ಮೇ ತಿಂಗಳಲ್ಲೇ ಮುಂಗಾರು ಆರಂಭದ ಸಾಧ್ಯತೆ: ಐಎಂಡಿ ಘೋಷಣೆ

ಈ ತಿಂಗಳ ಆರಂಭದಲ್ಲಿ ನೈಋತ್ಯ ಮಾನ್ಸೂನ್ ದೇಶವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ತಿಂಗಳ 13ರಂದು ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯ ಮೂಲಕ ನಿಕೋಬಾರ್ ದ್ವೀಪಗಳಿಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಘೋಷಿಸಲಾಗಿದೆ.

ಸಾಮಾನ್ಯವಾಗಿ ಜೂನ್ 1ರ ವೇಳೆಗೆ ಕೇರಳದ ಮೇಲೆ ಉತ್ತರದ ಕಡೆಗೆ ಚಲಿಸಿ ಜುಲೈ 15 ರ ವೇಳೆಗೆ ದೇಶಾದ್ಯಂತ ಹರಡುತ್ತದೆ, ಆದರೆ ಈ ವರ್ಷ ಇದು ಜೂನ್ 1 ರ ವೇಳೆಗೆ ಕೇರಳ ಕರಾವಳಿಯನ್ನು ತಲುಪಿ ಜುಲೈ 11 ರ ವೇಳೆಗೆ ದೇಶಾದ್ಯಂತ ಹರಡುವ ಸಾಧ್ಯತೆಯಿದೆಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಂದರೆ ನಿರೀಕ್ಷೆಗಿಂತ ಮೊದಲೇ. ಐಎಂಡಿ ಪ್ರಕಾರ, ಮೇ 25ರ ವೇಳೆಗೆ ಮಾನ್ಸೂನ್ ಕೇರಳ ಕರಾವಳಿಯನ್ನು ತಲುಪುವ ನಿರೀಕ್ಷೆಯಿದೆ.

Related Articles

ಇತ್ತೀಚಿನ ಸುದ್ದಿಗಳು