Thursday, August 15, 2024

ಸತ್ಯ | ನ್ಯಾಯ |ಧರ್ಮ

ಹೊಟ್ಟೆಪಾಡಿಗಾಗಿ ದಾರಿ ತಪ್ಪುತ್ತಿರುವ ಯುವಜನರು

ಅಭಿವೃದ್ಧಿ ಮುಂದಿನ ಪೀಳಿಗೆಯ ಭವಿಷ್ಯದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಆದರೆ ಯುವಕರು ತಮ್ಮ ಜವಾಬ್ದಾರಿಗಳನ್ನು ಮರೆತು ಮಾದಕ ವ್ಯಾಸನಿಗಳಾಗುತ್ತಿದ್ದಾರೆ. ಮದ್ಯದ ಚಟ, ಇಂಟರ್ನೆಟ್ ಚಟ, ಗೇಮಿಂಗ್ ಮುಂತಾದ ಚಟಗಳಿಗೆ ಬಲಿಯಾಗಿ ದುರ್ಬಲರಾಗುತ್ತಿದ್ದರೆ. ಈ ಚಟಗಳು ಯುವಜನತೆಯ ಭವಿಷ್ಯವನ್ನು ಹಾಳು ಮಾಡುತ್ತಿವೆ. ಹಾಗಾದರೆ ಯುವಕರು ಈ ಚಟಗಳಿಗೆ ದಾಸರಾಗಲು ಕಾರಣವೇನು?

ಬದಲಾಗುತ್ತಿರುವ ಜನರ ಜೀವನಶೈಲಿ ಯುವಜನರು ವ್ಯಾಸನಿಗಳಾಗಲು ಕಾರಣವಾಗಿದೆ. ಶಿಕ್ಷಣದ ಕೊರತೆ, ಕಾಡುತ್ತಿರುವ ಏಕಾಂಗಿತನ, ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಸೂಕ್ತ ವ್ಯಕ್ತಿಯ ಕೊರತೆ, ಪೋಷಕರು ಸಹ ತಮ್ಮ ಒತ್ತಡದ ಜೀವನಶೈಲಿಯಿಂದ ತಮ್ಮ ಮಕ್ಕಳ ಸಮಸ್ಯೆಗಳನ್ನು ಕೇಳಲು ಆಲಿಸಲು ಸಮಯದ ಅಭಾವದಿಂದ ಸಾಧ್ಯವಾಗದೆ ಇರುವುದು ಸಹ ಒಂದು ಕಾರಣವಾಗಿದೆ. ಈ ಎಲ್ಲ ಕಾರಣಗಳಿಂದ ಯುವಕರು ಇಂಟರ್ನೆಟ್ , ಟಿ.ವಿ, ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಾ ನಕಾರಾತ್ಮಕ ಅಂಶಗಳಿಗೆ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರೆ. ಇದರಿಂದ ಯುವಕರು ತಮ್ಮ ಜವಾಬ್ದಾರಿಯನ್ನು ಮರೆತು ಹೋಗುತ್ತಿದ್ದಾರೆ.

ಭಾರತೀಯ ಶಿಕ್ಷಣ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಭಾರತವು ಪ್ರತಿ ವರ್ಷ ಸರಿ ಸುಮಾರು 1 ಮಿಲಿಯನ್ ಪದವೀದರರನ್ನು ಉತ್ಪಾದಿಸುತ್ತದೆ. ಎಂದು ಹೇಳುತ್ತದೆ. ಆದರೆ ಅಷ್ಟೇ ಪ್ರಮಾಣದಲ್ಲಿ ಪದವೀಧರರು ಯಾವುದೇ ಸಮಯದಲ್ಲಿ ಅದು ಹೇಗೋ ನಿರುದ್ಯೋಗಿಗಳಾಗಿ ಉಳಿದುಕೊಳ್ಳುತ್ತಾರೆ. ಪ್ರತಿ ವರ್ಷ ಕೋಟ್ಯಾಂತರ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ ಪ್ರಭುತ್ವ ಉದ್ಯೋಗ ಸೃಷ್ಠಿ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ ಯುವಕರು ಅನಿವಾರ್ಯವಾಗಿ ಅನ್ಯಮಾರ್ಗವನ್ನು ಹಿಡಿಯುತ್ತಿದ್ದರೆ. ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಖಿನ್ನತೆಗೆ ಒಳಗಾಗಿ ತಮ್ಮ ಮೇಲೆ ತಾವು ನಿಯಂತ್ರಣವನ್ನು ಕಳೆದು ಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲರಾಗಿದ್ದರೆ. ಅಪರಾಧಗಳನ್ನು ಮಾಡಲು ಮುಂದಾಗಿದ್ದಾರೆ. ಮಾನಸಿಕ, ದೈಹಿಕ ಕಾಯಿಲೆಗಳಿಂದ ಬಳಲುತ್ತಿದ್ದರೆ.

