Thursday, June 19, 2025

ಸತ್ಯ | ನ್ಯಾಯ |ಧರ್ಮ

ಐಬಿ ಅಧಿಕಾರಿ ಕುಲಕರ್ಣಿ ಕೊಲೆ ಪ್ರಕರಣ : ಹತ್ಯೆ ರಹಸ್ಯವನ್ನು ಬಯಲಿಗೆಳೆದ ಪೊಲೀಸರು

ಮೈಸೂರು: ನವೆಂಬರ್‌ 4ರಂದು ನಡೆದ ಕೇಂದ್ರದ ನಿವೃತ್ತ ಗುಪ್ತಚರ ಇಲಾಖೆಯ ಅಧಿಕಾರಿ ಕುಲಕರ್ಣಿಯವರ ಕೊಲೆ ರಹಸ್ಯ ಭೇದಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇಂದ್ರದ ನಿವೃತ್ತ ಗುಪ್ತಚರ ಇಲಾಖೆಯ ಅಧಿಕಾರಿಯು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ವಿದೇಶದಿಂದ ಬಂದ ಅವರ ಅಳಿಯ ಅಪಘಾತದ ರೀತಿಯಲ್ಲಿ ಕೊಲೆ ಮಾಡಿದ್ದಾರೆಂದು ದೂರು ದಾಖಲಿಸಿದ್ದರು.

ದೂರಿನಲ್ಲಿ ʼಎನ್‌. ಆರ್‌ ಕುಲಕರ್ಣಿಯವರು ವಾಸವಿರುವ ಟಿ.ಕೆ ಲೇಔಟ್‌ನ ಮನೆಯ ದಕ್ಷಿಣ ಭಾಗದಲ್ಲಿ ಮಾದಪ್ಪ ಎಂಬುವವರು ಮನೆ ನಿರ್ಮಾಣ ಮಾಡುತ್ತಿದ್ದು, ಅದನ್ನು ಕಾನೂನು ಬಾಹಿರವಾಗಿ ಕಟ್ಟುತ್ತಿದ್ದಾರೆ ಎಂದು ನಗರ ಪಾಲಿಕೆಯವರಿಗೆ ದೂರು ನೀಡಿದ್ದರು. ಆದರೆ ನಗರ ಪಾಲಿಕೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ನಗರ ಪಾಲಿಕೆ ವಿರುದ್ದವೂ  ನ್ಯಾಯಲಯದಲ್ಲಿ ದೂರು ದಾಖಲಿಸಿ ನ್ಯಾಯಾಲಯದಿಂದ ಮಾದಪ್ಪ ಮನೆ ಕಟ್ಟದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಈ ವಿರುದ್ದ ಮಾದಪ್ಪ ಹೈಕೋರ್ಟ್‌ ಮೊರೆ ಹೋಗಿ ಒಂದು ವೇಳೆ ನನ್ನ ವಿರುದ್ದ ಆದೇಶವಾದರೆ ಮನೆಯನ್ನು ಒಡೆಯುತ್ತೇನೆʼ ಎಂದು ನಮ್ಮ ಮಾವನಿಗೆ ಹೇಳಿದ್ದರುʼ ಎಂದು ಸಂಜಯ್‌ ದೂರಿನಲ್ಲಿ ಹೇಳಿದ್ದರು.

ಹಾಗೆಯೇ  ʼಕೊಲೆಯಾದ ನಮ್ಮ ಮಾವ ನಮಗೆ ವಿಡಿಯೋ ಕಾಲ್‌ ಮಾಡಿದಾಗ, ಮಾದಪ್ಪ ಕೊಲೆ ಬೆದರಿಕೆ ಹಾಕಿತ್ತಿರುವ ಬಗ್ಗೆ ಸಾಕಷ್ಟು ಬಾರಿ ಪ್ರಸ್ತಾಪ ಮಾಡುತ್ತಿದ್ದರು. ಈ ಬೆದರಿಕೆ ವಿಚಾರವಾಗಿ ನನ್ನ ಮಾವ ಈಗಾಗಲೇ ನನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರುʼ ಎಂದು ಉಲ್ಲೇಖಿಸಿದ್ದರು.

