Friday, June 20, 2025

ಸತ್ಯ | ನ್ಯಾಯ |ಧರ್ಮ

ಹಿಂದಿ ಇವರಪ್ಪನ ಭಾಷೆಯಲ್ಲ ಬಿಡಿ: ಪ್ರಹ್ಲಾದ್‌ ಜೋಶಿ ವಿರುದ್ದ ಮೋಹನ್‌ ದಾಸರಿ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಕನ್ನಡ ಭಾಷೆ ನಂತರದ ಸ್ಥಾನವನ್ನು ಇಂಗ್ಲೀಷ್‌ ಬದಲು ಹಿಂದಿಗೆ ನೀಡಿ ಎಂಬ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿಯವರ ಹೇಳಿಕೆ ಕುರಿತು ಆಮ್‌ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೊಹನ್‌ ದಾಸರಿ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಮೊದಲ ಆದ್ಯತೆ ಕನ್ನಡಕ್ಕೆ ನೀಡಬೇಕು. ನಂತರದ ಸ್ಥಾನವನ್ನು ಇಂಗ್ಲೀಷ್‌ಗೆ ನೀಡುವ ಬದಲು ಹಿಂದಿಗೆ ನೀಡಬೇಕು. ಹಿಂದಿ ಫಲಕಗಳಿಗೆ ಮಸಿ ಬಳಿಯುತ್ತಾರೆ,ಆದರೆ ಇಂಗ್ಲೀಷ್‌ ಭಾಷೆಯನ್ನು ಮಾತ್ರ ಸರಳವಾಗಿ ಸ್ವೀಕರಿಸುತ್ತಾರೆ. ಇಂಗ್ಲೀಷ್‌ ನಮ್ಮ ಅಪ್ಪನ ಭಾಷೇನಾ? ಎಂದು ಜೋಶಿಯವರು ಪ್ರಶ್ನಿಸಿದ್ದರು.

ಇದಕ್ಕೆ ಹಲವರು ಟೀಕೆ ಮಾಡಿದ್ದು, ಜೋಶಿಯವರೆ, ನಿಮ್ಮ 3 ಜನ ಹೆಣ್ಣು ಮಕ್ಕಳಲ್ಲಿ ಒಬ್ಬರು ವಿದೇಶದಲ್ಲಿ ಪದವಿ, ಇನಿಬ್ಬರು ಪ್ರತಿಷ್ಠಿತ ಕ್ರಶ್ಚಿಯನ್‌ ವಿದ್ಯಾಕೇಂದ್ರದಲ್ಲಿ CBSE ಇಂಗ್ಲೀಷ್‌ ಮಾದ್ಯಮದಲ್ಲಿ ವಿದ್ಯಾಭ್ಯಾಸ ಪಡೆದವರು, ಇವರಲ್ಲಿ ಒಬ್ಬರು ಸಹ ಕನ್ನಡ ಮತ್ತು ನಿಮ್ಮ ಹಿಂದಿ ಭಾಷೆಯನ್ನು 2ನೇ ಭಾಷೆಯಾಗಿ ಕಲಿತಿಲ್ಲ. ಮೊದಲು ಕಂಡವರ ಮಕ್ಕಳನ್ನು ಹಿಂದಿ ಬಾವಿಗೆ ತಳ್ಳೋ ದುರ್ಬುದ್ದಿ ಬಿಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ಪೋಸ್ಟ್‌ ಮಾಡುವ ಮೂಲಕ ಕಿಡಿಕಾರಿದ್ದರು.

ಈ ಕುರಿತು ಮೋಹನ್‌ ದಾಸರಿ ಟ್ವೀಟ್‌ ಮಾಡಿದ್ದು, ಹಿಂದಿಯಂತೂ ಇವರಪ್ಪರ ಭಾಷೆಯಲ್ಲ ಅಂತ ಗೊತ್ತಯಿತು ಬಿಡಿ. ತಮ್ಮ ತಮ್ಮ ಮಕ್ಕಳನ್ನು ಮಾತ್ರ ವಿದೇಶಗಳಲ್ಲಿ, CBSE ಮತ್ತಿತರ ಇಂಗ್ಲೀಷ್ ಪಠ್ಯದಲ್ಲಿ ಓದಿಸಿ ಬಡ ಮಕ್ಕಳು ಮಾತ್ರ ಹಿಂದಿ ಹಿಂದಿ ಅಂತ ನಿರುದ್ಯೊಗಿಗಳಾಗಿ ಬದುಕುತ್ತಿರ ಬೇಕಲ್ಲವೇ ಜೋಶಿಗಳೇ.? ಎಂದು ಪ್ರಶ್ನಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page