ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಹೊರಟಿದ್ದ ಹೆಲಿಕಾಪ್ಟರ್ ಒಂದು ಹವಾಮಾನದ ಅಡಚಣೆಯಿಂದಾಗಿ ಅಪಘಾತಕ್ಕೀಡಾಗಿ ಪತನವಾಗಿದೆ. 2 ವರ್ಷದ ಮಗು ಸೇರಿದಂತೆ ಹೆಲಿಕಾಪ್ಟರ್ ಒಳಗಿದ್ದ 7 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸುದ್ದಿ ಸಂಸ್ಥೆ IANS ಪ್ರಕಾರ ಕೇದಾರನಾಥ ದಾಮದಿಂದ ಗುಪ್ತ್ ಕಾಶಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಪೈಲಟ್ ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ.
ಆರ್ಯನ್ ಕಂಪೆನಿ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್ ಬೆಳಿಗ್ಗೆ 5 ಗಂಟೆಗೆ 7 ಜನರನ್ನು ಒಳಗೊಂಡಂತೆ ಗುಪ್ತ್ ಕಾಶಿಗೆ ಹೊರಟಿತ್ತು. ಹವಾಮಾನ ವೈಪರಿತ್ಯದ ಪರಿಣಾಮ ಪತನಗೊಂಡ ಬಗ್ಗೆ ಸಧ್ಯದ ಮಾಹಿತಿ ಲಭ್ಯವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.
ಅಪಘಾತದ ಸಮೀಪ ಸ್ಥಳ ಗೌರಿಕುಂಡ್ ನಲ್ಲಿ ಹುಲ್ಲು ಕತ್ತರಿಸುತ್ತಿದ್ದ ನೇಪಾಳಿ ಮೂಲದ ಮಹಿಳಾ ಪ್ರತ್ಯಕ್ಷದರ್ಶಿಗಳ ಪ್ರಕಾರ ಗೌರಿ ಮೈ ಕಾರ್ಕ್ ನ ಅರಣ್ಯ ಪ್ರದೇಶದಲ್ಲಿ ಕಾಪ್ಟರ್ ಪತನಗೊಂಡ ಬಗ್ಗೆ ಮಾಹಿತಿ ಸಿಕ್ಕಿದೆ.
ಇದೀಗಷ್ಟೇ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಬಲಿಯಾದವರಲ್ಲಿ ಬಿಕೆಟಿಸಿ ಉದ್ಯೋಗಿ ವಿಕ್ರಂ ಸಿಂಗ್ ಕೂಡ ಇದ್ದರು ಎಂದು ತಿಳಿದು ಬಂದಿದೆ.