ಪ್ರಕರಣದ ಕುರಿತು ನವೆಂಬರ್‌ 5ರಂದು ತನಿಖೆ ಆರಂಭಿಸಿದ್ದ ಜಯಲಕ್ಷ್ಮೀ ಪುರಂನ ಪೊಲೀಸರು, ಕ್ಯಾಂಪಾಸ್‌ನಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದಾಗ ಇದೊಂದು ಕೊಲೆ ಎಂದು ಶಂಕಿಸಿದ್ದು, ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದು, ಇಂದು ಮೈಸೂರು ಪೊಲೀಸರು ಸಾವಿನ ಹಿಂದಿನ ರಹಸ್ಯವನ್ನು ಬಯಲಿಗೆಳೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿ ವಿಚಾರಣೆ  ನಡೆಸಿಸಲಾರಂಭಿಸದ್ದರು. ಈ ವೇಳೆ ಕೊಲೆ ಮಾಡಿರುವ ಹಿಂದಿನ ರಹಸ್ಯ ತಿಳಿದು ಬಂದಿದ್ದು, ಮಾದಪ್ಪನ ಪುತ್ರ ಮನು(30) ಮತ್ತು ಅವನ ಸ್ನೇಹಿತ ಅರುಣ್‌ ಗೌಡ ಬಂಧಿತ ಆರೋಪಿಗಳಾಗಿದ್ದಾರೆ.

ಪೊಲೀಸರಿಗೆ ಸ್ವಲ್ಪ ಮಟ್ಟಿಗೆ ಸುಳಿವು ಸಿಕ್ಕರೂ ಅದರ ಜಾತಕವನ್ನೇ ಇಳಿಸುತ್ತಾರೆಂಬುದಕ್ಕೆ ಮೈಸೂರು ಪೊಲೀಸರು ಸಾಕ್ಷಿಯಾಗಿದ್ದಾರೆ. ಮೊದಲಿಗೆ ಕುಲಕರ್ಣಿಯವರ ಅಳಿಯನ ದೂರಿನ ಆಧಾರದ ಮೇಲೆ ಸಿಸಿಟಿವಿ ʼಕೈ ತೋರಿಸಿ ಕುಲಕರ್ಣಿಯವರ ಜಾಗ ತೋರಿಸಿರುವʼ ಸುಳಿವಿನಿಂದ ತನಿಖೆ ಶುರು ಮಾಡಿದ ಮೈಸೂರು ಪೊಲೀಸರು ಈಗ ಕೊಲೆ ಮಾಡಿರುವುದನ್ನು ಸಾಕ್ಷಿ ಸಮೇತ ಬಯಲು ಮಾಡಿದ್ದಾರೆ.

ನವೆಂಬರ್‌ 4ರಂದು ಶುಕ್ರವಾರ ಸಂಜೆ  ಮೈಸೂರಿನ ಮಾನಸಗಂಗೋತ್ರಿ ಕ್ಯಾಂಪಾಸ್‌ನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ರಸ್ತೆಯಲ್ಲಿ ಕುಲಕರ್ಣಿಯವರು ವಾಯುವಿಹಾರ ನಡೆಸುತ್ತಿದ್ದಾಗ ಅವರಿಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಕುಲಕರ್ಣಿಯವರು ಮೃತಪಟ್ಟಿದ್ದು, ಅಪಘಾತದ ರೀತಿಯಲ್ಲಿಯೇ ಅವರನ್ನು ಕೊಲೆ ಮಾಡಲಾಗಿದೆ.

ಕಾರು ಅಪಘಾತ ಮಾಡಿದ ದೃಶ್ಯವನ್ನು ಸಿಸಿ ಕ್ಯಾಮೆರಾದಲ್ಲಿ ವೀಕ್ಷಿಸಿದ್ದು, ʼಕುಲಕರ್ಣಿ ರಸ್ತೆಯ ಪಕ್ಕದಲ್ಲಿದ್ದರೂ ಬೇಕೆಂತಲೇ ಡಿಕ್ಕಿ ಹೊಡೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆʼ ಮತ್ತು ಅಪಘಾತ ಮಾಡಿರುವ ಕಾರಿಗೆ  ನಂಬರ್‌ ಪ್ಲೇಟ್‌ ಇಲ್ಲದೆಯೇ ಚಾಣಾಕ್ಯವಾಗಿ ಕೊಲೆ ಮಾಡುವ ಯತ್ನ ಮಾಡಿರುವುದುʼ ತನಿಖೆ ವೇಳೆ ತಿಳಿದು ಬಂದಿದ್ದು, ಪ್ರಕರಣಕ್ಕೆ ಸಂಬಂಧ ಪಟ್ಟವರನ್ನು ಬಂಧಿಸಿದ್ದಾರೆ.

ಅರುಣ್‌ಗೌಡ ಮತ್ತು ಮನು ಇಬ್ಬರು ಸ್ನೇಹಿತರಾಗಿದ್ದು, ಕುಲಕರ್ಣಿಯವರ ಕೊಲೆ ಮಾಡಿ ಉಪಾಯದಿಂದ ಸಂಚು ಮಾಡಿದ್ದು, ಮನು ಅವರ ತಂದೆ ಮಾದಪ್ಪನಿಗೆ ಅಧಿಕಾರಿಯ ಹತ್ಯೆಗೆ ಮುಂದಾಗಿದ್ದರು ಎಂದು  ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ವಿಚಾರಣೆ ನಡೆಸಿದಾಗ ನಿಜಾಂಶ  ಒಪ್ಪಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page