Saturday, June 21, 2025

ಸತ್ಯ | ನ್ಯಾಯ |ಧರ್ಮ

ಹಣದುಬ್ಬರ ಮತ್ತು ನಿರುದ್ಯೋಗವನ್ನು ವಿರೋಧಿಸಿ ಗುಜರಾತ್‌ ಬಂದ್‌ಗೆ ಕರೆ: ಕಾಂಗ್ರೆಸ್‌

ಗುಜರಾತ್ : ಹಣದುಬ್ಬರ ಮತ್ತು ನಿರುದ್ಯೋಗವನ್ನು ವಿರೋಧಿಸಿ ಜನರು ಗುಜರಾತ್‌ ಬಂದ್ ಕರೆಗೆ ಸೇರಬೇಕೆಂದು ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಜಗದೀಶ್ ಠಾಕೋರ್ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಖಾದ್ಯ ತೈಲ ಬೆಲೆ 3,000 ರೂ., ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ 1,060 ರೂ., ಪೆಟ್ರೋಲ್ ಬೆಲೆ ಲೀಟರ್‌ಗೆ 95 ರೂ. ಮತ್ತು ಸಿಎನ್‌ಜಿ ಕಿಲೋಗೆ 84 ರೂ. ಹೀಗಾಗಿ ಎಲ್ಲಾ ವಸ್ತುಗಳು ನಾಗರಿಕರ ಜೀವನದ ಮೇಲೆ ಕ್ಯಾಸ್ಕೇಡಿಂಗ್ ಪರಿಣಾಮವನ್ನು ಬೀರುತ್ತವೆ" ಎಂದು ಠಾಕೋರ್ ಹೇಳಿದರು.

ಬಂದ್ ಕರೆಯಿಂದ ತುರ್ತು ಸೇವೆಗಳಿಗೆ ತೊಂದರೆಯಾಗದಂತೆ ಎಲ್ಲಾ ಜಿಲ್ಲಾ ಮತ್ತು ನಗರ ಕಾಂಗ್ರೆಸ್ ಸಮಿತಿಗಳು ಹಾಗೂ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದು ಜಗದೀಶ್ ಸೂಚನೆ ನೀಡಿದರು.
ಭರೂಚ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವ ದೃಶ್ಯ
ಈ ಹಿನ್ನಲೆಯಲ್ಲಿ, ಭರೂಚ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಬೆಳಗ್ಗೆ 8 ರಿಂದ ಮಧ್ಯಾಹ್ನದವರೆಗೆ ವ್ಯಾಪಾರಿಗಳು ಮತ್ತು ಇತರ ವ್ಯಾಪಾರಸ್ಥರಿಗೆ ಅಂಗಡಿಗಳನ್ನು ಮುಚ್ಚಲು ಕಾಂಗ್ರೆಸ್‌ ಮನವಿ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page