Saturday, June 21, 2025

ಸತ್ಯ | ನ್ಯಾಯ |ಧರ್ಮ

ಗೌರಿ ನೆನಪು | ಮಕ್ಕಳನ್ನು ಪ್ರತ್ಯೇಕಿಸಿ ನೋಡದ ಶಿಕ್ಷಕರಿರುವ ದೇಶ ನನ್ನ ಕನಸು – ಸುಪ್ರಿಯಾ ಸನಟೆ

ಬೆಂಗಳೂರಿನಲ್ಲಿ ನಡೆದ ಗೌರಿ ನೆನಪು ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಸನಟೆಯವರು ಮಾಡಿದ ಭಾಷಣದ ಸಂಕ್ಷಿಪ್ತ ರೂಪ.

ನಾವೆಲ್ಲರೂ ಇಲ್ಲಿ ಒಂದು ದಿಟ್ಟ ಮತ್ತು ಸುಂದರ ಬದುಕನ್ನು ಬದುಕಿದ ಗೌರಿಯವರ ನೆನಪನ್ನು ಸಂಭ್ರಮಿಸಲು ಸೇರಿದ್ದೇವೆ.


ಇಂದಿನ ಸಂದರ್ಭದಲ್ಲಿ ಭಾರತ ಎಂದರೆ ಯಾವುದು? ಕೆಲವರಿಗೆ ಇಂಡಿಯಾ ಎನ್ನುವ ಹೆಸರೇ ಅಸಹನೆ ಹುಟ್ಟಿಸುತ್ತಿದೆ. ಇಂಡಿಯಾ ಎಂಬ ಹೆಸರು ಸಂವಿಧಾನದಿಂದ ದೊರಕಿದ್ದು, ಇದನ್ನು ಇಂದು ಭಾರತ ಎಂದು ಮಾತ್ರವೇ ಆಗಿ ಬದಲಿಸುವ ಪ್ರಯತ್ನ ನಡೆಯುತ್ತಿದೆ. ಇಂದಿನ ಜಿ20ರ ಸಮಾವೇಶದಲ್ಲೂ ದ್ರೌಪದಿ ಮುರ್ಮು ಅವರು ಅದನ್ನೇ ಪುನರುಚ್ಛರಿಸಿದ್ದಾರೆ.

ಬಹುಶಃ ಒಳಗೊಳಗೆ ಈ ಹೆಸರನ್ನು ಬದಲಿಸುವ ಪ್ರಯತ್ನ ನಡೆಯುತ್ತಿದೆ. ಇದನ್ನು ಒಪ್ಪಲಾಗದು, ವಿ ದ ಪೀಪಲ್‌ ಆಫ್‌ ಇಂಡಿಯಾ, ನಾವು ಭಾರತೀಯರು ಎಂಭುದು ಸಂವಿಧಾನದ ಕೊಡುಗೆ, ಇದನ್ನು ಒಬ್ಬ ಮನುಷ್ಯ ಒಪ್ಪುವುದಿಲ್ಲ ಎಂದು ನಾವು ತೆಗೆದುಹಾಕಲಾಗದು. ಒಬ್ಬ ವ್ಯಕ್ತಿ ತನ್ನ ಅಭಿಪ್ರಾಯಕ್ಕೆ ವಿರುದ್ಧ ಇರುವವರನ್ನು ಸಹಿಸುವುದಿಲ್ಲ ಎಂದರೆ ಈ ದೇಶದಲ್ಲಿ ಏನೋ ಸಮಸ್ಯೆಯಿದೆ ಎಂದು ಅರ್ಥ.

ನಾನು ನನ್ನ ತಾಯಿಯನ್ನು ಅಮ್ಮ ಎಂದು ಕರೆಯುತ್ತೀನಿ, ಕೆಲವರು ಮಾಯಿ ಎನ್ನಬಹುದು ಅಥವಾ ಬೇರೇನೋ ಹೆಸರಿನಿಂದ ಕರೆಯಬಹುದು, ಅದನ್ನು ಬದಲಿಸುವ ಉದ್ಧಟತನ ಯಾರು ತೋರಿಸುತ್ತಾರೆ? ಭಾರತ ಎಂಬುದು ಸಾವಿರಾರು ವರ್ಷಗಳ ಇರಿಹಾಸವಿರುವ ಉಜ್ವಲವಾದ ದೇಶ, ಇಲ್ಲಿ ನದಿಗಳಿವೆ, ನಾಲೆಗಳೀವೆ, ಜನರಿದ್ದಾರೆ, ರಾಜ್ಯಗಳಿವೆ. ಇವೆಲ್ಲವೂ ಸೇರಿ ಭಾರತ. ಈ ದೇಶ ಕಾರ್ಮಿಕರಿಗೆ ಸೇರಿದ್ದು, ರೈತರಿಗೆ ಸೇರಿದ್ದು, ವಿದ್ಯಾರ್ಥಿಗಳಿಗೆ ಸೇರಿದ್ದು ಮಹಿಳೆಯರಿಗೆ ಸೇರಿದ್ಧು

ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಸಾವಿರಾರು ಕಿಮೀ ನಡೆದು ಬಡವರನ್ನು ಭೇಟಿಯಾಗಿ, ಅವರ ಬದುಕಿನ ಬಗ್ಗೆ ಕೇಳಿ ನಡೆದರು. ಯಾರು ಬೇಕಾದರೂ ಅವರನ್ನು ಭೇಟಿಯಾಗಬಹುದಿತ್ತು. ಅವರ ಬದುಕನ್ನು ಅಪಾಯಕ್ಕೊಡ್ಡಿ ಈ ಕೆಲಸ ಮಾಡಿದರು, ತನ್ನ ತಂದೆ ಮತ್ತು ಅಜ್ಜಿಯ ಹತ್ಯೆಯನ್ನು ಕಣ್ಣೆದುರು ಕಂಡ ವ್ಯಕ್ತಿ ಈ ಕೆಲಸ ಮಾಡಿದ್ದಕ್ಕಾಗಿಯೇ ಅವರನ್ನು ನಮ್ಮ ನಾಯಕ ಎಂದು ಕರೆಯುತ್ತೇನೆ.


