ಬೆಂಗಳೂರಿನ 22 ವರ್ಷದ ತೇಜಸ್ ನಾಯರ್ ಹತ್ಯೆಯು ವಿಧಾನಸೌಧದ ಪಡಸಾಲೆಯಲ್ಲಿ ಚರ್ಚೆಗಳನ್ನು ಹುಟ್ಟು ಹಾಕಿದ್ದು, ಇದು ಚೀನಾ ಲೋನ್ ಅಪ್ಲಿಕೇಷನ್ಗಳನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದೆ.
ಚೀನಿ ಲೋನ್ ಅಪ್ಲಿಕೇಷನ್ ಸಂತ್ರಸ್ಥರು ದೂರು ನೀಡಿದಲ್ಲಿ ಕಿರುಕುಳದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಾಲಹಳ್ಳಿ ಸಮೀಪದ ಎಚ್ ಎಂಟಿ ಲೇಔಟ್ ನಿವಾಸಿ ತೇಜಸ್ ನಾಯರ್ (22) ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ನಂತರ, ಲೋನ್ ಅಪ್ಲಿಕೇಶನ್ಸ್ ಕುರಿತು ಜಾಗರೂಕರಾಗಿರುವಂತೆ ಪೊಲೀಸರು ಜನರಿಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಎಲ್ಲಾ ಚೀನಾ ಲೋನ್ ಅಪ್ಲಿಕೇಷನ್ಗಳನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಆದರೆ ಯಾವುದೇ ಕ್ರಮವನ್ನು ಇದುವರೆಗೆ ಕೈಗೊಂಡಿಲ್ಲ. ಈ ಕುರಿತು ಮಾಧ್ಯಮ ಸಂಸ್ಥೆಯೊಂದೆ ಗೃಹ ಸಚಿವ ಗಿ ಪರಮೇಶ್ವರ್ ಅವರನ್ನು ಪ್ರಶ್ನಿಸಿದಾಗ ಅವರು, “ಜನರಿಗೆ ಈ ರೀತಿ ಲೋನ್ ನೀಡುವ ಅಪ್ಲಿಕೇಷನ್ ನಿರ್ವಾಹಕರ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ. ಇದು ದುರದೃಷ್ಟಕರ ಘಟನೆಯಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ಮತ್ತು ಈ ರೀತಿಯ ಅಪ್ಲಿಕೇಷನ್ನುಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿಷೇಧಿಸಲಿದ್ದೇನೆ” ಎಂದು ಹೇಳಿದ್ದಾರೆ.
ಈ ಕುರಿತು ಸಾರ್ವಜನಿಕರು ಧೈರ್ಯ ಕಳೆದುಕೊಳ್ಳದೆ ನಿರ್ಭೀತಿಯಿಂದ ದೂರು ನೀಡುವಂತೆ ನಗರ ಅಪರಾಧ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಮಾತನಾಡಿ, “ಸುಲಭ ಸಾಲ ಮತ್ತು ವಸೂಲಾತಿ ಹೆಸರಿನಲ್ಲಿ ಹಣದ ಅಗತ್ಯವಿರುವವರಿಗೆ ಕಿರುಕುಳ ನೀಡುತ್ತಿರುವ ಲೋನ್ ಆ್ಯಪ್ ಗಳ ವಿರುದ್ಧ ವ್ಯಾಪಕ ದೂರುಗಳು ಬಂದಿವೆ. ಸಾಲಗಾರರ ಮೊಬೈಲ್ ಸಂಖ್ಯೆ, ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳ ಆಧಾರದ ಮೇಲೆ ಅವರ ವೈಯಕ್ತಿಕ ಮಾಹಿತಿ ಮತ್ತು ಫೋಟೋಗಳನ್ನು ಕದಿಯುವ, ಅಶ್ಲೀಲ ರೂಪಗಳಲ್ಲಿ ತಿರುಚುವ ಮತ್ತು ಬ್ಲ್ಯಾಕ್ಮೇಲ್ ಮಾಡುವ ನೆಟ್ವರ್ಕ್ ಬೆಂಗಳೂರಿನಲ್ಲಿ ಸಕ್ರಿಯವಾಗಿದೆ” ಎಂದರು
ಸಾಲ ಮಂಜೂರು ಮಾಡುವಾಗ, ಸಾಲ ನೀಡುವ ಕಂಪನಿಗಳು ಗ್ರಾಹಕರಿಗೆ ತಿಳಿಯದದಂತೆ ಅವರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿವೆ ಎಂದು ಸಿಸಿಬಿ ಅಧಿಕಾರಿಗಳು ಗಮನಿಸಿದ್ದಾರೆ ಮತ್ತು ಈ ಕುರಿತು ಜನರಿಗೆ ಎಚ್ಚರಿಸಿದ್ದಾರೆ. ಸಾಲವನ್ನು ಮರುಪಾವತಿಸಲು ವಿಫಲವಾದರೆ ಗ್ರಾಹಕರಿಗೆ ಕಿರುಕುಳ ನೀಡಲು ಕಂಪನಿಗಳು ಆ ಮಾಹಿತಿಯನ್ನು ಬಳಸುತ್ತಿವೆ.
