Saturday, June 21, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿಗೂ ನನಗೂ ಸಂಬಂಧವಿಲ್ಲ – ಸುಮಲತಾ ಸಿಡಿಸಿದ ಬಾಂಬ್

ನಾನು ಬಿಜೆಪಿ ಸಂಸದೆ ಅಲ್ಲ. ನಾನೊಬ್ಬ ಸ್ವತಂತ್ರ ಅಭ್ಯರ್ಥಿ. ನನ್ನ ಕ್ಷೇತ್ರದ ಅಗತ್ಯ ಕೆಲಸಗಳ ಸಲುವಾಗಿ ಬಿಜೆಪಿಗೆ ಬೆಂಬಲ ನೀಡಿದ್ದೇನೆ. ಹಾಗಾಗಿ ಅವರ ನಿರ್ಧಾರಗಳಿಗೂ ನನಗೂ ಸಂಬಂಧ ಇಲ್ಲ ಎಂದು ಬಿಜೆಪಿ ಬೆಂಬಲಿತ ಮಂಡ್ಯ ಕ್ಷೇತ್ರದ ಸ್ವತಂತ್ರ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ಕಾವೇರಿ ನೀರಿನ, ಮಂಡ್ಯದ ರೈತರ ಸಮಸ್ಯೆಗಳಲ್ಲಿ ರಾಜಕೀಯವನ್ನು ತರಲು ಹೋಗುವುದಿಲ್ಲ. ಇದರಲ್ಲಿ ರಾಜಕೀಯ ಮಾತನಾಡಲು ಇಷ್ಟ ಪಡುವುದಿಲ್ಲ. ಕಾವೇರಿ ಬೆಲ್ಟ್ ನ ರೈತರ ಪರ ಇಡೀ ಕರ್ನಾಟಕ ನಿಲ್ಲಬೇಕು. ಕಾವೇರಿ ವಿಚಾರದಲ್ಲಿ ನಮ್ಮ ವಿರುದ್ಧವೇ ಹೋಗುತ್ತಿದೆ. ಸುಪ್ರೀಂ ಕೋರ್ಟ್ ನಲ್ಲಿ ತೀರ್ಮಾನಗಳು ತಮಿಳುನಾಡು ಪರ ಬಂದಿವೆ. ಇಲ್ಲಿ ನಮ್ಮ ತಪ್ಪುಗಳೂ ಇವೆ ಎಂದು ಸುಮಲತಾ ಅಂಬರೀಶ್ ಪರೋಕ್ಷವಾಗಿ ಬಿಜೆಪಿ ಸರ್ಕಾರದ ನಿಲುವಿನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಹೀಗಾಗಿ ನಮ್ಮನ್ನು ಪ್ರತಿನಿಧಿಸುವವರು ಸರಿಯಾಗಿ ಇದ್ದಾರೋ ಎಂಬುದು ಒಂದು ಮುಖ್ಯವಾದ ಪ್ರಶ್ನೆ. ಸಧ್ಯಕ್ಕೆ ನನಗೆ ಮಂಡ್ಯ ಜನತೆ, ಕಾವೇರಿ ನೀರಿನ ವಿಚಾರದಲ್ಲಿ ಸು.ಕೋರ್ಟ್ ನ ನಿಲುವಿನ ಬಗ್ಗೆ ಆಕ್ಷೇಪವಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ತೀರದ ಮಂಡ್ಯ ಜನತೆಯ ಪರವಾಗಿ ಇಡೀ ರಾಜ್ಯ ನಿಲ್ಲಬೇಕು ಎಂದು ಮನವಿ ಮಾಡಿದರು.

ಕೃಷಿ ಸಚಿವರ ವಿರುದ್ಧ ಇರುವ ಆರೋಪಗಳ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಇದಕ್ಕೂ ನನಗೂ ಸಂಬಂಧ ಇಲ್ಲ. ಆರೋಪ ಇರುವವರು ಮತ್ತು ಮಾಡಿದವರು ಮಾತನಾಡುತ್ತಿದ್ದಾರೆ. ನಾನು ಬಿಜೆಪಿ ಸದಸ್ಯೆ ಅಲ್ಲ. ನಾನು ಸ್ವತಂತ್ರ ಅಭ್ಯರ್ಥಿ. ಬಿಜೆಪಿಗೆ ಬೆಂಬಲ ನೀಡಿದ್ದೇನೆ. ಆದರೆ ಅವರ ನಿರ್ಧಾರಗಳಿಗೂ ನನಗೂ ಸಂಬಂಧ ಇಲ್ಲ ಎಂದು ಸುಮಲತಾ ಅಂಬರೀಶ್ ನಾನೊಬ್ಬ ಸ್ವತಂತ್ರ ಸಂಸದೆ ಎಂಬುದನ್ನು ಪುನರುಚ್ಛರಿಸಿದ್ದಾರೆ.

ಅಷ್ಟೆ ಅಲ್ಲದೆ ‘ಹಾಗೆಂದು ಬಿಜೆಪಿಯ ನಿರ್ಧಾರಗಳಿಗೆ ಬೆಂಬಲ ಇಲ್ಲ ಅಂತ ಅಲ್ಲ. ನನ್ನ ಸ್ವಂತ ಅಭಿಪ್ರಾಯಗಳಿಗೂ ಜಾಗ ಇದೆ. ಬಿಜೆಪಿ ನನಗೆ ಅವರ ನಿರ್ಧಾರಗಳನ್ನು ತಿಳಿಸಿ ಮನದಟ್ಟು ಮಾಡಿದರೆ ನಾನು ಬೆಂಬಲಿಸುತ್ತೇನೆ. ಆದರೆ ಪಕ್ಷ ಸೇರಲು ಬಿಜೆಪಿಯಿಂದ ಯಾವುದೇ ಮಾತು ಬಂದಿಲ್ಲ’ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page