Monday, June 23, 2025

ಸತ್ಯ | ನ್ಯಾಯ |ಧರ್ಮ

ಹಾಸನ : ಮಲಗಿದ್ದಲ್ಲೇ ಹಾವು ಕಚ್ಚಿ ಮೃತಪಟ್ಟ ವ್ಯಕ್ತಿ

ಹಾಸನ ಪಟ್ಟಣದ ಹೊರ ವಲಯದ ಬೂವನಹಳ್ಖಿಯಲ್ಲಿ ಮಲಗಿದ್ದವೇಳೆಯಲ್ಲೇ ಹಾವು ಕಚ್ಚಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೂಲತಃ ಚನ್ನರಾಯಪಟ್ಟಣ ತಾಲ್ಲೂಕು ಮೂಲದ ಗುರು(40) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ ಆಗಿದ್ದಾರೆ.

ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದು ಮೊದಲ ಮಹಡಿಯ ಕೊಠಡಿಯಲ್ಲಿ ಮಾಮೂಲಿನಂತೆ ಗುರು ಮಲಗಿದ್ದಾರೆ. ಈ ವೇಳೆ ನಾಗರ ಹಾವೊಂದು ಅವರು ಮಲಗಿದ್ದ ಸ್ಥಳಕ್ಕೆ ಬಂದು ಕಚ್ಚಿ ಹೋಗಿದೆ. ಕಚ್ಚಿದ ಅರಿವೇ ಇಲ್ಲದೇ ಮಲಗಿದ್ದ ಗುರು ಅವರು ಕಚ್ಚಿದ ಕೆಲವೇ ಗಂಟೆಗಳಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಳಿಗ್ಗೆ 8 ಗಂಟೆ ಆದರೂ ತನ್ನ ಪತಿ ಕೊಠಡಿ ಬಾಗಿಲು ತೆರೆಯದಿದ್ದರಿಂದ ಅನುಮಾನಗೊಂಡ ಪತ್ನಿ ಅನುಮಾನದಿಂದ ಕೊಠಡಿ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಕಾಲಿಗೆ ಕಚ್ಚಿದ ಹಾವು ಕೊಠಡಿಯಲ್ಲೇ ಅಡಗಿದ್ದ ಹಿನ್ನೆಲೆಯಲ್ಲಿ ನಾಗರ ಹಾವು ಕಚ್ಚಿಧ್ದು ಖಚಿತವಾಗದೆ.

ಕೊಠಡಿಯೊಳಗೆ ಇದ್ದ ಹಾವನ್ನು ಉರಗ ತಜ್ಞರು ರಕ್ಷಿಸಿದ್ದಾರೆ. ಮನೆಯ ಯಜಮಾನನ ಹಠಾತ್ ಸಾವಿನಿಂದ ಇಡೀ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಹಾಸನ ಹೊರವಲಯದ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page