ಪ್ರತಿದಿನ, ಲೋನ್ ಅಪ್ಲಿಕೇಶನ್ನುಗಳಿಂದ ಸಾಲ ಪಡೆಯುವ ಮೂಲಕ ನೂರಾರು ಜನರು ತೊಂದರೆಗೆ ಸಿಲುಕುತ್ತಿದ್ದಾರೆ. ಸಾಲಗಾರರು ಸಾಲದ ಮೊತ್ತವನ್ನು ಬಡ್ಡಿಯೊಂದಿಗೆ ಪಾವತಿಸಿದ್ದರೂ ಸಹ ಲೋನ್ ಅಪ್ಲಿಕೇಶನ್ ಕಂಪನಿಗಳು ಫೋಟೋಗಳನ್ನು ಮಾರ್ಫಿಂಗ್ ಮಾಡುವ ಮೂಲಕ ಸಾಲಗಾರರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿವೆ. ಮುಗ್ಧ ಸಾಲಗಾರರು ಅವಮಾನದ ಭಯದಿಂದ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ.
ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಮಾತನಾಡಿ, ‘ಈ ಲೋನ್ ಆ್ಯಪ್ ಗಳು ವಿಷವರ್ತುಲ ಇದ್ದಂತೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು. ಜನರು ಈ ಅಪ್ಲಿಕೇಶನ್ನುಗಳಿಗೆ ಬಲಿಯಾಗಬಾರದು. ಅನುಕೂಲಕರ ಮರುಪಾವತಿ ಆಯ್ಕೆಯೊಂದಿಗೆ ಸಣ್ಣ ಸಾಲದ ಮೊತ್ತವನ್ನು ನೀಡುವ ಮೂಲಕ ಅಪ್ಲಿಕೇಶನ್ ಗಳು ಜನರನ್ನು ಆಕರ್ಷಿಸುತ್ತಿವೆ. ಅಲ್ಲದೆ, ಯಾವುದೇ ದಾಖಲೆಗಳಿಲ್ಲದೆ ಸುಲಭವಾಗಿ ಸಾಲ ನೀಡುವುದರಿಂದ ಜನರು ಈ ಅಪ್ಲಿಕೇಶನ್ನುಗಳ ಬಲೆಗೆ ಬೀಳುತ್ತಾರೆ. ನಾವು ಈ ಹಿಂದೆಯೂ ನಗರದಲ್ಲಿ ಇಂತಹ ಅಪ್ಲಿಕೇಶನ್ನುಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಆದಾಗ್ಯೂ, ಹೊಸ ಹೆಸರಿನ ಅಪ್ಲಿಕೇಶನ್ನುಗಳು ಬರುತ್ತಲೇ ಇವೆ.” ಎಂದು ಹೇಳಿದರು.
ಕರ್ನಾಟಕ ಸರ್ಕಾರದಿಂದ 350 ಆ್ಯಪ್ ಬ್ಯಾನ್
ಜನರಿಗೆ ಸಾಲ ನೀಡಲು ಲೋನ್ ಅಪ್ಲಿಕೇಶನ್ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (ಆರ್ ಬಿಐ) ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಪ್ಲೇ ಸ್ಟೋರ್ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಗೂಗಲ್ 2022ರಲ್ಲಿ 3,500 ಕ್ಕೂ ಹೆಚ್ಚು ಲೋನ್ ಅಪ್ಲಿಕೇಶನ್ನುಗಳ ವಿರುದ್ಧ ಕ್ರಮ ಕೈಗೊಂಡಿತ್ತು. ದೇಶದಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ 350ಕ್ಕೂ ಹೆಚ್ಚು ಲೋನ್ ಅಪ್ಲಿಕೇಶನ್ನುಗಳನ್ನು ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಮಾಹಿತಿ ತಂತ್ರಜ್ಞಾನದ ಅಡಿಯಲ್ಲಿ ಗೂಗಲ್ ಪ್ಲೇ ಸ್ಟೋರಿನಿಂದ 350 ಕ್ಕೂ ಹೆಚ್ಚು ಸಾಲ ಅರ್ಜಿಗಳನ್ನು ನಿಷೇಧಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಲೋನ್ ಅಪ್ಲಿಕೇಶನ್ನುಗಳಿಗೆ ಹೋಲಿಸಿದರೆ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಬ್ಯಾಂಕುಗಳು ಮತ್ತು ಇತರ ಆಯ್ಕೆಗಳಿವೆ. ಅಂತಹ ಲೋನ್ ಅಪ್ಲಿಕೇಶನ್ನುಗಳಿಂದ ಸಾಲ ಪಡೆದವರು ಮತ್ತು ಕಿರುಕುಳವನ್ನು ಎದುರಿಸುತ್ತಿರುವವರು ಧೈರ್ಯದಿಂದ ಮುಂದೆ ಬಂದು ಪೊಲೀಸರಿಗೆ ದೂರು ನೀಡಬೇಕು. ಸಾಲ ವಸೂಲಾತಿ ನೆಪದಲ್ಲಿ ಗ್ರಾಹಕರಿಗೆ ಕಿರುಕುಳ ನೀಡುವ ಲೋನ್ ಆ್ಯಪ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ಎಚ್ಚರಿಸಿದೆ.