಎಂದು ರಾಹುಲ್ ಗಾಂಧಿ ಹೇಳಿದ್ದರು.

You cannot copy content of this page

Exit mobile version