Home ದೇಶ ಮಣಿಪುರ: ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಬುಡಕಟ್ಟು ಜನಾಂಗದವರ ಮನೆಗಳು ಆಹುತಿ

ಮಣಿಪುರ: ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಬುಡಕಟ್ಟು ಜನಾಂಗದವರ ಮನೆಗಳು ಆಹುತಿ

0

ಇಂಫಾಲ: ಮಣಿಪುರದಲ್ಲಿ ಕುಕಿ ಮತ್ತು ಮೈಥಿ ಜನಾಂಗಗಳ ನಡುವೆ ಘರ್ಷಣೆ ಮುಂದುವರಿದಿದೆ. ಶಸ್ತ್ರಸಜ್ಜಿತ ವ್ಯಕ್ತಿಗಳು ಮತ್ತೆ ಗಲಭೆಗೆ ಇಳಿದಿದ್ದಾರೆ. ಜಿರಿಬಾಮ್ ಜಿಲ್ಲೆಯ ಜೈರೋನ್ ಹ್ಮಾರ್ ಎಂಬ ಬುಡಕಟ್ಟು ಗ್ರಾಮದ ಮೇಲೆ ಗುರುವಾರ ರಾತ್ರಿ ದಾಳಿ ನಡೆದಿದೆ.

ಆರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಮನೆಯಲ್ಲಿದ್ದ ಮೂರು ಮಕ್ಕಳ ತಾಯಿ ಬೆಂಕಿಗೆ ಆಹುತಿಯಾಗಿದ್ದಾರೆ. ಅವರು ತನ್ನ ಗಂಡ ಮತ್ತು ಮಕ್ಕಳ ಮುಂದೆಯೇ ಪ್ರಾಣ ಬಿಟ್ಟರು. ಅನೇಕ ಬುಡಕಟ್ಟು ಜನರು ತಮ್ಮ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ತಮ್ಮ ಪ್ರಾಣ ಉಳಿಸಿಕೊಳ್ಳಲು ಬೆಂಕಿ ಹೊತ್ತಿಕೊಂಡ ಮನೆಗಳಿಂದ ಓಡಿ ಹೊರ ಬಂದರು. ಮಾಹಿತಿ ತಿಳಿದ ತಕ್ಷಣ ಭದ್ರತಾ ಪಡೆಗಳು ಅಲ್ಲಿಗೆ ತಲುಪಿದವು.

ಈ ನಡುವೆ, ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಶಾಂತಿಯುತ ಪರಿಹಾರಕ್ಕಾಗಿ ಮೈತಿ ಮತ್ತು ಕುಕಿ ಸಮುದಾಯದ ಶಾಸಕರು ದೆಹಲಿಯಲ್ಲಿ ಮಾತುಕತೆ ನಡೆಸಿದರು. ಆದರೆ, ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಸೆಪ್ಟೆಂಬರ್ 7ರಂದು ಜಿರಿಬಾಮ್ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆರು ಜನರು ಸಾವನ್ನಪ್ಪಿದ್ದರು. ಕಳೆದ ವರ್ಷದಿಂದ ಮಣಿಪುರದಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

You cannot copy content of this page

Exit mobile version