Wednesday, June 11, 2025

ಸತ್ಯ | ನ್ಯಾಯ |ಧರ್ಮ

ಸರ್ಕಾರ ಏನಾದರೂ ಮಾಡಿ ನನ್ನನ್ನು ಒಳಗೆ ತಳ್ಳಲು ನೋಡುತ್ತಿದೆ: ಚಕ್ರವರ್ತಿ ಸೂಲಿಬೆಲೆ

ಶಿವಮೊಗ್ಗ: ಕೋಮು ಹಿಂಸೆ ತಡೆ ಪಡೆ ರಚನೆಯಾಗುತ್ತಿದ್ದ ಹಾಗೆಯೇ ಸದಾ ದ್ವೇಷ ಭಾಷಣಗಳಿಂದ ಸುದ್ದಿಯಲ್ಲಿರುವ ಚಕ್ರವರ್ತಿ ಸೂಲಿಬೆಲೆ ಅಲರ್ಟ್‌ ಆಗಿದ್ದಾರೆ. ಅವರು ಈ ಕುರಿತು ಹೇಳಿಕೆ ನೀಡಿದ್ದು ಸರ್ಕಾರ ನನ್ನನ್ನು ಹೇಗಾದರೂ ಮಾಡಿ ಒಳಗೆ ಹಾಕಲು ನೋಡುತ್ತಿದೆ ಎಂದಿದ್ದಾರೆ,

ಬುಧವಾರ(ಜೂ11) ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ”ಕಾಂಗ್ರೆಸ್ ನನ್ನನ್ನ ಹೇಟ್ ಮಾಡುತ್ತದೆ ಎಂದು ಹೇಳಿದ್ದಾರೆ. ”ಹಿಂದೂ ಮುಖಂಡರು, ಕಾರ್ಯಕರ್ತರನ್ನ ರಾಜ್ಯ ಕಾಂಗ್ರೆಸ್ ಸರಕಾರ ಟಾರ್ಗೆಟ್ ಮಾಡುತ್ತಿದೆ” ಎಂದು ಚಕ್ರವರ್ತಿ ಸೂಲಿಬೆಲೆ ಗಂಭೀರ ಆರೋಪ ಮಾಡಿದ್ದಾರೆ.

ನನ್ನನ್ನು ಕಂಡರೆ ಅವರಿಗೆ ಕೋಪ. ಐಜಿ- ಡಿಐಜಿಗಳು‌ ಎಲ್ಲಾ ಪೊಲೀಸ್ ಠಾಣೆಗೆ ಮಾಹಿತಿ ಕೇಳಿದ್ದಾರೆ.2022 ರಿಂದ 2025 ರ ಜೂನ್ ವರೆಗೆ ಯಾವ್ಯಾವ ಕೇಸ್ ಗಳು ಇವೆ ಎಂದು ಮಾಹಿತಿ ಕೇಳಿದ್ದಾರೆ.ಹೇಗಾದರೂ ಮಾಡಿ, ಒಳಗೆ ಹಾಕಿ ಧ್ವನಿ ಅಡಗಿಸಲು ನೋಡುತ್ತಿದ್ದಾರೆ ಎಂದರು.

”ನಾನು ಇದಕ್ಕೆಲ್ಲಾ ಹೆದರುವುದಿಲ್ಲ, ಐ ಡೋಂಟ್ ಕೇರ್, ಐ ಡೋಂಟ್ ಮೈಂಡ್ . ನೀವು ನನ್ನ ಒಳಗೆ ಹಾಕಿದರೆ ತುಂಬಾ ದಿನದಿಂದ ಓದದೇ ಇರುವ 15-20 ಪುಸ್ತಕ ಇದ್ದಾವೆ. ಅದೆಲ್ಲವನ್ನೂ ಓದಿ ಮುಗಿಸಿ ಹೊರಗೆ ಬರುತ್ತೇನೆ” ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page