ಭಾರತ ದೇಶದಲ್ಲಿ ಅಕ್ರಮ ವಸ್ತುಗಳ ಪೂರೈಕೆ ಸಾಮಾನ್ಯವಾಗಿದೆ. ಸುಲಭವಾದ ದಾರಿಯಲ್ಲಿ ಹಣ ಗಳಿಸಲು ಯುವಜನರನ್ನು ಬಳಸಿಕೊಳ್ಳುತ್ತಿದ್ದಾರೆ. ಜನಸಂಖ್ಯೆಯ ಅಂಕಿಅಂಶಗಳ ಅಂದಾಜುಗಳನ್ನು ಅನ್ವಯಿಸಿ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಒಂದು ಶತಕೋಟಿಗಿಂತ ಜನಸಂಖ್ಯೆಯನ್ನು ಹೊಂದಿದೆ. ಅದರಲ್ಲಿ 62.5 ಮಿಲಿಯನ್ ಜನರು ಆಲ್ಕೋಹಾಲ್ ಅನ್ನು ಬಳಸುತ್ತಾರೆ. 8.75 ಮಿಲಿಯನ್ ಜನರು ಗಾಂಜಾವನ್ನು ಬಳಸುತ್ತಾರೆ. 2 ಮಿಲಿಯನ್ ಜನರು ನಿದ್ರಾಜನಕಗಳನ್ನು ಅಥವಾ ಸಮೋಹನಗಳನ್ನು ಬಳಸುತ್ತಾರೆ. ಈ ಜನರಲ್ಲಿ 17 ರಿಂದ 26% ರಷ್ಟು ಜನರನ್ನು ಅವಲಂಬಿತ ಬಳಕೆದಾರರೆಂದು ವರ್ಗಿಕರಿಸಬಹುದು.

ನಮ್ಮ ರಾಷ್ಟ್ರದ ಯುವಕರು ಬುದ್ಧಿವಂತರು, ಉತ್ಸಾಹಿಗಳು ಆಗಬೇಕಾದರೆ ನಮಗೂ ಕೆಲವು ಜವಾಬ್ದಾರಿಗಳಿವೆ. ಯುವಕರಿಗೆ ಯುವಜನ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವುದು. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳನ್ನು ತಿಳಿಸಿಕೊಟ್ಟು ಸರಿಯಾದ ಮಾರ್ಗದರ್ಶನವನ್ನು ನೀಡಬೇಕು. ಯುವಕರು ಸದಾ ಕ್ರಿಯಾಶೀಲರಾಗಳು ತಮ್ಮನ್ನು ತಾವು ಕ್ರೀಡೆ, ಸಂಗೀತ, ನಾಟಕ, ನೃತ್ಯ, ಚಿತ್ರಕಲೆಗಳಲ್ಲಿ ತೊಡಗಿಸಿಕೊಳ್ಳಬೇಕು. ಹೆಚ್ಚಿನ ಚಿಕಿತ್ಸೆಗಾಗಿ ವ್ಯಸನ ಮುಕ್ತ ಕೇಂದ್ರಗಳಿಗೆ ಭೇಟಿಮಾಡುವುದು. ಅಲ್ಲಮಪ್ರಭು ಹೇಳಿದಂತೆ ನಿನ್ನ ಅರಿವೇ ನಿನ್ನ ಗುರು. ಬುದ್ದ ದೇವ ಹೇಳಿದಂತೆ ನಮ್ಮ ನಡೆ ನುಡಿಗಳೇ ನಮ್ಮನ್ನು ಆಳುತ್ತವೆ. ವ್ಯಸನ ಮುಕ್ತ ಭಾರತವನ್ನು ಕಟ್ಟಲು ಮುಂದಾಗೋಣ.

- ನಂದಿನಿ ಸಿದ್ದರಾಮ ಕೊಪ್ಪರ

Related Articles

ಇತ್ತೀಚಿನ ಸುದ್ದಿಗಳು

You cannot copy content of this page