ನಾನು ಈ ದೇಶದ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನವಿರುವ, ಹಿಂದಿಯ ಅಡಿಯಾಳಾಗಬೇಕಿಲ್ಲದ ದೇಶವನ್ನು ಕಲ್ಪಿಸಿಕೊಳ್ಳುತ್ತೇನೆ, ಮಣಿಪುರದ ಮಹಿಳೆಯರು ಬತ್ತಲೆ ಮೆರವಣಿಗೆ ಆಗಬೇಕಿಲ್ಲದ, ಅಂತಹ ಕೇವಲ 36 ಸೆಕೆಂಡ್‌ ಅವರ ಬಗ್ಗೆ ಮಾತಾಡುವ ಆಳುವವರಿಲ್ಲದ ದೇಶ ನನ್ನ ಕಲ್ಪನೆಯ ದೇಶ, ಒಳ್ಳೆಯ ಆಡಳಿತವಿರುವ, ದೇಶದ ಬಗ್ಗೆ ಚಿಂತಿಸುವ ನಾಯಕರಿರುವ ದೇಶ ನನ್ನ ಕಲ್ಪನೆಯ ದೇಶ.


ನಾನು ನಮ್ಮ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ, ಮಹಿಳಾ ಪರವಾದ ಯೋಜನೆಗಳನ್ನು ನುಡಿದಂತೆ ಜಾರಿ ಮಾಡಿದ್ದಕ್ಕಾಗಿ, ನಾವು ದೇಶವನ್ನು ಒಡೆಯುವ ಮಾತಾಡಲಿಲ್ಲ, ದ್ವೇಷದ ಭಾಷಣ ಮಾಡಲಿಲ್ಲ.

ಈ ದ್ವೇಷದ ಮಾತನಾಡುವ ಜನರ ಪೂರ್ವಜರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ ದೇಶ ಕಟ್ಟಲು ಶ್ರಮಿಸಲಿಲ್ಲ. ಇವರಿಗೆ ಭಾರತವೇನು ಗೊತ್ತಿದೆ, ಇಂಡಿಯಾ ಏನು ಗೊತ್ತಿದೆ?

ಒಂದು ತಿಂಗಳ ಹಿಂದೆ ರೈಲಿನಲ್ಲಿ ಬೇರೆ ಸಮುದಾಯದ ಮೂವರನ್ನು ಬಂದೂಕಿನಿಂದ ಸುಟ್ಟ ಘಟನೆ ನಡೆಯದಂತಹ ದೇಶವನ್ನು ಕಲ್ಪಿಸಿಕೊಳ್ಳುತ್ತೇನೆ, ಒಂದೇ ಮಗುವನ್ನು ಪ್ರತ್ಯೇಕಿಸಿ ದಬ್ಬಾಳಿಕೆ ನಡೆಸುವ ಶಿಕ್ಷಕರಿಲ್ಲದ ದೇಶವನ್ನು ಕಲ್ಪಿಸಿಕೊಳ್ಳುತ್ತೇನೆ.


ನಾನು ಬಯಸುವಂತಹ ದೇಶ ಕಟ್ಟಲು ಪ್ರಯತ್ನಿಸುತ್ತೇನೆ, ನಾನು ನೀವು ಎಲ್ಲರೂ ಸೇರಿ ನಮ್ಮ ಪೂರ್ವಜರು ಕನಸು ಕಂಡ ದೇಶ ಕಟ್ಟಲು ಪ್ರಯತ್ನಿಸಬೇಕು, ಭರವಸೆಯನ್ನು ಮರಳಿ ತರಬೇಕಿದೆ. ನಮ್ಮ ಹಿಂದಿನವರು ಕಟ್ಟಲು ಬಯಸಿದ್ದ ದೇಶವನ್ನು ನಾವು ಕಟ್ಟಬೇಕಿದೆ. ನಾವು ಹಲವು ಧರ್ಮಗಳನ್ನು ಪಾಲಿಸುತ್ತಿರಬಹುದು, ಆದರೆ ಅದಕ್ಕಿಂತ ಪವಿತ್ರವಾದದ್ದು ಸಂವಿಧಾನ, ಯಾವುದೇ ಭೇಧಭಾವವಿಲ್ಲದೆ, ರಕ್ಷಣೇಯನ್ನೂ ಘನತೆಯನ್ನೂ ಸ್ವಾತಂತ್ರ್ಯವನ್ನೂ ಓಟು ಮಾಡುವ ಅಧಿಕಾರವನ್ನೂ ಖಾತ್ರಿಪಡಿಸುವ ಏಕೈಕ ಗ್ರಂಥ ಅದು ಸಂವಿಧಾನ. ಅಂತಹ ಹಕ್ಕುಗಳ ರಕ್ಷಣೆಗಾಗಿ ನಾವು ಹೋರಾಟ ಮಾಡೋಣ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page