Thursday, June 19, 2025

ಸತ್ಯ | ನ್ಯಾಯ |ಧರ್ಮ

ಹತ್ಯೆಗೆ ಸಂಬಂಧಪಟ್ಟವರು ಯಾರೇ ಇರಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು: ಅಲೋಕ್ ಕುಮಾರ್

ಮಂಗಳೂರು: ಪ್ರವೀಣ್‌ ನೆಟ್ಟಾರು ಹತ್ಯೆಗೆ ಪ್ರತ್ಯಕ್ಷ ಅಥವಾ ಪರೋಕ್ಷ ಸಹಕಾರ ಮಾಡಿದ ಯಾರೇ ಇರಲಿ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹತ್ಯೆಗೆ ಸಂಬಂಧಿಸಿದಂತೆ ಪೋಲಿಸ್‌ ಅಧಿಕಾರಿಗಳು ಸಭೆ ನಡೆಸಿದ್ದು, ಕೆಲವು ಅರೋಪಿಗಳಿಗೆ ಪಿಎಫ್ಐ ಸಂಪರ್ಕ ಇದೆ ಎಂದು ಮಾಹಿತಿ ಬಂದಿರುವುದರಿಂದ ತನಿಖೆ ಮಾಡುತ್ತಿದ್ದೆವೆ, ಇದರ ಬಗ್ಗೆ ಸಂಪೂರ್ಣ ದಾಖಲೆ ದೊರಕಿದ ಕೂಡಲೆ ಮಾಹಿತಿಯನ್ನು ನೀಡುತ್ತೇವೆ ಎಂದು ತಿಳಿಸಿದರು.

ಈ ಹತ್ಯೆಗೆ ಕೇರಳದ ನಂಟು ಇದೆ ಎನ್ನುವ ವಿಚಾರವಾಗಿ ತನಿಖೆ ನಡೆಯುತ್ತಿರುವಾಗ, ಬಂಧನವಾಗಿರುವ 7 ಜನರು ಕೂಡ ಸ್ಥಳಿಯರೇ ಆಗಿದ್ದಾರೆ, ಅವರಿಗೆ ಯಾರು ನಿರ್ದೇಶನ ಕೊಟ್ಟಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page